ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ!!!

ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ!!!

ಯಡ್ಡಿ ಸರಕಾರದ ಶೋಭೆ ಸದ್ಯವೇ ಮರಳಿ ಬರಲಿದೆಯಂತೆ


ಯಡ್ಡಿ ಮುಖದಲ್ಲೂ ಹಿಂದೆ ಇರದಿದ್ದ ಆ ನಗೆ ಕಾಣಬಹುದಂತೆ


 


ನಿತಿನ್ ಗಡ್ಕರಿ ದೆಹಲಿಯಲಿ ನೀಡಿದ್ದಾರಂತೆ ಈ ಆಶ್ವಾಸನೆ


ಇಲ್ಲಿ ಕೆಲವರ ಮುಖ ಗಂಟಾಯ್ತು ಬಂದಿದ್ದರಿಂದದರ ವಾಸನೆ


 


ಸ್ತ್ರೀ ಶಾಪದಿಂದ ವಿಮುಕ್ತಿ ಪಡೆಯಬಹುದೇ ಈ ನಮ್ಮ ಸರ್ಕಾರ


೨೦೧೦ ರ ಗಡಿದಾಟಲು ಬಿಟ್ಟೀತೇ ಅದನು ಅದರ ಆ ಗ್ರಹಚಾರ


 


ಕೋಡೀ ಮಠದ ಸ್ವಾಮಿ ಮೊನ್ನೆ ಮತ್ತೆ ನುಡಿಯಿತಂತೆ ಭವಿಷ್ಯ


ಬಿಡಿಸಲಾಗದ ಕಗ್ಗಂಟು ಯಡ್ಡಿಗಿದೆ ಎಂದು ಸಾರಿದೆ ಆ ಮನುಷ್ಯ


 


ಭವಿಷ್ಯ ಹೇಗಿದ್ದರೂ ಸರಿಯೇ ಅಡ್ಡಿಯೇ ಇಲ್ಲವಂತೆ ಈ ಯಡ್ಡಿಗೆ


ಶೋಭ ಮಂತ್ರಿಯಾಗಲೊಮ್ಮೆ ಮತ್ತಾಗಲಿ ಏನಾದರೂ ಆಚೆಗೆ


 


ಮಾಡಿದ ಪಾಪ ಪರಿಹಾರ ಆದರೆ ಸಾಕು ಅಲ್ಲಿಗೆ ಮನಶ್ಯಾಂತಿ


ನಾಡಿನ ಸಮಸ್ಯೆ ಹೇಗಿದ್ದರೇನು ಮನೆಯಲ್ಲಿರಲಿ ಸುಖ ಶಾಂತಿ


**********************************


 


- ಆಸು ಹೆಗ್ಡೆ

Rating
No votes yet