ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನು ಅವನಿಗೆ ’ ಈ ಜಾಗ ಇನ್ನು ಮುಂದೆ ನಿನಗೆ ಇಲ್ಲದಂತಾಗುವದು ’ ಎನ್ನುತ್ತಾನೆ . ಈ ಮಾತಿನ ಮರ್ಮವನ್ನು ಅರಿಯದ ಮಗು ಯಾಕೆಂದು ಕೇಳಿದಾಗ ’ನಾನು ಬಹಳ ದೂರ ಹೋಗುತ್ತಿದ್ದೇನೆ’ ಎನ್ನುತ್ತಾನೆ . ಮಗು ಸಹಜವಾಗಿ ’ ನಾನೂ ಬರುತ್ತೇನೆ ’ ಎನ್ನುವದು . ಆಗ ದುರ್ಯೋಧನನು ’ನಿಮ್ಮ ಚಿಕ್ಕಪ್ಪನನ್ನು ಕೇಳು ; ಅವನು ನಿನ್ನನ್ನೂ ಅಲ್ಲಿಗೆ ಕಳಿಸಿಯಾನು ’ ಎನ್ನುತ್ತಾನೆ . ( ಭೀಮ ಆ ಮಗುವಿಗೆ ಚಿಕ್ಕಪ್ಪ)

ಇದು ಭಾಸನ ಊರುಭಂಗದಲ್ಲೋ , ರನ್ನನ ಗದಾಯುದ್ಧದಲ್ಲೋ , ಅಥವಾ ಎರಡೂ ಕಡೆಗಳಲ್ಲಿ ಬಂದಿದೆ.

Rating
No votes yet

Comments