ಮುಂಬೈ ಮೇಲೆ ಉಗ್ರರ ಧಾಳಿ ಕುರಿತ ಹಿಂದಿ ಚಲನ ಚಿತ್ರ ಹೇಗಿದೆ ?
ದಿ ಅಟ್ಯಾಕ್ಸ್ ಆಫ್ ೨೬/೧೧-ಮುಂಬೈ
ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಹಲವು ಹಿಟ್ ಫ್ಲಾಪ್ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದವರು. ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ (ಆರ್ ಜಿ ವಿ ಫ್ಯಾಕ್ಟರಿ..!)ಮೂಲಕ ಹಲವು ನವ ನಟರು (ಅನ್ಯ ಭಾಷೆಗಳ ನಟರೂ ನಟಿಯರೂ ಸಹ -ಸುದೀಪ್-ಸೂರ್ಯ)ನಿರ್ದೇಶಕರು-ತಂತ್ರಜ್ಞರು-ಸಂಗೀತ ನಿರ್ದೇಶಕರು ಇತ್ಯಾದಿ ಪ್ರತಿಭೆಗಳನ್ನು ಕಡಿಮೆ ಖರ್ಚಲ್ಲಿ ಅಥವಾ ಫ್ರೀ ಆಗಿಯೇ ದುಡಿಸಿಕೊಂಡು ಚಿತ್ರ ನಿರ್ಮಿಸುವ ಜಾಣ ನಿರ್ದೇಶಕ..!
ತೆಲುಗಿನ ಶಿವ ಚಿತ್ರ (ಅಕ್ಕಿನೇನಿ ನಾಗಾರ್ಜುನ ನಾಯಕ)ದ ಮೂಲಕ ಅದರ ವಿಶೇಷ ರೀತಿಯ ನಿರೂಪಣೆ -ಹಸಿ ಬಿಸಿ ಹೊಡೆದಾಟಗಳ ಮೂಲಕ ಮೊದಲ ಚಿತ್ರದಿಂದಲೇ ಗಮನ ಸೆಳೆಯಲ್ಪಟ್ಟ ನಿರ್ದೇಶಕ..
ಅ ನಂತರ ಹಿಂದಿಗೆ ಜಿಗಿದು ಅಲ್ಲಿ ರಂಗೀಲ ಚಿತ್ರ (ಅಮೀರ್ ಖಾನ್ -ಉರ್ಮಿಳ)ತೆಗೆದು ದೇಶಾದ್ಯಂತ ಆ ಚಿತ್ರದ ಯಾಯಿರೆ ಯಾಯಿರೆ ಹಾಡು ಮೂಲಕ ಉರ್ಮಿಳಳನ್ನು ಏಕ್ದಂ ಸ್ಟಾರ್ ಆಫ್ ಸ್ಟಾರ್ ಮಾಡಿದವರು...
ಹಲವು ನೈಜ-ಕಾಲ್ಪನಿಕ ಘಟನೆಗಳ ಕುರಿತ ಚಿತ್ರಗಳನ್ನು ಮಾಡುತ್ತಾ ಹಲವು ಹಿಟ್ ಕೆಲವು ಫ್ಲಾಪ್ ಆಗಿ ಕೆಲವೊಮ್ಮೆ ಸತತ ಫ್ಲಾಪ್ ಚಿತ್ರಗಳ ನಂತರವೂ ಇವರ ಸಿನೆಮಗಳಲಿ ಹಣ ಹೂಡುವ ನಿರ್ಮಾಣ ಸಂಸ್ಥೆಗಳಿಗೆ ಕಮ್ಮಿ ಇಲ್ಲ...!
ಸರ್ಕಾರ್-ಸರ್ಕಾರ್ ರಾಜ್
ಭೂತ್ ಕಂಪನಿ ಸತ್ಯ ರಣ್ ರಕ್ತ ಚರಿತ್ರ ೧ -೨
ಆರ್ ಜಿ ವಿ ಆಗ್ (ಕಲ್ಟ್ ಕ್ಲಾಸ್ಸಿಕ್ ಶೋಲೆ ಚಿತ್ರವನ್ನು ಆಧುನಿಕ ರೀತಿಯಲ್ಲಿ ನಿರ್ಮಿಸಿದ್ದರು-ಅದ್ರಲ್ಲಿ ಅಮಿತಾಬ್ ಗಬ್ಬರ್ ಸಿಂಗ್ ಪಾತ್ರಧಲಿ .)
