ಪುಸ್ತಕ ಪರಿಚಯ
ಲೇಖಕರು: Ashwin Rao K P
February 03, 2021

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ. ಹಲವಾರು ಮಹಾನ್ ಕವಿಗಳ ಅತ್ಯಮೂಲ್ಯ ಕವನಗಳು ಈ ಪುಸ್ತಕದಲ್ಲಿವೆ.
ಇಲ್ಲಿರುವ ಕವಿಗಳ…
ಲೇಖಕರು: Ashwin Rao K P
February 02, 2021

ಖ್ಯಾತ ಮಲಯಾಳಂ ನಾಟಕಕಾರರಾದ ದಿ.ಕೆ.ಟಿ.ಮುಹಮ್ಮದ್ ಅವರ ‘ಸಂಹಾರಂ’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ರಂಗಕರ್ಮಿ, ಚಿತ್ರ ನಟರಾದ ಕಾಸರಗೋಡು ಚಿನ್ನಾ ಅವರು. ಈ ಪುಟ್ಟ ನಾಟಕದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ನಟ-ನಿರ್ದೇಶಕರಾದ ಟಿ.ಎಸ್. ನಾಗಾಭರಣ ಇವರು. ಅವರ ಪ್ರಕಾರ ‘ನಟ, ನಿರ್ದೇಶಕ, ಅನುವಾದಕ ಕಾಸರಗೋಡು ಚಿನ್ನಾ ಕನ್ನಡ, ಕೊಂಕಣಿ, ತುಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಪರಿಶ್ರಮವಿರುವವರು. ಹೀಗಾಗಿ ಬಳಸಿರುವ ಪದಗುಚ್ಚಗಳು, ನುಡಿಕಟ್ಟುಗಳು ಪ್ರಸ್ತುತ ಮತ್ತು…
ಲೇಖಕರು: Ashwin Rao K P
January 30, 2021

ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಇವರ ಬಗ್ಗೆ ಅನಂತಮೂರ್ತಿಯವರು ಹೀಗೆ ಬರೆಯುತ್ತಾರೆ ‘ನಾಗತಿಹಳ್ಳಿ ನನ್ನ ಸಮಕಾಲೀನರಿಂದ ಕಲಿತವರಾಗಿದ್ದೂ ನವ್ಯವನ್ನು ದಾಟಿದವರು ; ಬಂಡಾಯ ಚಳುವಳಿಯಿಂದ ಪ್ರಭಾವಿತರಾಗಿದ್ದೂ ಅದನ್ನು ಮೀರಿದವರು. ನಾನು ತುಂಬಾ ಇಷ್ಟ ಪಡುವ ಈಚಿನ…
ಲೇಖಕರು: Shreerama Diwana
January 28, 2021

*ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"*
"ಭಾವತರಂಗ" , ಎಂ. ಎಸ್. ನಾಗರಾಜ್, ಮೂಡಿಗೆರೆ ಇವರ 2017ರಲ್ಲಿ ಪ್ರಕಟವಾದ ಹನಿಗವನ ಸಂಕಲನ. 60 ಪುಟಗಳ, 70 ರೂಪಾಯಿ ಬೆಲೆಯ ಸಂಕಲನವನ್ನು ಕವಿ ನಾಗರಾಜ್ ಅವರೇ ತಮ್ಮ ಅಭಿನವ ಪ್ರಕಾಶನ, ಮಾರ್ಕೆಟ್ ರಸ್ತೆ, ಮೂಡಿಗೆರೆ- 577132, ಚಿಕ್ಕಮಗಳೂರು ಜಿಲ್ಲೆ ಮೂಲಕ ಪ್ರಕಟಿಸಿದ್ದಾರೆ.
ಸಂಕಲನಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕಳಸಾಪುರ ಇಲ್ಲಿನ ಪ್ರಾಚಾರ್ಯರಾದ ಎಚ್. ಎಂ. ನಾಗರಾಜ ರಾವ್ ಕಲ್ಕಟ್ಟೆ ಅವರ ಮುನ್ನುಡಿ ಮತ್ತು ಸಾಹಿತಿ ಮೂಡಿಗೆರೆಯ…
ಲೇಖಕರು: Ashwin Rao K P
January 26, 2021

‘ಇಡ್ಲಿ, ಆರ್ಕಿಡ್ ಆಣಿ ಮಿ' ಎಂಬ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ಬರೆದವರು ಭಾರತದ ಖ್ಯಾತ ಹೋಟೇಲ್ ಉದ್ಯಮಿ ವಿಠಲ ವೆಂಕಟೇಶ ಕಾಮತ್. ಈ ಪುಸ್ತಕವನ್ನು ಕನ್ನಡಕ್ಕೆ ಅಕ್ಷತಾ ದೇಶಪಾಂಡೆಯವರು ತಂದಿದ್ದಾರೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ‘ಈ ಪುಸ್ತಕದ ಕನ್ನಡಾನುವಾದ ನನಗಾಗಿ ಒಂದು ಅಭೂತಪೂರ್ವ ಅನುಭವ. ಅನುವಾದ ಮಾಡುವಾಗಿನ ಅನುಭವ, ಇದನ್ನು ಓದಬೇಕಾದರೆ ಊಟ ತಿಂಡಿ ಮರೆತ ಅನುಭವ ಬೇರೆಯಾಗಿರಲಿಲ್ಲ. ಈ ಪುಸ್ತಕದ ಪ್ರತಿಯೊಂದು ವಾಕ್ಯದಲ್ಲಿ ಜಿದ್ದಿದೆ, ಆತ್ಮವಿಶ್ವಾಸವಿದೆ, ಅತ್ಮೀಯತೆ ಇದೆ…
ಲೇಖಕರು: Ashwin Rao K P
January 23, 2021

ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ಹಲವಾರು ಸಣ್ಣ ಹಾಗೂ ದೊಡ್ಡ ಕಥೆಗಳು ಇವೆ. ಬಹಳ ಹಿಂದೆ ಮಧ್ಯಪೂರ್ವ ದೇಶಗಳು ಎಂದು ಕರೆಯಲ್ಪಡುವ ಅರೇಬಿಯಾದಲ್ಲಿ ಅರಸರು (ಖಲೀಫರು) ಆಳುತ್ತಿದ್ದರು. ಶಹರಿಯಾರ್ ಎಂಬ ದೊರೆಯು ಆಳುತ್ತಿದ್ದ…