ಪುಸ್ತಕ ಪರಿಚಯ

ಲೇಖಕರು: Shreerama Diwana
December 10, 2020
*ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*" ಗುರುಗಳ ಗುರು ನಾರಾಯಣ" , ಪೇರೂರು ಜಾರು ಅವರು ತನ್ನದೇ ಆದ ನೂತನ ಅಯ್ನಿಲೆ ಬಂಧ ಛಂದಸ್ಸಿನಲ್ಲಿ ರಚಿಸಿದ ಮಹಾ ಕಾವ್ಯ. ಲೇಖಕರದ್ದೇ ಆದ "ತೂಟೆ ಪ್ರಕಟನಾಲಯ" , ಅಂಗಡಿ ಮನೆ, ಪೇರೂರು - 576213, ಉಡುಪಿ ಜಿಲ್ಲೆ" ಕೃತಿಯನ್ನು ಪ್ರಕಾಶಿಸಿದೆ. 2018ರಲ್ಲಿ ಪ್ರಕಟವಾದ 216 + 4 ಪುಟಗಳ ಕೃತಿಯ ಬೆಲೆ 150 ರೂಪಾಯಿ. "ಗುರುಗಳ ಗುರು ನಾರಾಯಣ"ದಲ್ಲಿ ಕವಿ ಪೇರೂರು ಜಾರು ಅವರ 'ಮೊದಲ ಮಾತು' ಮತ್ತು ಜಾರು ಅವರೇ ಆವಿಷ್ಕರಿಸಿದ ಹೊಸದಾದ  "…
ಲೇಖಕರು: Ashwin Rao K P
December 07, 2020
ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ ಹಾಗೂ ಕಮ್ಯೂನಿಷ್ಟರಂತೆ ‘ಜಾತ್ಯಾತೀತವಾದ' ಎಂಬುದು ಹಿಂದೂಗಳ ಶತ್ರುವಾಗಿ ರೂಪುಗೊಳ್ಳುತ್ತಿರುವ ಹೊಸದಾದ ಮತ. ನಾಸ್ತಿಕವಾದವೆಂದು ಹೇಳಿಕೊಂಡರೂ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದೇ ಈ ನವಮತದ ಧ್ಯೇಯವಾಗಿದೆ. ಸತ್ಯ ಅರಿಯದೆ ಆ ಮತವನ್ನು ಸೇರಿರುವ ಅನೇಕರು ನಮ್ಮ…
ಲೇಖಕರು: addoor
December 04, 2020
ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ. “ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "ನಾಳೆ" ಎಂಬುದು ನಮಗಿದೆಯೇ? ಸಾವಿನ ಭಯದಲ್ಲಿ ಇವರು (ಅಧ್ಯಾಯದಲ್ಲಿ ಉಲ್ಲೇಖಿಸಿದ ಕ್ಯಾನ್ಸರ್ ಪೀಡಿತರು) ಬದುಕು ಬಿಟ್ಟವರಲ್ಲ. ಆದರೆ ಸಾವಿನ ನಿರ್ಭಯದಲ್ಲಿ ಬದುಕದವರುಂಟು. ನನ್ನ ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು ಕ್ಯಾನ್ಸರಿಗೆ ಕಾಯಬೇಕೇ?…
1
ಲೇಖಕರು: Ashwin Rao K P
December 04, 2020
ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ. ಇವರು ಸಹಲೇಖಕಿಯಾಗಿ ರಚಿಸಿದ ‘ಮನೆಯಂಗಳದಲ್ಲಿ ಔಷಧಿವನ' ಪುಸ್ತಕ ಹಲವಾರು ಮುದ್ರಣಗಳನ್ನು ಕಂಡಿದ್ದು, ಈ ಕೃತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ‘ಶ್ರೇಷ್ಟ ಲೇಖಕಿ' ಪುರಸ್ಕಾರ ದೊರೆತಿದೆ.  ಪ್ರಾಚೀನ ಕಾಲದಿಂದಲೂ ಭಾರತದ ಸಂಬಾರ…
ಲೇಖಕರು: Ashwin Rao K P
December 01, 2020
ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರಸನಿಮಿಷಗಳು ಈ ಪುಸ್ತಕದಲ್ಲೂ ಮುಂದುವರೆದಿದೆ. ಈ ಸರಣಿ ಪುಸ್ತಕಗಳನ್ನು ಓದುತ್ತಾ ಓದುತ್ತಾ ಮಲೆನಾಡು ಇನ್ನಷ್ಟು ಆಪ್ತವಾಗುತ್ತಾ ಹೋಗುತ್ತದೆ. ರೋಚಕತೆ ಪ್ರತಿಯೊಂದು ಘಟ್ಟದಲ್ಲೂ ಕಂಡು ಬರುತ್ತದೆ. ಮಲೆನಾಡಿನ ಮರೆಯದ ನೆನಪುಗಳು ಪುಸ್ತಕವನ್ನು ಲೇಖಕರು ಕಥನ ಸಂಗ್ರಹ ಎಂದು…
ಲೇಖಕರು: Ashwin Rao K P
November 28, 2020
ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ ಎನ್ನುವುದು ವಿಠಲ್ ಶೆಣೈ ಅವರ ಬರಹದ ವಿಶೇಷತೆ. ಸರಳವಾದ ವಾಕ್ಯಗಳು, ನಮಗೆ ಗೊತ್ತಿರುವ ಸುಲಭ ಪದಗಳು, ನಮ್ಮ ಸುತ್ತ ಮುತ್ತಲಿನಲ್ಲೇ ನಡೆಯುವಂಥಹ ಕಥಾ ಹಂದರ ಇವು ಈ ಕಥೆಗಳಿಗೆ ವಿಶೇಷ ಮೆರುಗನ್ನು ನೀಡಿವೆ.  ವಿಠಲ್ ಶೆಣೈ ಅವರು ‘…