ಬಸಮ್ಮ weds ಗೌಡಪ್ಪ

ಬಸಮ್ಮ weds ಗೌಡಪ್ಪ

ನೋಡ್ರಲಾ ನಮ್ಮೂರ್ನಾಗೆ ಯಾರೇ ಹೆಣ್ಣು ಮಕ್ಕಳಿಗೆ ಅವಮಾನವಾದ್ರೂ ನಾವು ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕು. ಹೆಣ್ಣು ಮಕ್ಕಳನ್ನು ಸಿಲ್ಕ್ ಸ್ಮಿತಾ, ಡಿಸ್ಕೊ ಶಾಂತಿ ಮಾಡಿದಂಗೆ ಮಾಡಬೇಕು ಕಲಾ ಅಂದಾ ಗೌಡಪ್ಪ. ಏ ಥೂ  ರಾಣಿ ಚೆನ್ನಮ್ಮನ ತರಾ ಅನ್ನಿ. ಮತ್ತೆ ಸಿಲ್ಕ್ ಸ್ಮಿತಾ, ಸಾಂತಿ ಸ್ವಾತಂತ್ರ್ಯದಾಗೆ ಹೋರಾಡಿಲ್ವಾ. ಮಗಾ ಟಾಕೀಸ್ ತಳಚ್ಯಾ ನಾಯ್ಕ ಹಿಂಗೆ ಹೇಳಿಕೊಟ್ಟಾವ್ನೆ ನೋಡಲಾ ಅಂದಾ ಗೌಡಪ್ಪ. ಅದು ಬುಡಿ.  ಅಂಗೇ ಅನ್ಯಾಯ ಮಾಡಿದವರಿಗೆ ಸಿಕ್ಷೆ ನೀಡಬೇಕು ಅಂದಾ ಗೌಡಪ್ಪ. ಸರ್ಕಾರ ಅವರಿಗೆ ಶೇ.33 ಪರ್ಸೆಂಟ್ ಕೊಟ್ಟೈತೆ, ಅಂಗೇ ಮುಂದಿನ ಚುನಾವಣೆಗೆ ಸಹಾಯ ಆಯ್ತದೆ ಅಂದಾ. ಓಹ್ ಹಿಂಗೆ. ಸರಿ ಗೌಡರೆ ನೀವು ಹೇಳದು ಸರಿ ಐತೆ. ಯಾರೇ ಆದ್ರೂ ಅವರನ್ನ ಬಿಡಬಾರದು ನ್ಯಾಯ ದೊರಕಿಸಿ ಕೊಡಬೇಕು ಅಂದೆ. ಯಾರೇ ಹೆಣ್ಣು ಐಕ್ಳು ಸಣ್ಣ ಲಂಗ ಹಾಕಿದ್ರೆ ಅದನ್ನ ಬಿಚ್ಚಿಸಿ ಸೀರೆ ಉಡಿಸುವಂತಹ ಕೆಲಸವಾಗಬೇಕು.



ನೋಡ್ರಲಾ ಇವತ್ತಿಂದ "ಮಹಿಳಾ ಜಾಗೃತಿ ಸಮಿತಿ" ಅಂತಾ ಮಾಡ್ತಾ ಇದೀನಿ. ಅದ್ರಾಗೆ ಸುಬ್ಬ, ಕೋಮಲ್ಲು, ನಿಂಗ,ದೊನ್ನೆ ಸೀನ, ತರಗೆಲೆ ತಮ್ಮಯ್ಯ, ತಂತಿ ಪಕಡು ಸೀತು ಅಂಗೇ ಸಾರಾಯಿ ಸಂಭು ಎಲ್ಲಾ ಇರ್ತೀರಾ, ನಾನೇ ಅಧ್ಯಕ್ಸ ಅಂದ ಗೌಡಪ್ಪ. ಸರಿ ಗೌಡರೆ ನೀವು ದೊಡ್ಡೋರು, ನಿಮಗೆ ನಾಲ್ಕು ಕತ್ತೆಗೆ ಆಗೋವಷ್ಟು ವಯಸ್ಸಾಗೈತೆ ನಿಮ್ಮ ಮಾತು ಇಲ್ಲಾ ಅನ್ನಕ್ಕೆ ಆಯ್ತದಾ ಅಂದಾ ಸುಬ್ಬ.