ನಾಟ್ ಎ ಲವ್ ಸ್ಟೋರಿ ಹೀಗೆ ಹಿಟ್ ಫ್ಲಾಪ್ ಚಿತ್ರ ನಿರ್ದೇಶಿಸಿ ನಿರ್ಮಿಸಿದ ಇವರು ೨೬/೧೧ ನಂತರ ತಾಜ್ ಗೆ ಭೇಟಿ ಕೊಟ್ಟಾಗಲೇ ಇವರು ಆ ಬಗ್ಗೆ ಚಿತ್ರ ನಿರ್ಮಿಸುವರು ಎಂದು ಮಾಧ್ಯಮಗಳು ಊಹಿಸಿ ಆ ಬಗ್ಗೆ ಟೀಕಿಸಿ ಬರೆದಿದ್ದರು-
ಬಹುಶ ಈ ಸಂಗತಿ ತಣ್ಣಗಾಗಲಿ ಎಂದೋ-ಆ ಚಿತ್ರದ ತಯಾರಿಗೆಂದೋ ೩ವರೆ ವರ್ಷ ಕಾದ ರಾಮ್ ಗೋಪಾಲ್ ವರ್ಮ ಹಲವು ಸಾವಿರ ಜನರ ಅಡಿಶನ್ ನಡೆಸಿ ಕೊನೆಗೆ ಸಂಜೀವ್ ಜೈಸ್ವಾಲ್ ಎಂಬ ನವ ನಟನನ್ನು ಕಸಬ್ ಪಾತ್ರಕ್ಕೆ ಆರಿಸಿ ಹೆಸರಲ್ಲಿ ಚಿತ್ರವನ್ನು ಸದ್ಧಿಲ್ಲದೆ ನಿರ್ಮಿಸಿ -ಅದೀಗ ಬಿಡುಗಡೆ ಆಗಿ ಪ್ರೇಕ್ಷಕರ ಅತಿಯಾದ ನಿರೀಕ್ಷೆ ಕಾತರತೆ ಮಟ್ಟ ತಲುಪದೇ-ವಿಫಲವಾಗಿದೆ ..
ಇನ್ನೂ ಹಲವು ತಿಂಗಳು ಶೂಟಿಂಗ್ ನಡೆಸುತ್ತಿದ್ದರೆನೋ-ಅಷ್ಟರಲ್ಲಿ ಅನಿರೀಕ್ಷಿತವಾಗಿ ಕಸಬ್ ಗಲ್ಲಿಗೆ ಏರಿದ್ದು-ಆ ಸಮಯದಲ್ಲೇ ಚಿತ್ರ ಬಿಡುಗಡೆ ಮಾಡಿ ಹಣ ಗಳಿಸಬೇಕು ಎಂಬ ಅಶೆಯೊ -ಅವಸರವಸರದಲ್ಲಿ ಹೇಗೇಗೋ ಚಿತ್ರವನ್ನು ತೆಗೆದ ಹಾಗಿದೆ..!
ನೈಜ ಘಟನೆಗಳ ಸುತ್ತ ಸುತ್ತುವ ಈ ಸಿನೆಮ ಯಾಕೆ ವಿಫಲವಾಯ್ತು?
೧.ಚಿತ್ರ ನಿರ್ಮಾಣಕ್ಕೆ ೩ ವರೆ ವರ್ಷ ಕಾದದ್ದು-ಇಂದು ನಿನ್ನೆ ನಡೆದದ್ದನ್ನೇ ಮರೆವ ಜನ ಅಂದಿನ ಅ ದುರ್ಘಟನೆ ಮರೆತಿಲ್ಲ ವಾದರೂ-ಕುತೂಹಲ -ಆಸಕ್ತಿ ಉಳಿಸಿಕೊಂಡಿಲ್ಲ ;
೨. ಬದುಕುಳಿದ ಕಸಬ್ -ಅವನ ಹೇಳಿಕೆಗಳು -ವರ್ತನಗೆಳು-ಇತ್ಯಾದಿ ಸುತ್ತ ಒಟ್ಟಿನಲ್ಲಿ ಕಸಬ್ ಸುತ್ತಲೇ ಫೋಕಸ್ ಆಗಿರುವ ಚಿತ್ರ ಕಥೆ-ನಿರೂಪಣೆ ..
