ಪುಸ್ತಕ ಪರಿಚಯ
ಲೇಖಕರು: Ashwin Rao K P
June 01, 2020

ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ. ದೇಹದ ಸೌಷ್ಟವ, ಸಾಮರ್ಥ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕಿರುಹೊತ್ತಿಗೆಯಲ್ಲಿ ಅನೇಕ ಪರಿಹಾರಗಳು ಹಾಗೂ ಸ್ಥೂಲಕಾಯದಿಂದ ಅನುಭವಿಸಬೇಕಾಗ ಬಹುದಾದ ಅನಾರೋಗ್ಯಗಳ ಬಗ್ಗೆ ವಿವರಣೆಗಳಿವೆ.
ಇಂದಿನ ಒತ್ತಡದ ದಿನಗಳಲ್ಲಿ ದಿನಕ್ಕೊಂದು ರೀತಿಯ ಸಮಸ್ಯೆಗಳು ವ್ಯಕ್ತಿಗೆ ತಪ್ಪಿದಲ್ಲ. ಅದರಲ್ಲೂ ಒಂದೇ ಜಾಗದಲ್ಲಿ…
ಲೇಖಕರು: Ashwin Rao K P
May 30, 2020

ಡಾ.ಕೆ.ಸಿ.ಶಶಿಧರ್ ಇವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ , ಶಿವಮೊಗ್ಗ ಇಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಶಿವಮೊಗ್ಗ ವಿಶ್ವ ವಿದ್ಯಾಲಯವು ನೇಗಿಲ ಮಿಡಿತ ಎನ್ನುವ ಕೃಷಿ ಮಾಸ ಪತ್ರಿಕೆಯನ್ನು ಹೊರ ತಂದಾಗ ಪ್ರಥಮ ಸಂಪಾದಕರಾಗಿದ್ದರು. ‘ಮಣ್ಣ ಮಡಿಲಲ್ಲಿ' ಎನ್ನುವ ಅಂಕಣವನ್ನು ಬಹುಕಾಲ ಕೆ.ಸಿ.ಶಶಿಧರ್ ಇವರು ಬರೆಯುತ್ತಾ ಬಂದರು. ಇದು ಬಹಳಷ್ಟು ಕೃಷಿಕರ ಆಸಕ್ತಿಯನ್ನೂ ಕುದುರಿಸಿತ್ತು.
ಸುಮಾರು ೨೫ ಲೇಖನಗಳನ್ನು ಈ ಪುಸ್ತಕವು ಅಡಕ ಗೊಂಡಿದೆ. ಪೂರ್ತಿ ಪುಸ್ತಕವು ಹೊಳಪಿನ ಕಾಗದದೊಂದಿಗೆ…
ಲೇಖಕರು: Ashwin Rao K P
May 25, 2020

ಶ್ರೀಮತಿ ಸುಮನ್ ಕೆ. ಚಿಪ್ಳೂಣ್ ಕರ್ ಇವರು ಬರೆದ ಮುದ್ರಾ ವಿಜ್ಞಾನ ಮತ್ತು ಆರೋಗ್ಯ ಪುಸ್ತಕ ಮಾಹಿತಿ ಪೂರ್ಣವಾಗಿದೆ. ಬೆನ್ನುಡಿಯಲ್ಲಿ ಡಾ.ತಾಳ್ತಜೆ ವಸಂತ್ ಕುಮಾರ್ ಇವರು ಬರೆಯುತ್ತಾರೆ- ಜೀವನ ಪದ್ಧತಿಗಳು ನಿಸರ್ಗದ ಶಿಶುವಾದ ಮಾನವನನ್ನು ಅವನ ಮೂಲ ಶಕ್ತಿ ಸ್ರೋತದಿಂದ ಬಹುದೂರಕ್ಕೆ ಕೊಂಡೊಯ್ಯುತ್ತಿವೆ. ಆಹಾರ, ವಿಹಾರ, ಚಿಂತನೆ, ವಿಶ್ರಾಂತಿ ಮುಂತಾದ ಸಾಮಾನ್ಯ ದಿನಚರ್ಯೆಗಳು ಕೂಡಾ ಅನಿಯಂತ್ರಿತವಾಗಿ ಯೋಚನೆ-ಯೋಜನೆಗಳ ಸಾಂಗತ್ಯಗಳಿಂದ ದೂರವಾಗುತ್ತಿವೆ. ಈ ವಿಕೃತ ವಿಧಾನಗಳ ಪ್ರತ್ಯಕ್ಷ-ಪರೋಕ್ಷ…
ಲೇಖಕರು: Ashwin Rao K P
May 25, 2020

