chunavane

chunavane

ಬಂದಿದೆ ಮತ್ತೆ ಚುನಾವಣೆ
ಮುಂದಿರುವುದೆ ಬದಲಾವಣೆ !!

ಮತ್ತದೆ ಹಳೆಹಳೆ ರಾಗವ ಹಾಡುವ
ಚಿತ್ತದ ಕರಕರೆ ಬೇಕೇಕೆ ?
ಸಿಕ್ಕಿದೆ ಮತ್ತವಕಾಶವು ಬಿಡದೆ
ಚೊಕ್ಕ ಮಾಡಲಾಗದುದೇಕೆ ?

ಹುಡುಕುವುದಿರುವ ಭಂಟರ ಲಕ್ಷಣ
ನುಡಿಸುತ ನುಡಿ ನೆಡಿಗೆಯ ನೋಡಿ !
ಬೆದರಿಸುವಂತಹ ರೀತಿ ವಿಲಕ್ಷಣ
ಮದವಂತರನಾಚೆಗೆ ದೂಡಿ !!

ಮಾತಿಗು ಕೃತಿಗೂ ಸಾಮ್ಯತೆಯುಳ್ಳರ
ರೀತಿ ನೀತಿಗಳ ಸಂಮಾನಿಸಿರಿ !
ಖ್ಯಾತಿಗೆ ಸುಲಭೊಪಾಯವ ಬಲ್ಲರ
ಪ್ರೀತಿಯ ತುಸು ಅನುಮಾನಿಸಿರಿ !!

ಸಂದರ್ಭಕೆ ಜಾತಿಯ ಸೊಲ್ಲೆತ್ತುವ
ಮಂದಿಗಳಿಗೆ ಬಲು ಜಾಗ್ರತೆಯು !
ಮುಂದಿರಲೆಲ್ಲರ ನೀತಿಯ ಬಿತ್ತುವ
ಸುಂದರ ದಿನಗಳಿಗಾದ್ಯತೆಯು !!

ಮತದಾನವು ಹಕ್ಕಿನ ಗುರಿ ಕಾಯಕ
ಹಿತವಿದೆ ನಮ್ಮೂರಿನ ಜನಕೆ !
ಜತನವು ನೋಡುವರಿಲ್ಲ ಸಹಾಯಕ
ಮತ ಗುಪಿತದಲಿ ಸುಧಾರಣೆಗೆ !!

- ಸದಾನಂದ
. ( ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಾಳೆ ಇದೆ. )

Rating
No votes yet

Comments

Submitted by kavinagaraj Wed, 06/03/2015 - 15:03

ಉತ್ತಮ ಆಶಯ. ವಾಸ್ತವ ಕಠೋರವಾಗಿದೆ. ಸ್ಪರ್ಧಿಸಲು ಉತ್ತಮರಿಗೆ ಅವಕಾಶವೇ ಇಲ್ಲದಂತಹ ಸ್ಥಿತಿಯಿದೆ.