(೧೦ ಜನ ಉಗ್ರರಲಿ ಮೊದಲಿಂದ ಕೊನೆವರ್ಗೆ ಹೈ ಲೈಟ್ ಆಗೋದು ಕಸಬ್ ಮಾತ್ರ ಈ ಚಿತ್ರದಲ್ಲಿ ಅವನತ್ತಲೆ ಕ್ಯಾಮೆರ ಯಾಂಗಲ್ ಸದಾ..)
೩.ವಾಂತಿ-ವಾಕರಿಕೆ ಬರಿಸುವಂತ ಸನ್ನಿವೇಶಗಳು -ದೃಶ್ಯಗಳು-(ಉಗ್ರರು ಕತ್ತು ಕುಯ್ಯುವುದು-ಗುಂಡು ಹಾರಿಸಿದಾಗ ತಲೆ ಒಡೆದು-ರಕ್ತ ಧಾರಾಕಾರವಾಗಿ ಸುರಿಯೋದು-ಸ್ಲೋ ಮೋಶನ್ ಕ್ಯಾಮೆರ ವರ್ಕ್. ಇತ್ಯಾದಿ..
೪.ಜನ ಮನ ಸೆಳೆವ ಖ್ಯಾತ ನಟ ನಟಿ -ಇರದೇ ಎಲ್ಲರೂ ಹೊಸಬರೇ ಇರುವುದು-(ಇದ್ದುದರಲ್ಲಿ ಕಸಬ್ ಪಾತ್ರಧಾರಿ ಜೈಸ್ವಾಲ್ದು ನೈಜ ರೀತಿಯ ಅಭಿನಯ-ಅಪ್ಪಿ ತಪ್ಪಿ ಕೈಗೆ ಸಿಕ್ಕರೆ ಇವನೇ ನೈಜ ಕಸಬ್ ಎಂದು ಸಾಯಿಸಿಬಿಡುವಂತ ಅಭಿನಯ..)
೫.ಉಗ್ರರು ಪಾಕಿ ಸಮುದ್ರ ಪ್ರದೇಶದಿಂದ ಭಾರತೀಯ ಸಮುದ್ರ ತೀರಕ್ಕೆ ಬರುವಲ್ಲಿನ -ನಂತರದ ಘಟನೆಗಳ ಸುತ್ತ ಕೇಂದ್ರೀಕೃತವಾಗಿರುವ ಈ ಚಿತ್ರದಲ್ಲಿ ತಾಜ್ ಹೋಟೆಲ್ ಎಂದು ಸೆಟ್ಟು ಹಾಕಿದ (೪ಕೋಟಿ ವೆಚ್ಚದಲ್ಲಿ..!)ಡೈನಿಂಗ್ ಹಾಲ್ ಜಾಗದಲ್ಲಿ ನಡೆವ ಗ್ರೆನೇಡ್ ಗುಂಡಿನ ಧಾಳಿ ಮತ್ತು ರೈಲ್ವೆ ಸ್ಟೇಶನ್-ಲಿಯೋಫಾಲ್ದ್ ಹೋಟೆಲ್ ಮೇಲಿನ -ಹಾಗೂ ಕಾಮಾ ಹಾಸ್ಪಿಟಲ್ ಧಾಳಿ ದೃಶ್ಯಗಳನ್ನು ನೋಡುವವರಿಗೆ ಅಸಹಜ ಎನ್ನಿಸುವ ರೀತಿ ಇವೆ-ಆ ಸನ್ನಿವೇಶಗಳನ್ನು ಚಿತ್ರೀಕರಿಸಿದ-ಅದರಲ್ ನಟಿಸಿದವರ ಅಭಿನಯ -ನೈಜವಾಗಿರದೆ ಅಭಿನಯ ಎನ್ನೋದು ಗೊತ್ತಾಗುತ್ತೆ..;
೬.ಖ್ಯಾತ ನಟ ನಾನ ಪಾಟೇಕರ್ -ಪೋಲೀಸ್ ಮುಖ್ಯಸ್ತ ಆಗಿ ಸಂಯಮದ ಅಭಿನಯ ನೀಡಿರುವರು-ಆದರೆ ಅವರನ್ನು ಉಪಯೋಗಿಸಿಕೊಂಡ ರೀತಿ ನೋಡಿದರೆ-ಆ ಪಾತ್ರಕ್ಕೆ ಬೇರೆ ಯಾರಾದರೂ ಆಗಬಹುದಿತ್ತು-ಅವರೇ ಯಾಕ್ ಬೇಕಿತ್ತು ಎನ್ನಿಸದೇ ಇರದು..
