ಸರಿಯಾದ ಶಬ್ದಗಳ ಬಳಕೆ
ಶಬ್ದಗಳ ಬಳಕೆಯಲ್ಲಿ ನಮ್ಮ ಆಯ್ಕೆಯು ನಮ್ಮ ಯೋಚನೆಗಳ ಗುಣಮಟ್ಟವನ್ನು ತೋರಿಸುತ್ತದಂತೆ. ಹಾಗಾಗಿ ನಾವು ಜಾಣತನದಿಂದ ಸರಿಯಾದ ಶಬ್ದಗಳನ್ನು ಆಯ್ದುಕೊಳ್ಳಬೇಕಿದೆ.
ಸತ್ತರು ಅಂತ ಹೇಳಕೂಡದು . ಬದುಕಿ ಉಳಿಯಲಿಲ್ಲ ಅನ್ನಬೇಕು .
'ಸಾಯೋತನಕ ' ಅನ್ನಬಾರದು - ' ಇರೋತನಕ' ಅನ್ನಬೇಕು .
ಒಬ್ಬರು ಬೆಂಕಿಕಡ್ಡಿಗೆ ದೀಪದ ಕಡ್ಡಿ ಎನ್ನುವುದನ್ನು ನೋಡಿದ್ದೇನೆ.
ಕನ್ನಡದ ಬಗ್ಗೆ ಮಾತನಾಡುವಾಗ 'ಉರ್ದು/ ತಮಿಳು ಹಿನ್ನೆಲೆಯಿಂದ ' ಅನ್ನುವ ಬದಲು 'ಕನ್ನಡ ವಲ್ಲದ ಹಿನ್ನೆಲೆಯಿಂದ ' ಎನ್ನಬೇಕು .
ಇನ್ನೊಂದು ಗಮನಿಸಿದ್ದೀರಾ - ಇಂಗ್ಲೀಷಿನ moral policing ಗೆ ಪ್ರಜಾವಾಣಿಯವರು ಬಳಸುವ ಶಬ್ದ - 'ಅ'ನೈತಿಕ ಪೋಲಿಸುಗಿರಿ. ಮತ್ತೆ honour killing ಗೆ ಅವಮರ್ಯಾದೆ ಹತ್ಯೆ ಅನ್ನುತ್ತಾರೆ. ಏಕೆ ? ಗಮನಿಸಿ moral policing ನಿಜಕ್ಕೂ ಅನೈತಿಕ. ಹಾಗೆಯೇ
honour killing ನಲ್ಲಿ ಯಾವುದೇ ಮರ್ಯಾದೆ ಇಲ್ಲ. moral policing ಮತ್ತು honour killing ಇವುಗಳು ಸರಿಯಲ್ಲ. ಇವುಗಳನ್ನು ಸಮಾಜದಲ್ಲಿ ಪ್ರೋತ್ಸಾಹಿಸಕೂಡದು ಎಂಬ ತಿಳುವಳಿಕೆ ಈ ಕನ್ನಡಪದಗಳ ಬಳಕೆಯಲ್ಲಿದೆ.
ಇವತ್ತು ಪಾರ್ಲಿಮೆಂಟ್ ನಲ್ಲಿ social distancing ಶಬ್ದದ ಬದಲು Safe distancing ಅಥವಾ 6- feet distancing ಬಳಸಲು ಸೂಚಿಸಿದ್ದಾರೆ.
ಏಕೆಂದರೆ ಆ ಶಬ್ದವು ಅಸ್ಪೃಶ್ಯತೆಯನ್ನು ಸೂಚಿಸುತ್ತದೆ.
ಶಬ್ದ ಮುಖ್ಯವೋ ಅಥವಾ ಅರ್ಥ ಮುಖ್ಯವೋ - ಬೇರೊಂದು ವಿಚಾರಧಾರೆಯನ್ನು ಇನ್ನೊಂದು ದಿನ ನೋಡೋಣ.