ಮುಚ್ಚಿಟ್ಟ ಸತ್ಯ

ಮುಚ್ಚಿಟ್ಟ ಸತ್ಯ

ಕನಕನತ್ತಲೇ ತಿರುಗಿ ನಿಂತ ಕೃಷ್ಣ

ಶಬರಿಯತ್ತ ನಡೆಯುತ್ತಲೇ ಬಂದ ರಾಮ

ಅಂತ್ಯಜನ ಜೊತೆಗೆ ಇರಬಯಸುವ ಮೋಹ;

 

ಕತೆ ಕೇಳುತ್ತ ದುಃಖ ಉಮ್ಮಳಿಸಿ

ಪರಮಾತ್ಮನ ಸಮಾನತೆಗೆ ಕೈ ಮುಗಿಯುವವರಿಗೆ

ಒಳಗೇ ಮುಚ್ಚಿಟ್ಟ ಸತ್ಯ ಅರ್ಥವಾಗುವುದಿಲ್ಲ:

 

ಇದೆಲ್ಲ ಈ ವ್ಯವಸ್ಥೆಯ ಮತ್ತೊಂದು ಮುಖ-

 

ಹತ್ತಿರ ಬರಬಲ್ಲ ತಾಕತ್ತು ಇದ್ದವರಿಗೆಲ್ಲ

ಗುರಿ ಮುಟ್ಟುವ ಮೊದಲೇ ಶೈತ್ಯೋಪಚಾರ

ಮುಖ್ಯವಾಹಿನಿಯಿಂದ ದೂರದೂರಕ್ಕೇ ಇಡುವ

ಕಂದಕದ ಆಳ ಹೆಚ್ಚಿಸಿದವರ ದಿವ್ಯ ಹುನ್ನಾರ!

      *******

 

Rating
No votes yet