೭.ಮುಖ್ಯವಾಗಿ ಉಗ್ರರನ್ನು ಕೊಳ್ಳುವ ಸೆರೆ ಹಿಡಿವ -ಜನರನ್ನು ಸುರಕ್ಷಿತವಾಗಿ ಕರೆ ತರುವ ಎನ್ ಎಸ್ ಜಿ ಯೋಧರ ಕಾರ್ಯಾಚರಣೆ ದೃಶ್ಯವೇ ಚಿತ್ರದಲ್ಲಿ ಇಲ್ಲ. ಇದೆ ಮುಖ್ಯವಾಗಿ ಈ ಚಿತ್ರದ ಡ್ರಾ ಬ್ಯಾಕ್ ಅಂಶ..
ಅದಿಲ್ಲದೆ ಕೇವಲ-ನಾನಾ ಪಟೇಕರ್ ಮತ್ತು ಕಸಬ್ ಮಧ್ಯದ ಸಂಭಾಷಣೆ-ಜಿಹಾದ್ ಬಗ್ಗೆ ಭಾಷಣ -ನೀರು ಕುಡಿಯುವುದು-ಚಹಾ ಕುಡಿಯುವುದು ಇತ್ಯಾದಿ ಮಧ್ಯೆ ೨ ಘಂಟೆ ಹೋಗಿದ್ದೆ ಗೊತ್ತಾಗದೆ -ಚಿತ್ರ ಕಸಬ್ ಗಲ್ಲಿನಿಂದ ಮುಗಿಯುತ್ತದೆ.
೮.ಏನೇನೋ ನಡೆಯುತ್ತೆ - ಬರುತ್ತೆ ಈಗ ಅಗ-ಇನ್ನೇನು ಬಂತು ಎನ್ನುವ ಕಾತರಿಕೆ ಮನದ ನಮಗೆ ಇದಕಿಂತ ದೊಡ್ಡ ನಿರಾಶೆ ಬೇರೆ ಬೇಕಾ?
ಈ ಚಿತ್ರವನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು :
ಈ ಚಿತ್ರವನ್ನು ಹೀಗೆ ತೆಗೆಯುವ ಹಾಗಿದ್ದರೆ-ರಾಮ್ ಗೋಪಾಲ್ ವರ್ಮ ಯಾಕೆ? ಯಾರದರೂ ಹೊಸ ನಿರ್ದೇಶಕರೆ ತೆಗೆಯಬಹುದಿತ್ತು..;
ರಾಮ್ ಗೋಪಾಲ್ ವರ್ಮ ಹೆಸರಿಗೆ ಒಂದು ಚುಂಬಕ ಶಕ್ತಿ ಇದೆ ಅದಕ್ಕೆ ಸಾಕ್ಷಿ ಆಗಿ ಶಿವ-ಸತ್ಯ-ಕಂಪನಿ -ರಕ್ತ ಚರಿತ್ರ -ರಂಗೀಲ ಸಿನೆಮಾಗಳು ಇವೆ..
ಆ ತರಹದ ಹಿಟ್ ಚಿತ್ರಗಳ ನಿರ್ದೇಶಕ ಹೀಗೆ ಬೀಡು ಬೀಸಾಗಿ ಹೊಸಬರಂತೆ ಏನೇನೂ ಹೊಸತನ ಇಲ್ಲದ ಚಿತ್ರವನ್ನು-ಅದೂ ದೇಶವನ್ನು-ಜಗತ್ತನ್ನು ತಲ್ಲಣಗೊಳಿಸಿದ ನೈಜ ಘಟನೆ ಕುರಿತ ಚಿತ್ರವನ್ನು ಹೀಗೆ ತೆಗ್ಯೋದ?
ಛೆ ಛೆ...!
ಅದೇನೋ ಗೊತ್ತಿಲ್ಲ ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅನ್ನೋ ಗಾದೆ ಬಹುಪಾಲು ವಿಷ್ಯ ವ್ಯಕ್ತಿಗಳಿಗೆ ಸೆಟ್ ಆಗುತ್ತೆ..!
ಮಣಿ ರತ್ನಂ (ರೋಜ-ಬಾಂಬೆ-ದಿಲ್ ಸೆ-ಇರುವರ್ )-ಎಂತೆಂತ ಹಿಟ್ ಚಿತ್ರ ಕೊಟ್ಟವರು-ಜಗತ್ತಿನ ಸಿನೆಮ ಜಗತ್ತಿನ ಖ್ಯಾತನಾಮ ವ್ಯಕ್ತಿಗಳಲ್ಲಿ ಒಬ್ಬರು-ಆದರೆ ಈಗೀಗ ಅವರು ತೆಗೆದ ಯಾವೊದ್ನು ಚಿತ್ರಗಳಲ್ಲೂ ಅವರತನವಿಲ್ಲ -ಒಂಥರಾ ಹೊಸಬರ ರೀತಿಯ ಚಿತ್ರ ತೆಗೆದು ಹಿಂದೊಮ್ಮೆ ಆ ರೀತಿಯ ಚಿತ್ರ ತೆಗೆದವರು ಇವರೇನಾ ಎಂಬ ಭಾವ ಮೂಡುವ ಹಾಗೆ ಮಾಡಿದವರು..
ಇತ್ತೀಚಿನ ಅವರ ಚಿತ್ರ
'ಕಡಲ್ ' ತೋಪು ಆಗಿ ವಿತರಕರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದೇ ಅಂಶ ಇವರಿಗೆಲ್ಲ ಅನ್ವಯ ಆಗುತ್ತೆ
೧.ತೆಲುಗಿನ -ತೇಜ ಅವರು (ಚಿತ್ರಂ -ಜಯಂ-ನಿಜ೦ ಚಿತ್ರಗಳ ನಿರ್ದೇಶಕ)
೨.ಹಿಂದಿಯ ಸುಭಾಶ್ ಘಾಯ್ (ತಾಲ್-ಪರ್ದೇಶ್ -ಚಾಂದಿನಿ)
ಇದೇ ಅಂಶ ಬಹುತೇಕ ಸಂಗೀತ ನಿರ್ದೇಶಕರು -ಕಥೆಗಾರರು-ನಿರ್ಮಾಣ ಸಂಸ್ಥೆಗಳಿಗೂ ಅನ್ವಯವಾಗುತ್ತೆ..!
ಈಗೀಗ ಯಾಕೋ ನನಗೆ ಯಾವುದರ ಯಾರೊಬ್ಬರ ಬಗ್ಗೆಯಾಗಲಿ ಜಾಸ್ತಿ ನಿರೀಕ್ಷೆ-ಆಸಕ್ತಿ-ಕುತೂಹಲ ಇರೋದು ಇಟ್ಟುಕೊಳ್ಳುವುದು ತರವಲ್ಲ ಅನಿಸುತ್ತಿದೆ...!
ಈ ಸಿನೆಮಾವನ್ನು ಹೇಗೆ ತೆಗೆದಿರಬಹುದು ಎನ್ನುವ ಕೆಟ್ಟ ಕುತೂಹಲಕ್ಕಾಗಿಯಾದರೂ ಒಮ್ಮೆ ನೋಡಿ...ಮರೆತು ಬಿಡಿ..
