ಹಂಬಲ
ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ
ಬಿದಿರಾಗಿ ಯಮುನೆಯ ದಡದ ಮೆಳೆಯೊಳಗೆ;
ಆ ಬಿದಿರು ಕೊಳಲಾಗಿ ಪಡೆದರೂ ಪಡೆದೀತು
ಗೋಪಕುವರನ ರನ್ನ ತುಟಿಗೊತ್ತುವಾ ಸೊಗಸು!
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ೨-೯):
ಅಪಿ ಜನುಷಿ ಪರಸ್ಮಿನ್ನಾತ್ತಪುಣ್ಯೋ ಭವೇಯಂ
ತಟ ಭುವಿ ಯಮುನಾಯಾಸ್ತಾದೃಶೋ ವಂಶನಾಳಃ |
ಅನುಭವತಿ ಯ ಏಷಶ್ಶ್ರೀಮದಾಭೀರ ಸೂನೋಃ
ಅಧರಮಣಿ ಸಮೀಪನ್ಯಾಸಧನ್ಯಾಮವಸ್ಥಾಂ ||
-ಹಂಸಾನಂದಿ
ಕೊ: ಅನುವಾದದಲ್ಲಿ ಸಲಹೆ ನೀಡಿದ, ಮತ್ತೆ ಅವರು ತೆಗೆದ ಚಿತ್ರವನ್ನು ಬಳಸಲು ಸಮ್ಮತಿಸಿದ ಗೆಳೆಯ ಶ್ರೀನಿವಾಸ್ ಪಿ ಎಸ್ ಅವರಿಗೆ ನಾನು ಆಭಾರಿ
Rating