ಬೆಳಗ್ಗೆ ಕೆರೆತಾವ ಹೋಯ್ತಾ ಇದ್ವಿ. ನಿಂಗನ ಅವ್ವ ಅಳೋದು ಕೇಳಿಸ್ತು. ನೋಡ್ರಲಾ ನಮ್ಮ ಕಮಿಟಿಯಲ್ಲಿ ನಿಂಗ ಇದಾನೆ. ಆದ್ರೂ ಅವರ ಅವ್ವಂಗೆ ಅವಮಾನ ಆಗೈತೆ ಅಂದ್ರೆ ಬಿಡಬಾರದು ಅಂತಾ ಎಲ್ಲಾ ಅಲ್ಲೇ ಚೊಂಬು ಎಸೆದು ಡಿಸ್ಕವರಿ ಚಾನಲ್ ನಲ್ಲಿ ಜಿಂಕೆನಾ ಎಲ್ಲಾ ಸಿಂಹಗಳು ಸುತ್ತಾಕೊಂಡು ತಿನ್ನೋ ತರಾ ನಿಂಗಂಗೆ ನಾಯಿ ಹೊಡೆದಂಗೆ ಹೊಡಿದ್ವಿ. ಅವನ ಅವ್ವಾ, ಲೇ ಹೊಡಿ ಬೇಡ್ರಲಾ ಅನ್ನೋಳು. ತಲೆ ಮೇಲೆ ಒಂದು ನಾಕು ಹಾಕ್ರಲಾ ಅನ್ನೋನು ಗೌಡಪ್ಪ, ಯಾಕ್ರಲಾ ಹೊಡಿದ್ರಿ ಅಂದಾ ನಿಂಗ. ಲೇ ನಿಮ್ಮವ್ವಂಗೆ ನೀನು ಸಾನೆ ತೊಂದರೆ ಕೊಟ್ಟಿದಿಯಾ ಅದಕ್ಕೆ ಅಳ್ತಾವ್ಳೆ ಅಲ್ಲೇನಲಾ ಅಂದಾ ಗೌಡಪ್ಪ. ಇಲ್ಲ ಕಲಾ. ಅವಳು ನಿನ್ನೆ ಸಾನೆ ಮುದ್ದೆ, ಹಂಗೇ ಹಂಜಕ್ಕಿ ತಿಂದು ಹೊಟ್ಟೆ ನೋವು ಅಂತಾ ಅಳ್ತಾ ಇದ್ಲು. ಅದಕ್ಕೆ ಬಿಸಿನೀರು ತುಪ್ಪ ತರಕ್ಕೆ ಅಡುಗೆ ಮನೆಗೆ ಹೋಯ್ತಾ ಇದ್ದೆ ಕನ್ರಲಾ ಅಂದ. ಏ ಥೂ. ಮುಂಚೆನೇ ಹೇಳಕ್ಕೆ ಏನಲಾ ಆಗಿತ್ತು. ಅಂದು ಅವರ ಮನ್ಯಾಗೆ ಚೊಂಬಿಗೆ ನೀರು ತುಂಬಿಸಿಕೊಂಡು ಬೆಳಗಿನ ಕಾರ್ಯಕ್ಕೆ ಹೊಂಟ್ವಿ. ಲೇ ಸುಮ್ನೆ ನಮ್ಮ ಕಾರ್ಯಕರ್ತನಿಗೆ ತೊಂದರೆ ಕೊಟ್ವಿ ಅಂದಾ ಗೌಡಪ್ಪ.