ಚಿತ್ರ ಮೂಲಗಳು:
೭ ಮಿನಿಟ್ಸ್ ಟ್ರೇಲರ್ :
ಟ್ರೇಲರ್ :
ವಿಕಿಪೀಡಿಯ:
ಐ ಎಂ ಡಿ ಬಿ:
ಮುಂಬೈ ಮೇಲೆ ಧಾಳಿ ಕುರಿತು ಬಂದ ಇನ್ನೊಂದು ಚಿತ್ರ:
Rating
Comments
ಸಪ್ತಗಿರಿಯವರೇ,
ಸಪ್ತಗಿರಿಯವರೇ,
ಇವತ್ತು ಸಾಯಂಕಾಲವೇ ತೆಲುಗಿನ ಮಿತ್ರರೊಬ್ಬರು ೨೬/೧೧ ಚಿತ್ರ ಚೆನ್ನಾಗಿದೆ ಎಂದರೆ, ಹಾಗೆಯೇ ಸಂಪದದ ಲೇಖನಗಳನ್ನು ಓದುತ್ತಿದ್ದರೆ ನಿಮ್ಮ ಲೇಖನ ಕಣ್ಣಿಗೆ ಬಿತ್ತು. ಬಹುಶಃ ಆ ತೆಲುಗಿನ ಮಿತ್ರರು ರಾಮ್ ಗೋಪಾಲ್ ವರ್ಮಾ ಅಭಿಮಾನಿ ಇರಬೇಕು ಅದಕ್ಕೇ ಅವರು ಹಾಗೆ ಹೇಳಿದರು ಎನಿಸುತ್ತದೆ ನಿಮ್ಮ ವಿಮರ್ಶೆಯನ್ನು ಓದಿದ ಮೇಲೆ. ಆ ವರ್ಮಾ ಭಯಂಕರ ಹಠಮಾರಿ ಮನುಷ್ಯ ಅವನ ಇಂಟರ್ವ್ಯೂ ಒಂದರಲ್ಲಿ ಅವನೇ ಹೇಳಿಕೊಂಡಂತೆ ನಾನು ಜನರಿಗಾಗಿ ಸಿನಿಮಾ ತೆಗೆಯುವುದಿಲ್ಲ ನಾನು ನನಗಾಗಿ ಸಿನಿಮಾ ಮಾಡುತ್ತೇನೆ ಎನ್ನುವುದು. ಬಹುಶಃ ಅದಕ್ಕೇ ಅವನ ಬಹುತೇಕ ಸಿನಿಮಾಗಳು ಪ್ಲಾಪ್ ಆಗುತ್ತಾ ಇರುವುದು. ಯಶಸ್ವೀ ನಿರ್ದೇಶಕನಾಗ ಬೇಕಾದರೆ ಪ್ರೇಕ್ಷಕರ ನಾಡಿ ಬಲ್ಲವನಾಗಿರಬೇಕು .
ಜೀ-ರಾಮ್ ಗೋಪಾಲ್ ವರ್ಮ ಉತ್ತಮ
ಜೀ-ರಾಮ್ ಗೋಪಾಲ್ ವರ್ಮ ಉತ್ತಮ ನಿರ್ದೇಶಕ ಎನ್ನುವುದರಲಿ ಅನುಮಾನವೇ ಇಲ್ಲ.
ರಂಗೀಲ-ಶಿವ-ಕಂಪನಿ-ಸತ್ಯ-ರಕ್ತ ಚರಿತ್ರ೧-೨, ಭೂಥ್ ಇತ್ಯಾದಿ ಅದ್ಕೆ ಸಾಕ್ಷಿ ....
ವಿಭಿನ್ನ ಕಥಾ ವಸ್ತುಗಳು.ವಿಶಿಸ್ತ ನೇರ ನೇರಾ ನಿರೂಪಣೆ -ಹಸಿ ಬಿಸಿ ಸನ್ನಿವೇಶಗಳು- ಅವರ ಬಂಡವಾಳ...!!
ಆದರೆ ಯಶಸ್ಸು ಎಂಥವರನ್ನು ಗರ್ವಿ ಆಗುವಂತೆ ಮಾಡುತ್ತೆ-ಅದಕ್ಕೆ ಇವರೂ ಮತ್ತು ರತ್ನಂ -ಪ್ರಿಯ ದರ್ಶನ್(ಇವರ ಸಜ ಎ ಕಾಲಾಪಾನಿ -ಹಿಂದಿ ಚಿತ್ರ ಒಂದೇ ಸಾಕು ಅವರ ನಿರ್ದೇಶನದ ಸಾಮರ್ತ್ಯತೆ ಅರಿಯಲು) ಮುಂತಾದವರೂ ಹೊರತಲ್ಲ ಅನ್ಸುತ್ತೆ..!!!
ಹಾಗೆ ನೋಡಿದರೆ ಈ ಚಿತ್ರ (ಈ ಬರಹದ ಚತ್ರ) ಅಸ್ತೆನೂ ಕೆಟ್ಟದಾಗಿಲ್ಲ -ಆದರೆ ರಾಮ್ ಗೋಪಾಲ್ ವರ್ಮ ತರಹದ ನಿರ್ದೇಶಕರಿಂದ ನಾವ್ ಬಯಸಿದ್ ಆ ರೀತಿಯ ಸಿನೆಮ ಇದಾಗಿಲ್ಲ..;((
ಒಟ್ಟಿನಲ್ಲಿ ಅಂದು ಬದುಕುಳಿದ ಕಸಬ್ ಮೇಲೆಯೇ ಚಿತ್ರ ಜಾಸ್ತಿ ಕೇಂದ್ರೀಕೃತವಾಗಿದೆ...!!
