ವಿಷಾದಿಸಿದ್ದೇವೆ..

ವಿಷಾದಿಸಿದ್ದೇವೆ..

Mahatma Gandhiಸತ್ತ ನೇತಾರರಿಗಾಗಿ
ಶ್ರದ್ಧಾಂಜಲಿ ಅರ್ಪಿಸಲು ಸದಾ ಬದ್ಧರಾಗಿದ್ದೇವೆ

ಇದ್ದ ಸಾಮಾನ್ಯರಿಗಾಗಿ

ಸಮಾಧಿ ಕಟ್ಟುವವರ ಕಂಡು  ಸಿಡಿಯಲಾರದಿದ್ದೇವೆ.

ದೇಶದ ಉಳಿವಿಗಾಗಿ

ಹುತಾತ್ಮರಾದವರ

ನೆನೆ ನೆನೆದು ಕಣ್ಣೀರಿಟ್ಟಿದ್ದೇವೆ;

ನಾಡಿನ ಆಗುಹೋಗುಗಳಿಗಾಗಿ ಶ್ರಮಿಸಿ,

ಭವಿಷ್ಯನುಡಿದವರ ಮನಗಳಿಗೆ ವಂದಿಸಿದ್ದೇವೆ.

ದೇಶದೊಳಗಿನ ಭಿನ್ನತೆ-ಬೇಧಭಾವಗಳ

ತೊಲಗಿಸಲಾದಿದ್ದೇವೆ;

ಅಕ್ಕಪಕ್ಕದವರಿಗಾಗಿ ಶುದ್ಧಾಚಾರ ಹೇಳಲು

ತಪ್ಪದೇ ಮರೆಯದಿದ್ದೇವೆ;

ಸಂಸಾರದೊಳಿತಿಗಾಗಿ

ಮನೆ-ಮನದೊಳಗಿನ ಕಸ-ಕೊಳೆ

ತೆಗೆದು ತೊಳೆಯಲಾಗದಿದ್ದೇವೆ;  

ಸಾರ್ವತ್ರಿಕ ಏಳ್ಗೆಗಾಗಿ

ಆತ್ಮ-ಅರಿವುಗಳಿಗೆ “ಓ”ಗೊಟ್ಟೂ ದಿಕ್ಕು ಕಾಣದವರಿದ್ದೇವೆ.

ಹುಟ್ಟು ಪ್ರತಿಭೆಗಳಿಗೆ, ನಿಸ್ವಾರ್ಥಿ-ಸಮರ್ಥರಿಗಾಗಿ

ಸಮಾಜದಲಿ ಸ್ಥಾನಮಾನಗಳನೆ ಮೀಸಲಿಟ್ಟಿದ್ದೇವೆ;

ಹಿಂದುಳಿದ ದೀನದಲಿತರಿಗಾಗಿ

ಅವಕಾಶಗಳನೆ ಕಾಯ್ದಿರಿಸಿದ್ದೇವೆ

ಅದ್ಹೇಗೋ ಮೇಲರಗಿ ಬರುವ

ಸಮಯಸಾಧಕರಿಗಾಗಿ

ದಿನವೂ ವಿಷಾಧಿಸಿದ್ದೇವೆ.

-ಶಿವರಾಂ ಎಚ್       15 ಆಗಸ್ಟ್ , 2006

ನನ್ನ ಕವನ ಸಂಕಲನಕ್ಕೆ ಇಲ್ಲಿ ನೋಡಿ-

[http://riterlines.blogspot.com|ರೈಟರ್ ಟೈಮ್ಸ್-ಕವನಗಳು]

 

Rating
No votes yet