ಪತ್ರಕರ್ತ ತೀರ್ಥರಾಮ ವಳಲಂಬೆಯವರ ಲೇಖನಿಯಿಂದ ಮೂಡಿ ಬಂದ ಒಂದು ಅಪೂರ್ವ ಪುಸ್ತಕ ಎಂದರೆ ತಪ್ಪಾಗದು. ಪಾಕೇಟ್ ಸೈಜ್ ಆಕಾರ ಹೊಂದಿರುವ ಈ ಪುಸ್ತಕವನ್ನು ತೀರ್ಥರಾಮ ಇವರು ಬಹಳಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಅವರೇ ಹೇಳಿರುವಂತೆ ಈ ಪುಸ್ತಕದ ಕಲ್ಪನೆ ಸಾಕಾರಗೊಳ್ಳಬೇಕಾದರೆ ಅದಕ್ಕಾಗಿ ನಾನು ಸಾಕಷ್ಟು ಅಧ್ಯಯನ ಹಾಗೂ ಅಭ್ಯಾಸಗಳನ್ನು ಮಾಡಬೇಕಾಗಿತ್ತು. ಆಧುನಿಕ ವಿಜ್ಞಾನ ಇಷ್ಟೊಂದು ಮುಂದುವರೆದಿರುವಾಗ ಜನರನ್ನು ವೈಜ್ಞಾನಿಕವಾಗಿ ಯೋಚಿಸಲು ಪ್ರೇರೇಪಿಸಬೇಕೇ ಹೊರತು ನಮ್ಮ ಯಾವುದೇ ಬರವಣಿಗೆಯ…
ಲೇಖಕರು: Ashwin Rao K P
May 22, 2020

ಭಾರತದ ಸ್ವಾತಂತ್ರ್ಯದ ನಂತರ ನಡೆದ ಅತ್ಯಂತ ದೊಡ್ಡ ದುರ್ಘಟನೆಯೆಂದರೆ ಮಹಾತ್ಮಾ ಗಾಂಧೀಜಿಯವರ ಹತ್ಯೆ. ಈ ಹತ್ಯೆಯನ್ನು ಮಾಡಿದರು ನಾಥೂರಾಮ ಗೋಡ್ಸೆ ಮತ್ತು ಅವರ ಸಂಗಡಿಗರು. ೧೯೪೮ರ ಜನವರಿ ೩೦ರಂದು ನಾಥೂರಾಮ ಗೋಡ್ಸೆ ಮಹಾತ್ಮರ ಹತ್ಯೆ ಮಾಡಿದ ನಂತರ ೧೫ ನವೆಂಬರ್ ೧೯೪೯ರಂದು ನ್ಯಾಯಾಲಯವು ಲಭ್ಯ ಸಾಕ್ಷ್ಯಾಧಾರಗಳ ಅಡಿಯಲ್ಲಿ ನಾಥೂರಾಮ ಗೋಡ್ಸೆ ಮತ್ತು ನಾರಾಯಣ ಆಪ್ಟೆಯವರನ್ನು ಅಂಬಾಲ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಲಾಗುತ್ತೆ, ಈ ಹತ್ಯಾ ಕಾಂಡದಲ್ಲಿ ನಾಥೂರಾಮ ಗೋಡ್ಸೆಯ ಕಿರಿಯ ಸಹೋದರ ಗೋಪಾಲ…
ಲೇಖಕರು: Ashwin Rao K P
May 22, 2020

'ಸ್ವಪ್ನ ಸಾರಸ್ವತ' ಹೆಸರೇ ಹೇಳುವಂತೆ ಸಾರಸ್ವತ ಸಮುದಾಯದವರ ಅನುಭವ ಕಥಾನಕದ ಸಾರ. ಇದರ ಲೇಖಕರಾದ ಗೋಪಾಲಕೃಷ್ಣ ಪೈ ಇವರು ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ನಿಕಟವರ್ತಿಗಳು. ಆಳವಾದ ಶೋಧನೆಯನ್ನು ಮಾಡಿ ಈ ಕಾದಂಬರಿಯನ್ನು ಬರೆದಿದ್ದಾರೆ. ಮೂಲ ವ್ಯಕ್ತಿ, ಸ್ಥಳಗಳ ಆಶಯಗಳಿಗೆ ಧಕ್ಕೆ ಬಾರದಂತೆ ಈ ಕಾದಂಬರಿಯ ಪಾತ್ರಗಳನ್ನು ನಿರೂಪಿಸಿದ್ದಾರೆ. ಈ ನಿರಂತರ ಶೋಧದ ಫಲವೇ ಕಳೆದ ನಾಲ್ಕು ನೂರು ವರುಷಗಳಲ್ಲಿ ಹಾದು ಬಂದ ಸಾರಸ್ವತ ಸಮುದಾಯದ ಅನುಭವಗಳ ಮೂಲಕ ಚರಿತ್ರೆ ಹಾಗೂ ವರ್ತಮಾನ ಜೀವನದ ಪರಸ್ಪರ…