ಮೈಸೂರು ನಗರದಲ್ಲಿ ಕಾಡಾನೆ ಮರಿಯ ಹಾವಳಿ!

ಮೈಸೂರು ನಗರದಲ್ಲಿ ಕಾಡಾನೆ ಮರಿಯ ಹಾವಳಿ!

೨೧ನೆಯ ಶತಮಾನದಲ್ಲಿ ಮೈಸೂರಿನಂತಹ ಮುಂದುವರಿದ ನಗರದಲ್ಲಿ ಕಾಡಾನೆಗಳೆರಡು ಓಡಾಡುತ್ತಾ ಗಾಬರಿಯಿಂದ ತಮಗೆ ತೋಚಿದ್ದನ್ನು ಮಾಡಿವೆ ಎಂಬ ಸುದ್ದಿ ಕೇಳಿನಿಜಕ್ಕೂ ಆಶ್ಚರ್ಯವಾಯಿತು. ನಂತರ ಯೋಚಿಸಿದರೆ, ೨೧ನೆಯ ಶತಮಾನದಲ್ಲೇ ಇಂತಹದ್ದೊಂದು ಸಾಧ್ಯ ಎಂಬ ಅರಿವಾಯಿತು. ಆನೆಗಳು ಓಡಾಡುವ ಜಾಗಗಳನ್ನೆಲ್ಲ ಕ್ರಮೇಣ ಗದ್ದೆ, ತೋಟ, ಸೈಟು ಮೊದಲಾದ ನಾಗರಿಕ ಸವಲತ್ತು ನೀಡುವ ಅನುಕೂಲ ತಾಣಗಳನ್ನಾಗಿ ಬದಲಾಯಿಸುವ ವೇಗ ಜಾಸ್ತಿ ಆಗಿರುವ ಈ ಕಾಲದಲ್ಲೇ, ಆನೆಗಳು ದಾರಿ ತಪ್ಪಿ ನಗರದೊಳಗೆ ಬರುವ ಸಾಧ್ಯತೆ ಜಾಸ್ತಿ ತಾನೆ?


 


ಮರಿ ಕಾಡಾನೆಗೆ ಜನರು ತುಂಬಾ ಕಿರಿಕ್ ಮಾಡಿದ್ದೇ ಈ ರೀತಿಯ ದಾಂಧಲೆಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜನಗಳು ಅಟ್ಟಿಸುವಂತೆ ಹಿಂಬಾಲಿಸಿದ್ದು, ಅದರಿಂದ ಆ ಕಾಡಾನೆ ಮರಿಗೆ ಕೋಪ ಬಂದು ಮನುಷ್ಯ ಮತ್ತು ಹಸುವಿನ ಮೇಲೆ ಆಕ್ರಮಣ ಮಾಡಿದೆ ಎಂದು ವರದಿಯಾಗಿದೆ . ಭಯಗೊಂಡು ಕಾಡಿನಿಂದ ನಾಡಿಗೆ, ನಗರಕ್ಕೆ ಬಂದ ಕಾಡು ಪ್ರಾಣಿಗಳನ್ನು ಜನರು ಬೆದರಿಸುವ ಒಂದು ತಿಳಿಗೇಡಿ ಅಥವಾ ಅರಿವು ಸಾಲದೆ ನಡೆಯುವ ಒಂದು ಪ್ರಕ್ರಿಯೆಯೇ ಈ ರೀತಿಯ ಅನಾಹುತಗಳಿಗೆ ನಾಂದಿ ಹಾಡುತ್ತಿರುವುದಂತೂ ಸತ್ಯ. ಈಚೆಗೆ ಹೆದ್ದಾರಿಯ ಬಳಿ ಬಂದ ಚಿರತೆಯೊಂದನ್ನು ಜನರು ಬಡಿಗೆಗಳಿಂಡ ಹೊಡೆದು ಸಾಯಿಸಿದ್ದು ಹಸಿಹಸಿ ನೆನಪಿನಲ್ಲಿರುವಾಗಲೇ (ಈ ಕುರಿತ ಚಿತ್ರ ಬರಹ ಸಹಾ ಸಂಪದದಲ್ಲಿ ಪ್ರಕಟಗೊಂಡಿದೆ), ಮೈಸೂರು ನಗರಕ್ಕೆ ನುಗ್ಗಿದ ಕಾಡಾನೆಗಳ ಪಾಡು ನಿಜಕ್ಕೂ ಎಲ್ಲರನ್ನೂ ಯೋಚನೆಗೆ ಹಚ್ಚಲೇಬೇಕು. ಈ ಕಾಡಾನೆ ಮರಿಯನ್ನು ಜನರು ಅಥವಾ ಸರಕಾರದ ಇಲಾಖೆಯವರು , ಆ ಚಿರತೆಯಂತೆ, ಕೊಂದು ಹಾಕಲಿಲ್ಲ ಎಂಬ ವಿಚಾರವೇ, ಕಾರ್ಮೋಡದಂಚಿನ ಬೆಳ್ಳಿರೇಖೆಯಂತೆ ಕಾಣುತ್ತಿದೆ.  ಚಿತ್ರಕೃಪೆ : ವಿಜಯಕರ್ನಾಟಕ

Rating
No votes yet

Comments