ಕಮ್ಯಾಂಡೋ ಕಾರ್ಯಾಚರಣೆ ಸನ್ನಿವೇಶಗಳನ್ನು ಸೇರಿಸಿದ್ದಾರೆ ಖಂಡಿತ ಸುಪ್ಪರ್ ಹಿಟ್ ಆಗ್ತಿತ್ತು...
ಒಮ್ಮೆ ನೋಡಬಹ್ದು..ಆದರ್ ಎನೆನಪಲ್ಲಿ ಉಳಿಯೋ ತರಹದ ಚಿತ್ರ ಅಲ್ಲ..
ನೆನಪಲ್ಲಿ ಉಳಿಯುವ ಚಿತ್ರ ನೋಡಬೇಕು ಅಂದ್ರೆ ಈ ಚಿತ್ರಗಳನ್ನು ನೋಡಿ
೧.ಸರ್ದಾರ್ (ಸರ್ಧಾರ್ ವಲ್ಲಭ ಬಾಯ್ ಪಟೇಲ್ ಅವರ ಕುರಿತ ಚಿತ್ರ- ಪರೇಶ್ ರಾವಲ್ ಅದ್ಭುತ ಅಭಿನಯ)
೨.ಸಜಾ ಎ ಕಳಪಾನಿ- ಕಾಲಾಪಾನಿ ಶಿಕ್ಷೆ ಮತ್ತು ಅಂಡಮಾನ್ ಜೇಲ್ -ಸ್ವಾತಂತ್ರ್ಯ ಹೋರಾಟದ ಬಗ್ಗೆ ಉತ್ತಮ ಚಿತ್ರ-ಪ್ರಿಯ ದರ್ಶನ್ ನಿರ್ದೆಶನ)
೩.ಭಗತ್ ಸಿಂಗ್ ಕುರಿತ ಹಿಂದಿಯ ಎರಡು ಚಿತ್ರಗಳು (ಅಜಯ್ ದೇವಗನ್ ಅವರ ಮತ್ತು ಸನ್ನಿ ಡಿಯೋಲ್ ಅಭಿನಯದ ಬೇರೆ ಬೇರೆ ಚಿತ್ರಗಳು-ಎರಡು ಚಿತ್ರಗಳದ್ದು ದಕ್ಷ ನಿರ್ದೇಶನ )
೪.ಇರುವರ್-ಇದ್ದರು (ತಮಿಳ್-ತೆಲುಗು ) ಕರುಣಾ ನಿಧಿ-ಎಂ ಜಿ ಆರ್ ಕುರಿತ ಚಿತ್ರ-ಮಣಿ ರತ್ನಂ ನಿರ್ದೇಶನ)
೫.ಬೋಸ್ -ಎ ಫಾರ್ಗಟ್ಟ ನ್ ಹೀರೋ-ನೇತಾಜಿ ಅವರ ಕುರಿತ ಚಿತ್ರ-(ದೀರ್ಘ ಅನ್ನಿಸಿದರೂ ಸೂಪರ್ ಚಿತ್ರ)
೬.ಗಾಂಧೀ(ಆಂಗ್ಲ ಚಿತ್ರ-ಬೆನ್ ಕಿಂಗ್ಸ್ಲೆ ಗಾಂಧೀ ಆಗಿ...) ಸೂಪರ್...
>>>>ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು -ಆಗಬಹ್ದು ಎನ್ನುವ ನಿರೀಕ್ಷೆ-ಸುಳ್ಳು ಮಾಡುವ ಒಬ್ಬಿಬ್ಬ ನಿರ್ದೇಶಕರು ಇವರು :
ತಮಿಳಿನ ಶಂಕರ್(ಕಡಲನ್-ಮುದಲವನ್ -ರೊಬಾಟ್-ಶಿವಾಜಿ ನಿರ್ದೇಶಕ)
ಮತ್ತು ತೆಲುಗಿನ ರಾಜ ಮೌಳಿ (ಈಗ-ವಿಕ್ರಮಾರ್ಕುಡು -ಛತ್ರಪತಿ-ಸಿಂಹಾದ್ರಿ-ಯಮದೊಂಗ ನಿರ್ದೇಶಕ)
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ.
\।