ಲಾಹೋರ್ ನಲ್ಲಿ ಹನುಮಂತ
ಚಿತ್ರ

ರಾಮಾಯಣದಲ್ಲಿ ನಮ್ಮೆಲ್ಲರ ಕಲ್ಪನೆಯನ್ನು ಹಿಡಿದಿಡುವ ಮಹತ್ತರ ಪಾತ್ರ ಎಂದರೆ ಹನುಮಂತನದು. ಸ್ವಾಮಿ ನಿಷ್ಠೆ ಮತ್ತು ಶೌರ್ಯಗಳ ಸಂಕೇತವಾದ ಹನುಮಾನ್ ಹಲವು ಹೆಸರುಗಳಿಂದ ನಮಗೆ ಪರಿಚಿತ. ಚಿಕ್ಕವನಿದ್ದಾಗ ನಮ್ಮ ನೆರೆಯವರೊಂದಿಗೆ ಭದ್ರಾವತಿ ಸಮೀಪದ ಸುಣ್ಣದ ಹಳ್ಳಿಯ ಆಂಜನೇಯನ ದೇವಸ್ಥಾನಕ್ಕೆ ಒಂದೆರಡು ಬಾರಿ ಭೇಟಿ ಕೊಟ್ಟು ದೇವಸ್ಥಾನದಲ್ಲಿ ನೇತು ಹಾಕಿದ್ದ ಘಂಟೆ ಬಾರಿಸಿ ಪ್ರಸಾದ ಸವಿದಿದ್ದೆ. ಭಾರತದಲ್ಲಿ ಆಂಜನೇಯನ ದೇವಸ್ಥಾನಗಳಿಗೆ ಬರವಿಲ್ಲ. ಆದರೆ ಪಾಕಿಸ್ತಾನದಲ್ಲೂ ಆಂಜನೇಯನ ಇರುವಿಕೆ ಇಂದು ನನ್ನ ಕಣ್ಣಿಗೆ ಬಿತ್ತು. ಲಾಹೋರ್ ನಗರದ ಸಂಗ್ರಹಾಲಯದಲ್ಲಿ ವಿರಾಜಮಾನ ಹನುಮಂತನ ಚಿತ್ರ ಮೇಲಿನದು.
ಚಿತ್ರ ಕೃಪೆ: ಪಾಕಿಸ್ತಾನಿ ವನಿತೆ ಮಾಹಮ್ ತಾರಿಕ್ ರವರ flikr ಖಾತೆಯಿಂದ
Rating
Comments
ಉ: ಲಾಹೋರ್ ನಲ್ಲಿ ಹನುಮಂತ
ಉ: ಲಾಹೋರ್ ನಲ್ಲಿ ಹನುಮಂತ