ಸುದ್ದಿ ಚುಟುಕಗಳು - ಎರಡು

ಸುದ್ದಿ ಚುಟುಕಗಳು - ಎರಡು

ದುರ್ಬಲ ಮುಖ್ಯಮಂತ್ರಿ ಎನಿಸಿಕೊಂಡ ಯಡ್ಯೂರಪ್ಪನವರಿಗೆ ಇನ್ಮುಂದೆ ಸುದಿನ
ಶಕ್ತಿ ನೀಡಲು ಇದ್ದಾರಲ್ಲಾ ಶೋಭಾ ಕರಂದ್ಲಾಜೆ, ವಹಿಸಿಕೊಂಡು ಖಾತೆ ಇಂಧನ!


****
ಯಡ್ಯೂರಪ್ಪನವರದು ಈ ಬಾರಿ ಅದ್ಯಾವ ಭಂಡಧೈರ್ಯವೋ ಆ ದೇವರೇ ಬಲ್ಲ
ಬಹುಷಃ ತನ್ನ ಬತ್ತಳಿಕೆಯಲ್ಲಿ ರೆಡ್ಡಿಗಳಿಗಾಗಿ ಗುಪ್ತ ಅಸ್ತ್ರ ಇಟ್ಟುಕೊಂಡಿರಬೇಕಲ್ಲಾ?


****
ಮಂತ್ರಿಗಿರಿ ಕಸಿದುಕೊಂಡ ಯಡ್ಯೂರಪ್ಪನವರು ಕುಮಾರನಂತೆ ವಚನಭ್ರಷ್ಟರಂತೆ
ಆತ್ಮಹತ್ಯೆ ಮಾಡುತ್ತೇವೆಂದು ಮಾಡದೇ ಕೂತ ಗೂಳಿಹಟ್ಟಿಯವರದ್ದು ಇನ್ನೇನಂತೆ?


****


ಕಾಂಗ್ರೇಸಿನ ಬಳ್ಳಾರೀ ಪಾದಯಾತ್ರೆ ಫಲನೀಡಿಲ್ಲ ಕಳೆದ ಉಪಚುನಾವಣೆಯಲ್ಲಿ
ಆದರೆ ಶೋಭಾ ಮಾಡಿದ ಪುಣ್ಯಕ್ಷೇತ್ರಗಳ ಯಾತ್ರೆ ಫಲನೀಡಿದೆ ನೋಡಿ ನೀವಿಲ್ಲಿ


****


ಸಿಟಿ ರವಿ ಗುಡುಗಿ ರಾಜೀನಾಮೆ ಪತ್ರ ಗೀಚಿ ಕೊಟ್ಟದ್ದೇನೋ ಸರಿಹೋಯ್ತು ಬಿಡಿ
ಆದರೆ, ರಾತ್ರಿಯಾಗುತ್ತಿದ್ದಂತೆ ಆ ಸಿಟ್ಟೆಲ್ಲಾ ಗಡ್ಡದ ಹಿಂದಡಗಿ ಹೋಯ್ತು ನೋಡಿ


****


"ಕಾಮನ್ ವೆಲ್ತ್  ಗೇಮ್ಸ್" ದಿನದಿಂದ ದಿನಕ್ಕೆ ಆದರೇನಂತೆ ಇನ್ನೂ "ಫಿಲ್ತೀ ಫಿಲ್ತೀ"
ಕಲ್ಮಾಡಿ ಮತ್ತವರ ಸಂಗಡಿಗರು ನಿರಾತಂಕವಾಗಿ ಆಗುತಿಹರಲ್ಲಾ  "ವೆಲ್ತೀ ವೆಲ್ತೀ"


****


ಸಾರ್ವಜನಿಕವಾಗಿ ಮೂತ್ರವಿಸರ್ಜನೆ ಮಾಡಿದುದೇ ಮಹಾಪರಾಧವಾಯ್ತೆಂಬರವರು
"ವಿದೇಶಿಯರಿಗೇನು ಗೊತ್ತು, ನಮ್ಮದಿಲ್ಲಿ ಎಲ್ಲವೂ ಮುಕ್ತ ಮುಕ್ತ"  ಎನ್ನುತ್ತಿರುವರಿವರು


****


ಪ್ರತ್ಯೇಕತಾವಾದಿಗಳ ಮನೆಬಾಗಿಲಿಗೆ ಹೋಗಿ ಮಾತನಾಡಿಸಿ ಮನವನರಿವ ನಾಟಕ
ಅಂಥವರನ್ನು ದಿಲ್ಲಿಗೇ ಕರೆಸಿ ಮಾತನಾಡಿ ಸಮಸ್ಯೆ ಬಗೆಹರಿಸಬೇಕಲ್ಲವೇ ಜನನಾಯಕ


***


ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments