ವಸಂತನ ತಪ್ಪು

ವಸಂತನ ತಪ್ಪು

 ವಸಂತದಲಿಂಪಾದ ಕೋಗಿಲೆಗಳ ಗಾನ
ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ
ಅಗಲಿ ನೊಂದವರ ಜೀವವನೇ ಸೆಳೆದಾವು
ಕೇಡುಗಾಲದಲಮೃತವೂ ಆದೀತು ನಂಜು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ )

ಮಧುರಯಂ ಮಧುರೈರಪಿ ಕೋಕಿಲಾ-
ಕಲರವೈರ್ಮಲಯಸ್ಯ ಚ ವಾಯುಭಿಃ |
ವಿರಹಿಣಃ ಪ್ರಹಿಣಸ್ತಿ ಶರೀರಿಣೋಂ
ವಿಪದಿ ಹಂತ ಸುಧಾSಪಿ ವಿಷಾಯತೇ ||

-ಹಂಸಾನಂದಿ

ಕೊ: ಮೂರನೇ ಸಾಲಿನಲ್ಲಿ ಪ್ರಹಿಣಸ್ತಿ, ಪ್ರಣಿಹಂತಿ - ಹೀಗೆ ಎರಡು ಪಾಠಾಂತರಗಳು ಇದ್ದಹಾಗೆ ತೋರುತ್ತದೆ. ಹತ್ತಿರದಲ್ಲಿ ನಿಘಂಟು ಇಲ್ಲದ್ದಿಂದ, ಇದರಲ್ಲಿ ಯಾವುದು ಹೆಚ್ಚು ಸೂಕ್ತ ಎಂದು ತಿಳಿಯಲಾಗಲಿಲ್ಲ.

ಕೊ.ಕೊ: ಮಲಯಪರ್ವತದ ಗಾಳಿಯನ್ನು ನಾನು ಮಲೆನಾಡ ಗಾಳಿಯನ್ನಾಗಿ ಬದಲಾಯಿಸಿದ್ದೇನಾದರೂ, ಸಾರಾಂಶ ಅದೇ ಆಗಿದೆ. 

Rating
No votes yet