ಸರಿ ನೋಡಿದ್ರೆ ಒಂದು ಹತ್ತು ಹೆಣ್ಣು ಐಕ್ಳು ಸಣ್ಣ ಲಂಗ ಹಾಕ್ಕೊಂಡು ಹೋಯ್ತಾ ಇದ್ವು. ಹೋಗಿ ಎರಡು ಬಿಟ್ಟು ಸೀರೆ ಉಟ್ಕಂಡು ಹೋಗಕ್ಕೆ ಹೇಳಿದ ಸುಬ್ಬ. ಅವರ ಅಪ್ಪಂದಿರು ಬಂದು ಸುಬ್ಬಂಗೆ ಎರಡು ಬಿಟ್ಟು ಹೋದರು. ಯಾಕಲೇ ಸುಬ್ಬ. ಲೇ ಹೆಣ್ಣು ಐಕ್ಳು ಇನ್ನು ಬರೇ 6ನೇ ಕಿಲಾಸು ಅಂತೆ ಕಲಾ. ನಮ್ಮ ಹೆಂಡರಿಗೆ ಸೀರೆ ತಂದುಕೊಡಕ್ಕೆ ಆಯಕ್ಕಿಲ್ಲಾ ಅಂತಾ ನೈಟಿ ಕೊಡಿಸ್ತೀವಿ. ಇನ್ನೂ ಐಕ್ಳಿಗೆ ಸೀರೆ ಕೊಡಿಸಬೇಕೇನ್ಲಾ ಅಂತಾ ಹೊಡೆದು ಹೋದ್ರು ಕಲಾ ಅಂದಾ.
ನಿಂಗನ ಅಂಗಡಿ ತಾವ ತಣ್ಣಗೆ ಇರೋ ಕೆಟ್ಟ ಚಾ ಕುಡಿತಾ ಕೂತಿದ್ವಿ. ಪಳನಿ ಹೆಂಡ್ತಿ. ಅಳ್ತಾ ನಾ ವೀಟಕು ಪೋರೆ, ವಿಡುರಾ ಅಂತಾ ಓಡ್ತಾ ಇದ್ಲು. ಅವಳ ಹಿಂದೆ ಪಳನಿ ಕೊಂಚ ಇರು ಅಂತಿದ್ದ. ಹಾಕ್ರಲಾ ಪಳನಿಗೆ ಅಂತಿದ್ದಾಗನೇ ಲೇ ನಿಂಗನ ಅಂಗಡಿಯಿಂದ ಓಡಿ ಹೋಗಿ ಪಳನಿಗೆ ಹೊಡೆದ್ವಿ. ಮಗಾ ತಪ್ಪಿಸ್ಕಂತಾ ಇದ್ದ. ಆದ್ರೂ ಬಿಡ್ಲಿಲ್ಲ. ಅಟ್ಟಾಡಿಸಿಕೊಂಡು ಹೊಡೆದು ಮತ್ತೆ ಚಾ ಕುಡಿತಾ ಕುಂತಿದ್ವಿ. ಪಳನಿ ಹೆಂಡತಿ ಮಾರಿಯಮ್ಮ ಬಂದು ಎದುಕರಾ ಎನ್ನ ಪುರಸಂಗೆ ಅಡಕರೆ ಅಂತು. ಗೌಡಪ್ಪ ಏನಲಾ ಆ ವಮ್ಮ ಅಂದಿದ್ದು ಅಂದ. ನನ್ನ ಗಂಡಂಗೆ ಏನಿಕಿ ಹೊಡಿದ್ರಿ ಅಂತಾ ಕೇಳ್ತಾವ್ಳೆ ಅಂದ ಸುಬ್ಬ. ನಿನ್ನ ಗಂಡ ನಿಂಗೆ ತೊಂದರೆ ಕೊಟ್ಟಾವ್ನೆ ಅದಕ್ಕೆ ಅಡಕಿದಿವಿ ಅಂದಾ ಗೌಡಪ್ಪ. ಅಡಾ ಪಾವಿ. ನಮ್ಮ ಮನೇಲಿ "ಕೊಟ್ಟೈ ತಾಂಡಾಳ್" ಅಂತಾ ಹಬ್ಬ ಮಾತ್ತಾರೆ ಅದಕ್ಕೆ ಅಂತ  ನಾನು ಮನೆಗೆ ಹೋಯ್ತಾ ಇದ್ದೆ ಅದಕ್ಕೆ ಅವನು ಬೇಡಾ ಅಂತಿದ್ದ. ಅದಕ್ಕೆ ನೀವು ಹೊಡಿದ್ರಾ ಲೇ ಮವನೇ ಅಂತಾ ಗೌಡಪ್ಪನ ಮ್ಯಾಕೆ ಮಾರಿಯಮ್ಮ ಎಗರಿಕೊಂಡು ಹೋದ್ಲು. ಗೌಡಪ್ಪನ ಮೀಸೆಯ ಸಾನೇ ಕೂದಲು ಕಿತ್ತಿದ್ಲು. ಗೌಡಪ್ಪ ಒಂದು ತರಾ ಡಿಂಗ್ರಿ ನಾಗರಾಜ ಕಂಡಂಗೆ ಕಾಣೋನು. ಕಡೆಗೆ ಬಿಡಿಸಿದಿವಿ. ಆ ಕಡೆ ಪಳನಿ ಬೀದಿ ನಾಯಿ ತರಾ ರೋಡ್ನಾಗೆ ಬಿದ್ದಿದ್ದ. ನಿಂಗ ಚಿತ್ರಾನ್ನಕ್ಕೆ ಅಂತಾ ಇಟ್ಟಿದ್ದ ಅರಿಸನನೇ ಹಚ್ಚಿದ್ವಿ. ಅವತ್ತು ಬಿಳೀ ಚಿತ್ರಾನ್ನ ಮಾಡಿ ಪೆಸೆಲ್ ಅನ್ನೋನು ನಿಂಗಾ. 10ರೂಪಾಯಿ ಪ್ಲೇಟಿಗೆ.
ನೋಡ್ರಲಾ ಸುಮ್ಕೆ ಏಕ್ ಧಮ್ ಅಂಗೆಲ್ಲಾ ಹೊಡೆಬೇಡ್ರಿ. ಇನ್ ಮ್ಯಾಕೆ ವಿಚಾರ ಕೇಳಿ ಕ್ರಮ ತೆಗೆದುಕೊಳ್ಳುವಾ ಅಂದಾ. ನಿಂಗನ ಚಾ ಅಂಗಡಿ ಮುಂದೆ ಬೋಲ್ಡು ಮಡಗಿದ್ವಿ. " ಮಹಿಳಾ ಶೋಷಿತರಿಗೆ ನ್ಯಾಯ ದೊರಕಿಸಿ ಕೊಡೋ ಕೇಂದ್ರ" ಅಂತಾ. ರಾಜಮ್ಮ ರೇಸನ್ ಕಾರ್ಡ್ ತಂದು ನನ್ನ ಮಗಳನ್ನ ಸಾಲೆಗೆ ಸೇರಿಸಿ ಅಂತಾ ಬಂದಿದ್ಲು. ಅಮ್ಮೋ ಇದು ಅಂಗನವಾಡಿ ಕೇಂದ್ರ ಅಲ್ಲ ಅಂದ ನಿಂಗ. ಲೇ ಅಂಗಾರೆ ಕೇಂದ್ರ ಅಂತಾ ಹಾಕ್ ಬೇಡ್ರಲೇ ಅಂದ್ಲು ರಾಜಮ್ಮ. ಕಡೆಗೆ ಸಂಘ ಅಂತಾ ಮಾಡಿದ್ವಿ. ನಮ್ಮೂರ್ನಾಗೆ ಕುಡಿಯೋರಿಗೆಲ್ಲಾ ಸಾನೇ ಹೊಡಿತಾ ಇದ್ವಿ. ಹೊಡೆದು ಹೊಡೆದು ನಿಂಗನ ಕೈ ಅನ್ನೋದು ಬಾರಿಕೋಲು ಆದಂಗೆ ಆಗಿತ್ತು. ಕೆನ್ನೆಗೆ ಹೊಡೆದರೆ ಚಟಾರ್ ಅನ್ನೋದು. ಹೆಂಗಲಾ ಅನ್ನೋನು ಮತ್ತೊಂದು ಬಿಡೋನು. ಹಿಂಗೆ ಹೊಡೆದು ಕಿಸ್ನ ಮೂರ್ಛೆ ತಪ್ಪಿದ್ದ. ಆ ಮ್ಯಾಕೆ ಆಂಬುಲೆನ್ಸ್ ಕರೆಸಿ ಆಸ್ಪತ್ರಗೆ ಹಾಕಿದ್ವಿ. ನಿಂಗನ ಮೇಲೆ ಪಿಟಿ ಕೇಸು ಐತೆ.
ಸರಿ ಗೌಡಪ್ಪ ಒಂದು ದಿನಾ ಬೆಳಗ್ಗೆ ಸಿದ್ದೇಸನ ಗುಡಿಗೆ ಹೋಗೋ ಬೇಕಾದ್ರೆ, ಬಸಮ್ಮನ ಮನ್ಯಾಗೆ ಅಳೋ ಸವಂಡ್ ಬಂದೈತೆ. ಬಸಮ್ಮ ಹೋಗ್ ಬೇಡಲಾ ಅಂತಾ ಜೋರಾಗಿ ಕೂಗ್ತದ್ಲಂತೆ. ತಕ್ಸಣ ಗೌಡಪ್ಪ ನಮ್ಮ ಸಮಿತಿಯ ಎಲ್ಲಾ ಸದಸ್ಯರಿಗೂ ಮಿಸ್ ಕಾಲ್ ಕೊಟ್ಟ. ನಾವೆಲ್ಲಾ ಮಾಮೂಲಿಯಾಗಿ ನಿಂಗನ ಅಂಗಡಿ ತಾವ ಹೋದ್ರೆ ಗೌಡಪ್ಪ ಇಲ್ಲ. ಒಂದು ಹತ್ತು ಮಿನಿಟ್ ಆದ್ ಮೇಲೆ ಮೆಸೇಜ್ ಮಾಡ್ದ. come to sidesa gudi tava. basama. ಅಂತಾ. ನಡೀರಲಾ ಅಂದು ದೊಣ್ಣೆ ತಗೊಂಡು ಹೋದ್ವಿ. ಬಸಮ್ಮನ ಮನ್ಯಾಗೆ ಯಾವನೋ ಇದ್ದ. ಅವನಿಗೆ ಯಾವ ಮಟ್ಟಕ್ಕೆ ಹೊಡೆದಿದ್ವಿ ಅಂದ್ರೆ ತಿಂಗಳಾ ಸರ್ಕಾರದ ಪೆಸೆಲ್ ಅಂಗವಿಕಲ ಸಾವಿರ ರೂಪಾಯಿ ಪೆನ್ಸನ್ ಬರಬೇಕು. ಅಂಗೆ ಹೊಡೆದಿದ್ವಿ. ನಿಂಗ ಹೊರಗೆ ಹೋಗಿ ಗುಟ್ಕಾ ಉಗಿಯೋನು ಬಂದು ನಾಕು ಬಾರಿಸೋನು. ಏನು ಬಸಮ್ಮ ಇವನ ಅಕ್ಕ ಅನ್ಬೇಕು.
