ಪುಸ್ತಕ ಪರಿಚಯ
ಲೇಖಕರು: Shreerama Diwana
November 26, 2020

*ಅಂಶುಮಾಲಿ ಅವರ ತುಳು ನಾಟಕ "ಅಗೊಳಿ ಮಂಞಣೆ ಬೀಮೆ"*
" ಅಗೊಳಿ ಮಂಞಣೆ ಬೀಮೆ", ಅಂಶುಮಾಲಿಯವರು ಸುಮಾರು 1980 - 81ರಲ್ಲಿ ರಚಿಸಿದ ಮತ್ತು 1985ರಲ್ಲಿ ಮಂಗಳೂರಿನ "ತುಳು ಕೂಟ" ನಡೆಸಿದ "ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ್ಪರ್ಧೆ" ಯಲ್ಲಿ ತೃತೀಯ ಬಹುಮಾನ ಪಡೆದ ನಾಟಕ. ಇದನ್ನು ನಾಲ್ಕು ದಶಕಗಳ ಬಳಿಕ ಉಡುಪಿಯ "ತುಳು ಕೂಟ" ಪ್ರಕಾಶಿಸಿದೆ. 88 ಪುಟಗಳ ಕೃತಿಯ ಬೆಲೆ ನೂರು ರೂಪಾಯಿ.
ಕೃತಿಯಲ್ಲಿ ಅಂಶುಮಾಲಿಯವರ "ಸೊಲ್ಮೆಲು", ಸೀತಾರಾಮ ಹೆಗ್ಡೆಯವರು ಅಂಶುಮಾಲಿಯವರಿಗೆ…
ಲೇಖಕರು: Ashwin Rao K P
November 24, 2020

ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಅವರು ಕನ್ನಡ ಕಾವ್ಯಲೋಕದ ನೆಲದನಿಯ ಸಂವೇದನೆ. ಅವರ ಕಾವ್ಯಕಾರಣದ ದೇಸಿ ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಕಾವ್ಯ ತೆನೆಯನ್ನು ಸದಾ ಹಸಿರಾಗಿಡುವುದರಲ್ಲಿ ಸಾವಯವ ಸಂಬಂಧವನ್ನು ಹೊಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಸಿದ್ಧರಾಮಯ್ಯನವರು ರಾಜ್ಯದ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕವನ, ನಾಟಕ, ವಿಮರ್ಶೆ…
ಲೇಖಕರು: Ashwin Rao K P
November 21, 2020

ಪಿಂಚ್ ಆಫ್ ಪ್ರಪಂಚ ಪುಸ್ತಕವು ರಂಗಸ್ವಾಮಿ ಮೂಕನಹಳ್ಳಿ ಇವರ ಒಂಬತ್ತನೇ ಪ್ರಕಟಿತ ಪುಸ್ತಕ. ತುಮಕೂರು ಜಿಲ್ಲೆಯ ಸಿರಾದಲ್ಲಿ ಇವರ ಜನನ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಿರಾ ಮತ್ತು ಬೆಂಗಳೂರಿನಲ್ಲಿ. ಇಪ್ಪತ್ತಮೂರನೆಯ ವಯಸ್ಸಿಗೆ ದುಬಾಯಿ ಪ್ರಯಾಣ. ನಂತರ ಕೈಬೀಸಿ ಕರೆದದ್ದು ಬಾರ್ಸಿಲೋನಾ. ಇಂಗ್ಲೆಂಡ್ ನ ಇನ್ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿ. ಇದುವರೆಗೆ ಅರವತ್ತು ದೇಶಗಳ ಪ್ರಯಾಣ, ಪ್ರವಾಸ. ಆ ದೇಶಗಳ ಆರ್ಥಿಕ ಸ್ಥಿತಿಗತಿ…
ಲೇಖಕರು: Shreerama Diwana
November 19, 2020

*ಡಾ. ಜಿ. ಭಾಸ್ಕರ ಮಯ್ಯ ಅವರ "1857 ಭಾರತದ ಪ್ರಥಮ ಮಹಾಸಂಚಲನದಲ್ಲಿ ವಿಷ್ಣು ಭಟ್ಟ ಗೋಡ್ಸೆಯ 'ನನ್ನ ಪ್ರವಾಸ' ಮಾಝಾ ಪ್ರವಾಸ"*
ಡಾ. ಜಿ. ಭಾಸ್ಕರ ಮಯ್ಯ ಅವರು ಅನುವಾದಿಸಿದ ವಿಷ್ಣು ಭಟ್ಟ ಗೋಡ್ಸೆಯವರ "ನನ್ನ ಪ್ರವಾಸ" ಅಥವಾ "ಮಾಝಾ ಪ್ರವಾಸ" 2018ರಲ್ಲಿ ಮುದ್ರಣವಾದ 256 ಪುಟಗಳ ಕೃತಿ. 200 ರೂಪಾಯಿ ಬೆಲೆಯ ಕೃತಿಯನ್ನು ಅನುವಾದಕರಾದ ಭಾಸ್ಕರ ಮಯ್ಯರವರೇ ತಮ್ಮ "ಜನವಾದಿ ಪ್ರಕಾಶನ, ಗುಂಡ್ಮಿ, ಕುಂದಾಪುರ - 576226" ಮೂಲಕ ಪ್ರಕಟಿಸಿದ್ದಾರೆ.
ಮುಂಬೈನ ಕುಲಾಬಾ ಜಿಲ್ಲೆಯ ಪೇಣ ತಾಲೂಕಿನ ವರಸಯಿ…
ಲೇಖಕರು: Ashwin Rao K P
November 16, 2020

ಹುಣಸೆ ಮರದ ದೆವ್ವ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ…
ಲೇಖಕರು: Shreerama Diwana
November 12, 2020

ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ"
"ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ", ಆಚಾರ್ಯರ ಪತ್ನಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ವಾಣಿ ಬಿ. ಆಚಾರ್ಯ ಹಾಗೂ ಇವರ ಮಕ್ಕಳಾದ ಗುರುಚರಣ ಆಚಾರ್ಯ, ಶ್ರೀಮತಿ ಪಲ್ಲವಿ ಪಿ. ಭಟ್ ಇವರು ಸಂಪಾದಿಸಿ ತಮ್ಮದೇ ಆದ ಉಡುಪಿಯ 'ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ- 576118' ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸಿದ ಹಲವು ಸಿದ್ಧಿಗಳ ಸಾಧಕರಾದ ಕೆ. ಬಾಲಕೃಷ್ಣ ಆಚಾರ್ಯರ ಬದುಕು, ಬರಹಗಳು ಮತ್ತು…