ಸಾಮ್ರಾಟರ ಪುನರ್ಜನ್ಮ!

ಸಾಮ್ರಾಟರ ಪುನರ್ಜನ್ಮ!

ನಗೆ ಸಾಮ್ರಾಟರು ತಮ್ಮ ಜೀವನದಿಂದ ಬೇಸತ್ತು ಅತ್ಯಂತ ಗಾಢವಾದ ಆಲೋಚನೆಗಳಿಂದ ತುಂಬಿದ ನೋಟ್ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವರದಿಯನ್ನು ನೀವು ಓದಿದ್ದೀರಿ. ಆದರೆ ಅನಂತರ ಏನಾಯಿತು ಎಂಬುದು ತೀರಾ ಕುತೂಹಲಕರ. ಆತ್ಮಹತ್ಯೆ ಮಾಡಿಕೊಂಡ ಸಾಮ್ರಾಟರಿಗೆ ಮುಂದೇನಾಯಿತು ಎಂಬುದು ಬಹುದೊಡ್ಡ ಥ್ರಿಲ್ಲರ್ ಸಿನೆಮಾದ ಪ್ಲಾಟ್ ಇದ್ದ ಹಾಗಿದೆ. ಆದರೆ ಈ ಹೊತ್ತಿನ ತುರ್ತಿನ ಮಾಹಿತಿಯೆಂದರೆ ಸಾಮ್ರಾಟರು ವಾಪಸ್ಸು ಬದುಕಿ ಬಂದಿದ್ದಾರೆ!


ಹೌದು, ಸಾಮ್ರಾಟರು ಅಕ್ಷರಶಃ ಪುನರ್ಜನ್ಮವನ್ನು ಪಡೆದಿದ್ದಾರೆ. ಸಾವಿನ ದವಡೆಯಷ್ಟೇ ಅಲ್ಲ, ಅದರ ಜಠರ, ಸಣ್ಣ ಕರುಳು, ದೊಡ್ಡ ಕರುಳುಗಳನ್ನೆಲ್ಲಾ ಹೊಕ್ಕು ತಪ್ಪಿಸಿಕೊಂಡು ಹೊರಬಂದಿದ್ದಾರೆ. ನಗೆ ನಗಾರಿಯ ಕಛೇರಿಯನ್ನು ಬಂದು ತಲುಪಿದ್ದಾರೆ. ಸಾಮ್ರಾಟರ ಆಗಮನದಿಂದ ಕಿವುಚಿಕೊಳ್ಳುವ ಹಲವು ಮುಖಗಳ ನಡುವೆ ಕೆಲವು ಮುಖಗಳಾದರೂ ಅರಳುತ್ತವೆ ಎಂಬುದು ನಮ್ಮ ನಂಬಿಕೆ. ಸಾಮ್ರಾಟರ ಪುನರಾಗಮನದಿಂದ ನಗೆ ನಗಾರಿಯ ಏಕಸದಸ್ಯ ಸಿಬ್ಬಂದಿಗೆ ವಿಪರೀತ ಖುಶಿಯಾಗಿದೆ. ದೀಪಾವಳಿ ಹಬ್ಬ ಮೂರು ದಿನ ಮುಂಚಿತವಾಗಿ ಬಂದಿದೆ!


ಇಂದಿನಿಂದ ಎಂದಿನಂತೆ ನಗಾರಿಯ ಸದ್ದು ಪುನರಾರಂಭವಾಗಲಿದೆ. ಸಾಮ್ರಾಟರ ಅಪ್ಪಣೆಯ ಮೇರೆಗೆ ಅವರ ಪುನರ್ಜನ್ಮದ ರಹಸ್ಯ ಕಥಾನಕವನ್ನು ಬರೆಯಲು ಅವರ ಚೇಲ ಕುಚೇಲ ತಯಾರಾಗಿ ಕೂತಿದ್ದಾನೆ. ಸೂಕ್ತ ಸಮಯದಲ್ಲಿ ಅದು ನಗೆ ನಗಾರಿಯಲ್ಲಿ ಬೆಳಕು ಕಾಣುವುದಾಗಿ ತಿಳಿಸಲು ಹರ್ಷಿಸುತ್ತೇವೆ...

Rating
No votes yet

Comments