ಬಸಮ್ಮ ಅಯ್ಯೋ ನಿಮ್ಮನ್ನ ಚಾಪೆಗೆ ಸುತ್ಕಂಡು ಹೋಗ, ನಮ್ಮನೆ ಹಳೇ ಕಲಗಚ್ಚು ಹುಯ್ಯಾ, ನಮ್ಮ ಎಮ್ಮೆ ಸಗಣಿ ನಿಮ್ಮ ಮಕ್ಕೆ ಹಾಕ, ನಿಮಗೆ ದೋಸೆ ಹುಯ್ಯಾ ಅಂತಾ ಸಾನೇ ಬಯದ್ಲು. ಯಾಕವ್ವಾ. ಅವನು ನನ್ನನ್ನ ನಾಳೆ ಮದುವೆ ಆಯ್ತೀನಿ ಅಂದಿದ್ದ. ನಾನು ಇವತ್ತೇ ಆಗು ಅಂತಾ ಅಳ್ತಾ ಇದ್ದೆ ಅಂದ್ಲು. ಹಾಕ್ರಲಾ ಗೌಡಪ್ಪಂಗೆ ಅಂದಾ ಕಿಸ್ನ. ಯಾಕ್ರಲಾ, ನೀವು ಒಂದು ಹೆಣ್ಣಿಗೆ ಅನ್ಯಾಯ ಮಾಡಿದಿರಾ, ಕಾನೂನು ಎಲ್ಲಾರಿಗೂ ಒಂದೆಯಾ ಅಂದಾ ಕಟ್ಟಿಗೆ ಒಡೆಯೋ ಕಿಸ್ನ, ಗೌಡಂಗು ದಬು ದುಬು ಅಂತಾ ನಾಕು ಹಾಕಿದ್ವಿ. ನನ್ನ ಗಂಡನ್ನ ಸ್ಕ್ರಾಪ್  ಮಾಡಿದಿರಾ ನಿಮ್ಮಲ್ಲಿ ಯಾರದ್ರೂ ಮದುವೆಯಾಗ್ರಿ ಇಲ್ಲಾ ಅಂದ್ರೆ ಆಟೆಯಾ ಅಂದ್ಲು ಬಸಮ್ಮ. ನಾವೆಲ್ಲಾ ಗೌಡಪ್ಪನ ತೋರಿಸಿದ್ವಿ. ಈಗ ಗೌಡಪ್ಪಂಗೆ ನಾಕು ಹೆಂಡರು. ಲೇ ಅಂದರೆ ಏನ್ರೀ ಅಂತಾ ಎಲ್ಲಾ ಬತ್ತಾವೆ. ಆದ್ರೆ ಬಸಮ್ಮಾ ಮಾತ್ರ ಏನ್ಲಾ ಅಂತಾಳೆ.ಹಳೇ ಹೆಂಡರಿಗೆ ಗೌಡಪ್ಪನ ಚಂಗುಲಿ ವಿಸ್ಯಾ ಗೊತ್ತಿಲ್ಲ. ಅದಕ್ಕೆ ನೀ ಏನಾದ್ರೂ ಅನ್ನವ್ವ ಅಂತಾನೆ ಬಸಮ್ಮಂಗೆ.  ಬಸಮ್ಮನ ಮದುವೆ  ಮಾಡಿಸಿದ್ದಕ್ಕೆ ಕಟ್ಟಿಗೆ ಒಡೆಯೋ ಜೊತೆ ದನ ಮೇಯಿಸೋ ಕೆಲಸ ಕೊಟ್ಟಾವ್ನೆ ಕಿಸ್ನಂಗೆ. ಇವನ ಮನೆ ಪಿಂಡ ನಾಯಿ ತಿನ್ನಾ ಅಂತಾ ಗೊಣುಗ್ತಾ ಕಿಸ್ನ ಕ್ಯಾಮೆ ಮಾತ್ತಾನೆ.

Rating
No votes yet

Comments