ಸಾವಂತಳ ತಂಡ ನರ್ತಿಸಬಹುದು ಬಿಚ್ಚಿ ಬಟ್ಟೆ ಬರೆ!!!

ಸಾವಂತಳ ತಂಡ ನರ್ತಿಸಬಹುದು ಬಿಚ್ಚಿ ಬಟ್ಟೆ ಬರೆ!!!

ರಾಜಕೀಯದಿಂದ ಈ ಮೊದಲೇ ಕುಲಗೆಟ್ಟ ಆಟ
ಕ್ರಿಕೆಟ್ಟಿಗೆ ಈಗ ನೋಡಿದರೆ ಉದ್ಯಮಿಗಳ ಕಾಟ

ಚಿಂತಿಲ್ಲ ನಮ್ಮೂರಲ್ಲಾಟ ನಡೆಯಗೊಡದಿದ್ದರೂ
ನಡೆಸಲೇ ಬೇಕೆಂಬ ಹಟ ಪರದೇಶದಲ್ಲಾದರೂ

ಆಟಗಾರರ ಮನದಿಚ್ಛೆಗೆ ಇಲ್ಲಿ ಎಳ್ಳಷ್ಟೂ ಇಲ್ಲ ಬೆಲೆ
ಬೆಲೆ ಕಟ್ಟಿ ಕೊಂಡುಕೊಂಡಾಗಿದೆ ಅವರೆಲ್ಲರ ತಲೆ

ಆಟ ಹೇಗಿದ್ದರೂ ಚಿಂತಿಲ್ಲ ಆಟ ನಡೆಯಲೇ ಬೇಕು
ಗೆಲುವು ಮುಖ್ಯ ಅಲ್ಲ ಜಾಹೀರಾತು ಭರ್ಜರಿ ಬೇಕು

ಐದು ದಿನಗಳ ಆಟ ಆಗಲೇ ದಿನವೊಂದಕ್ಕೆ ಇಳಿದಿತ್ತು
ಒಂದು ದಿನದಿಂದ ಈಗ ಎರಡು ಘಂಟೆಗೂ ಬಂತು

ಹೀಗೆಯೇ ಮುಂದುವರೆದರೆ ನಿಜಕೂ ಒಂದು ದಿನ
ಆಟ ನೋಡಲು ಬರಲೇ ಬೇಕೆಂದೇನಿಲ್ಲ ಅಲ್ಲಿ ಜನ

ನಾಣ್ಯವನು ಚಿಮ್ಮಿಸಿಯೇ ನಿರ್ಧರಿಸಿ ಬಿಡಬಹುದು
ಅಂಬಾನಿಯೋ ಮಲ್ಯನೋ ಅಲ್ಲಿ ಗೆದ್ದು ಬಿಡಬಹುದು

ಶೆಟ್ಟಿ ಶಾರೂಖ ಝಿಂಟಾ ಸೇರಿ ಚಪ್ಪಾಳೆ ತಟ್ಟಿದರೆ
ಸಾವಂತಳ ತಂಡ ನರ್ತಿಸಬಹುದು ಬಿಚ್ಚಿ ಬಟ್ಟೆ ಬರೆ

Rating
No votes yet

Comments