ಮಹಾತುಂಟ
ಎಲ್ಲರಂತಲ್ಲ ಇವ ಬಲು ಮೊದ್ದು ,
ಮುದ್ದು....
ಯಾರೂ ಇಲ್ಲದಾಗ ಬಂದು ಮುದ್ದಿಸುವ
ಕದ್ದು ,ಕದ್ದು ....
ಮುಗ್ದ ಕಂಗಳ ತೆರೆದು , ಮುಖದಿ
ಮುಗುಳುನಗೆಯ ಸೂಸಿ ..
ಬರುವಾಗ ಈ ಪೋರ ಬಲು ಎಚ್ಚರ
ಮೊಸರು ಕಡೆವಾಗಲಂತೂ ಉಸಿರಾಡದೆ ಬರುವ
ಬದಿಗಿಟ್ಟ ಬೆಣ್ಣೆಯೆಲ್ಲ ಖಾಲಿ ....
ಇವಗೆ ಇದೊಂದು ಖಯಾಲಿ !
ಕಳ್ಳ ಪೋರ, ಹೃದಯ ಚೋರ
ಛಲವಿರಿಸಿ ಹಿಡಿದರೂ ಕಪಟತೆಯ
ಇವನು ಅದಕೂ ಮಾಡುವ ಮೋಡಿ
ಯಾರೂ ನಂಬರು ಇವನ ಮೇಲೆ
ಹೇಳಿದ ದೂರು ,ಚಾಡಿ .
ಗೋಪಿಕೆಯರ ಗೋಳು ನೋಡಿ
ನಕ್ಕಿತು ಸುಧಾಮ ,ಕೃಷ್ಣರ ಜೋಡಿ .
ಕಣ್ಣು ತಪ್ಪಿಸಿ ಇವನ ಬೆಣ್ಣೆ ಮಾರಲುಂಟೆ,
ಅಯ್ಯೋ ಹಾದಿ ಮದ್ಯವೇ ತಡೆವ
ಇವನ ತಂಡ ,ಮಹಾಪುಂಡ
ಸೆರಗು ಎಳೆವನು ಮೂಡಿಸಿ ಮುಖದಿ
ಮಂದಹಾಸ , ಗೋಪಿಕೆಯರು
ಹುಸಿಮುನಿಸು ತೋರಿಸಿ ಗದರುವರು
ಬೇಡ ನಿನ್ನ ಸಹವಾಸ .
ಒಳಗೊಳಗೇ ಕೊರಗುವರು ನೆನೆದು
ಯಶೋದೆಗೆ ದೊರೆತ ಲೇಸ.
ದೂರುವರು ಗೋಪಿಯರು ತಾಯೀ
ಯಶೋದೆಯ ಬಳಿ ವರ್ಣಿಸಿ
ಇವನ ಅತಿಕೆಟ್ಟ ಚಾಳಿ..
ಮಜ್ಜನಕೆ ಹೋದಾಗಲೂ ಬಿಡದೆ
ಹೊತ್ತೊಯ್ದು ಅರಿವೆಯ ಗಂಟು
ಕಾಡಿಸುವುದೂ ಉಂಟು .
ಕುಪಿತ ಯಶೋದೆ ಒಮ್ಮೊಮ್ಮೆ ಶಿಕ್ಷಿಸಿದರೂ
ಇವಗೆ ಸಾಲುವುದೇ ಹೇಳಿ
ಎಲ್ಲ ಇವನಿಂದಲೇ ಕಾಕತಾಳಿ.
ಇವನ ಆಟಕ್ಕೆ ಮಿತಿಯುಂಟೆ
ಅಬ್ಬಬ್ಬ ಕಿರುಬೆರಳಿನಲಿ ಬೆಟ್ಟವೆತ್ತಿದ,
ಆದಿಶೇಷನ ಹೆಡೆಯ ಮೆಟ್ಟಿದ ,
ಭಲಿರೆ ಬಾಯೊಳು ಬ್ರಮ್ಮಾಂಡ ತೋರಿದ
ವಿಷವುಣಿಸಿದ ಪೂತನಿಗೆ ಸಾವುಣಿಸಿದ
ಮಾವ ಕಂಸನ ಕೊಂದು, ಮಾತೆಗೆ ಬಂಧನವ ಬಿಡಿಸಿದ
ಹದಿನಾರು ಸಾವಿರ ಕನ್ಯೆಯರ ವರಿಸಿದ
ಮಹಾತುಂಟ.....
ಇವನು ತೋರಿದ ಮಹಿಮೆಗೆ
ಮಿತಿಯುಂಟ.........?
ರಾಘವೇಂದ್ರ ಆಚಾರ್