ಮುದ್ದಣ ಕವಿಯ ಅದ್ಭುತ ರಾಮಾಯಣದ ಸಂಗ್ರಹ 1968ರ ಮೇ ಕಸ್ತೂರಿಯಲ್ಲಿ
೧೯೬೮ರ ಮೇ ಕಸ್ತೂರಿಯಲ್ಲಿ ಮುದ್ದಣ ಕವಿಯ ಅದ್ಭುತ ರಾಮಾಯಣವು ಗದ್ಯದಲ್ಲಿ ಪುಸ್ತಕ ವಿಭಾಗದಲ್ಲಿ ಮುದ್ರಣವಾಗಿದೆ.
ಅಲ್ಲಿ ಕಂಡ ವಿಶೇಷಗಳು :
ನಾಲ್ಮೊಗ - ಚತುರ್ಮುಖ ಬ್ರಹ್ಮ
ಈರೈಮೊಗ -ರಾವಣ
ಈರೇಳ್ಗಾಲದ ವನವಾಸ - 14 ವರ್ಷದ ವನವಾಸ
ಎಲೆಮನೆ - ಪರ್ಣ ಕುಟಿ
ಹತ್ತು ತಲೆಯವನು - ದಶಕಂಠ ( ಈ ರಾವಣ ನಿಮಗೆ ಗೊತ್ತು)
ಬ್ರಹ್ಮ ಲೋಕದಲ್ಲಿ ಶತ ಕೋಟಿ ರಾಮಾಯಣಗಳು ಇವೆಯಂತೆ. ಈ ಲೋಕಕ್ಕೆ ಕೇವಲ 25 ಸಾವಿರ ರಾಮಾಯಣಗಳು ಬಂದಿವೆ ಅಂತ ಈ ಅದ್ಭುತ ರಾಮಾಯಣದಲ್ಲಿ ವಾಲ್ಮೀಕಿಗಳು ಹೇಳುತ್ತಾರೆ. ( 300 ರಾಮಾಯಣ ಎಂಬ ಪುಸ್ತಕವನ್ನು ಶ್ರೀಯುತ ಏ ಕೆ ರಾಮಾನುಜನ್ ಅವರು ಬರೆದಿರುವುದು ನಿಮಗೆ ಗೊತ್ತಿರಬಹುದು)
ಈ ಅದ್ಭುತ ರಾಮಾಯಣದ ಕಥೆ ಹೀಗಿದೆ.
ಅವನ ಅಣ್ಣ ಸಹಸ್ರಕಂಠನು - ಸಾವಿರ ತಲೆಯವನು. ಅವನಿಗೆ 2000 ಕೈಗಳು - ಅವನ ಹೆಸರೂ ರಾವಣ !
ಇವನು ಕಿರಿರಾವಣ ಆದರೆ ಅವನು ಹಿರಿರಾವಣ !
ಕಿರಿರಾವಣವನ್ನು ರಾಮನು ಕೊಂದನು . ಸೀತೆಯು ಹಿರಿರಾವಣನ ಕುರಿತು ಹೇಳಿದಾಗ ಅವನ ಮೇಲೆ ರಾಮನು ಯುದ್ಧಕ್ಕೆ ಹೋದನು.
ರಾಮಸೇನೆಯಲ್ಲಿ ಕಾಯ್ದಿಟ್ಟ
ಬಲವಾದ ದಂಡು ಯಾವುದು? ಮಲೆನಾಡಿಗರದು!
ಆ ಹಿರಿರಾವಣನು ರಾಮನನ್ನು ಕಣೆ ಕೋಲಿನಿಂದ ನೆಲದ ಮೇಲೆ ಒರಗಿಸಿದನು. ದೇವತೆಗಳು ಹಾಹಾಕಾರ ಮಾಡಿದರು. ಆಗ ಸೀತೆಯು ಮಹಾಕಾಳಿಯಾದಳು . ಸಹಸ್ರಕಂಠ ಹಿರಿ ರಾವಣನ ತಲೆಗಳನ್ನು ಎಲೆಗಳಂತೆ ಉದುರಿಸಿದಳು. ರಾಮನು ಎಚ್ಚತ್ತು ಅವಳ ಕಾಲಿಗೆ ಎರಗಿದನು.