ಪುಸ್ತಕ ಪರಿಚಯ

ಲೇಖಕರು: Shreerama Diwana
December 24, 2020
*ಡಾ. ರಘುಪತಿ ಕೆಮ್ತೂರು (ಆರ್.ಕೆ. ಮಣಿಪಾಲ್) ಅವರ "ತುಳುನಾಡಿನ ಸ್ಥಳನಾಮಾಧ್ಯಯನ"* ನಿವೃತ್ತ ಪ್ರಾಂಶುಪಾಲರೂ, ಖ್ಯಾತ ವಿಮರ್ಶಕರೂ, ಸಂಶೋಧಕರೂ ಆದ ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್, 7 - 2 - 105 ಎ 5, "ಪುದರ್", ಹರಿಶ್ಚಂದ್ರ ಮಾರ್ಗ, ಉಡುಪಿ- 576101) ಇವರು 1980ರಲ್ಲಿ ರಚಿಸಿದ ಸಂಶೋಧನಾ ಗ್ರಂಥ "ತುಳುನಾಡಿನ ಸ್ಥಳನಾಮಾಧ್ಯಯನ". ಈ ಮಹಾ ಸಂಶೋಧನಾ ಪ್ರಬಂಧಕ್ಕಾಗಿ ಮೈಸೂರು ವಿ.ವಿ.ಯು 1981ರಲ್ಲಿ ಡಾ. ರಘುಪತಿ ಕೆಮ್ತೂರು ಅವರಿಗೆ ಪಿಎಚ್.ಡಿ ಪದವಿಯನ್ನು ನೀಡಿತು. ತುಳುನಾಡಿನ…
ಲೇಖಕರು: Ashwin Rao K P
December 22, 2020
ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ ಇರುತ್ತವೆ. ಅವರೇ ಹೇಳುವಂತೆ ‘ಇನ್ನು ಸಣ್ಣ ಕಥೆಗಳನ್ನು ಬರೆಯಬಾರದು ಎಂಬ ಬಹುದಿನದ ನಿರ್ಧಾರ ಕರಗಿದ ನಂತರ ಹುಟ್ಟಿದ ಕಥೆಗಳು ಇವು. ಸಣ್ಣ ಕಥೆಗಳ ದೊಡ್ಡ ಸಮಸ್ಯೆ ಇದು: ಅವು ಪುಟಗಳ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಒಂದು ಕಾದಂಬರಿಯ ಆತ್ಮವನ್ನೇ…
ಲೇಖಕರು: Ashwin Rao K P
December 19, 2020
ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾಯಿಲೆಗಳಿಗೂ ಈ ಆಹಾರಗಳು ಔಷಧ. ಅವುಗಳ ಪರಿಚಯ. ನಿಮ್ಮ ಮಕ್ಕಳಿಗೆ ಈ ವಿಷಯುಕ್ತ ಆಹಾರವನ್ನು ಕೊಡಬೇಡಿ. ನೀವೂ ತಿನ್ನಬೇಡಿ. ಭಯಾನಕ ಕಾಯಿಲೆಗಳು ಬರುತ್ತವೆ. ಹತ್ತು ವರ್ಷದ ಮಕ್ಕಳಿಗೆ ಡಯಾಬೀಟೀಸ್, ಬೇಗ ಮುಟ್ಟಾಗಲು ಕಾರಣವೇನು? ಡಯಾಬಿಟೀಸ್, ಹೃದಯ…
ಲೇಖಕರು: Shreerama Diwana
December 17, 2020
*ಹಳೆಕೋಟೆ ಸುಂದರ ಬಂಗೇರಾ ಅವರು ಸಂಪಾದಿಸಿದ ಕವನ ಸಂಕಲನ "ಹದ್ದಿನ ಕವನ"* ಇಪ್ಪತ್ತಮೂರು ಮಂದಿ ಕವಿಗಳ ಇಪ್ಪತ್ತೇಳು ಕವನಗಳಿರುವ ಸಂಕಲನ " ಹದ್ದಿನ ಕವನ". ಕವಿ, ಪತ್ರಕರ್ತ ಹಳೆಕೋಟೆ ಸುಂದರ ಬಂಗೇರಾ ಅವರು ಸಂಕಲನವನ್ನು ಸಂಪಾದಿಸಿದ್ದಾರೆ. ಈಗಲ್ ಪ್ರಕಾಶನ, ಕೆ. ಎಂ. ರಸ್ತೆ, ಬಿಳಗುಳ, ಹೆಸಗಲ್ ಅಂಚೆ, ಮೂಡಿಗೆರೆ- 577 132, ಚಿಕ್ಕಮಗಳೂರು ಜಿಲ್ಲೆ ಸಂಸ್ಥೆಯು 2019 ರಲ್ಲಿ ಪ್ರಕಾಶಿಸಿದ ಸಂಕಲನದಲ್ಲಿ 44 + 4 ಪುಟಗಳಿದ್ದು, ಬೆಲೆ 70 ರೂಪಾಯಿ. ಸಂಕಲನದ 23 ಮಂದಿ ಕವಿಗಳಲ್ಲಿ ಒಬ್ಬರಾಗಿರುವ,…
ಲೇಖಕರು: Ashwin Rao K P
December 15, 2020
ಕನ್ನಡದ ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯ ಲೇಖನಿಯಿಂದ ಮೂಡಿ ಬಂದ ‘ಆತ್ಮ' ಕಾದಂಬರಿ ನಿಜಕ್ಕೂ ಕುತೂಹಲಕಾರಿ ಕಥಾ ಹಂದರವನ್ನು ಹೊಂದಿದೆ. ಬೆಳಗೆರೆಯವರೇ ಹೇಳುವಂತೆ ಇದು ವರ್ಷಗಟ್ಟಲೆ ಕಾದು ಕುಳಿತ ಕಾದಂಬರಿಯಂತೆ. ಇದರ ಕೆಲವು ಭಾಗಗಳು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಮೂಡಿಬಂದು ಓದುಗರ ಆಸಕ್ತಿಯನ್ನು ಕೆರಳಿಸಿದ್ದವು. ಪ್ರತೀ ವಾರ ‘ಮುಂದೇನಾಗುತ್ತೆ' ಎಂದು ಕೇಳುವಂತೆ ಮಾಡಿದ್ದವು. ಕೆಲವರಂತೂ ಹೀಗೆ ಕಂತು ಕಂತುಗಳಲ್ಲಿ ಓದಲು ಪ್ರಾರಂಭಿಸಿದರೆ ಈ ಘಟನೆಗಳೆಲ್ಲಾ ನಮ್ಮ ಜೀವನದಲ್ಲಿ…
ಲೇಖಕರು: Ashwin Rao K P
December 12, 2020
ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಯೋಜನೆಯ ಅಡಿಯಲ್ಲಿ ಪ್ರಕಟಿಸಿದ ೨೪೮ನೇ ಕುಸುಮ. ಈ ಕೃತಿಯನ್ನು ಪತ್ರಕರ್ತರೇ ಆಗಿರುವ ಉಡುಪಿಯ ಶ್ರೀರಾಮ ದಿವಾಣ ಇವರು ಬರೆದಿದ್ದಾರೆ. ಪುಸ್ತಕ ಸಣ್ಣದಾಗಿದ್ದರೂ ನವೀನಚಂದ್ರ ಪಾಲ್ ಅವರ ಸಾಧನೆ ಸಣ್ಣದಲ್ಲ.  ಪುಸ್ತಕದ ಬೆನ್ನುಡಿಯಲ್ಲಿ ಲೇಖಕ, ವಿಮರ್ಶಕ…