ಹಣೆ ಬರಹ
ಆನೆ ಹಕ್ಕಿ ಹಾವುಗಳಿಗೆ ತಪ್ಪದ ಸೆರೆವಾಸ
ನೇಸರಚಂದಿರಗಿಹ ರಾಹುಕೇತುಗಳ ಕಾಟ
ಜೊತೆಗೆ ಅರಿವುಳ್ಳವರ ಬಡತನವ ನೋಡಿ
ಎನ್ನ ಮನವೆಂದಿತು "ಹಣೆ ಬರಹವೇ ಗಟ್ಟಿ"
ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)
ಗಜ ಭುಜಂಗ ವಿಹಂಗಮ ಬಂಧನಂ
ಶಶಿ ದಿವಾಕರಯೋರ್ಗ್ರಹ ಪೀಡನಂ |
ಮತಿಮತಾಂ ಚ ನಿರೀಕ್ಷ್ಯ ದರಿದ್ರತಾಂ
ವಿಧಿರಹೋ ಬಲವಾನ್ ಇತಿ ಮೇ ಮತಿಃ ||
-ಹಂಸಾನಂದಿ
Rating