ಹಂಬಲ

ಹಂಬಲ

 



ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ

ಬಿದಿರಾಗಿ ಯಮುನೆಯ ದಡದ ಮೆಳೆಯೊಳಗೆ;

ಆ  ಬಿದಿರು ಕೊಳಲಾಗಿ ಪಡೆದರೂ ಪಡೆದೀತು

ಗೋಪಕುವರನ ರನ್ನ ತುಟಿಗೊತ್ತುವಾ ಸೊಗಸು!

 

 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ೨-೯):



ಅಪಿ ಜನುಷಿ ಪರಸ್ಮಿನ್ನಾತ್ತಪುಣ್ಯೋ ಭವೇಯಂ

ತಟ ಭುವಿ ಯಮುನಾಯಾಸ್ತಾದೃಶೋ ವಂಶನಾಳಃ |

ಅನುಭವತಿ ಯ ಏಷಶ್ಶ್ರೀಮದಾಭೀರ ಸೂನೋಃ

ಅಧರಮಣಿ ಸಮೀಪನ್ಯಾಸಧನ್ಯಾಮವಸ್ಥಾಂ ||



-ಹಂಸಾನಂದಿ



ಕೊ: ಅನುವಾದದಲ್ಲಿ  ಸಲಹೆ ನೀಡಿದ, ಮತ್ತೆ ಅವರು ತೆಗೆದ ಚಿತ್ರವನ್ನು ಬಳಸಲು ಸಮ್ಮತಿಸಿದ ಗೆಳೆಯ ಶ್ರೀನಿವಾಸ್ ಪಿ ಎಸ್ ಅವರಿಗೆ ನಾನು ಆಭಾರಿ

Rating
No votes yet