ಪುಸ್ತಕ ಪರಿಚಯ
ಲೇಖಕರು: Ashwin Rao K P
May 21, 2020

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಪುಸ್ತಕವು ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಹೇಳುತ್ತದೆ. ಬೆನ್ನುಡಿಯಲ್ಲಿ ಭಾರತದ ಗೃಹ ಮಂತ್ರಿ ಅಮಿತ್ ಶಾ ಬರೆಯುತ್ತಾರೆ ೧೯೪೭ರಲ್ಲಿ ಭಾರತದ ವಿಭಜನೆ ಆಗದೇ ಇರುತ್ತಿದ್ದರೆ ಇಂದು ಸಿಎಎ ಅಗತ್ಯ ಇರುತ್ತಿರಲಿಲ್ಲ. ಅದರಲ್ಲೂ ಜಾತಿಯ ಆಧಾರದಲ್ಲಿ ದೇಶವನ್ನು ವಿಭಜಿಸಿದ್ದು ದೊಡ್ಡ ತಪ್ಪು.
ಭಾರತೀಯ ಮುಸಲ್ಮಾನರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಚುನಾವಣಾ ಆಯುಕ್ತರಾದರು. ಆದರೆ ಪಾಕ್-ಬಾಂಗ್ಲಾ-ಅಫ್ಘಾನಿಸ್ಥಾನದ…
ಲೇಖಕರು: Ashwin Rao K P
May 20, 2020

ಕ್ಷಣ ಹೊತ್ತು ಅಣಿ ಮುತ್ತು (ಭಾಗ ೭) ಇದು ಎಸ್ ಷಡಾಕ್ಷರಿಯವರ ಮುಂದುವರೆದ ಅಂಕಣ ಸರಣಿಯ ಪುಸ್ತಕ. ಮೊದಲು ಪ್ರಕಟವಾದ ಪುಸ್ತಕಗಳು ಜನ ಪ್ರಿಯವಾಗಿದೆ. ಈ ಪುಸ್ತಕದಲ್ಲಿನ ಬರಹಗಳು ಲೇಖಕರು ಕನ್ನಡ ಪ್ರಭ ಪತ್ರಿಕೆಯಲ್ಲಿ ದಿನಂಪ್ರತಿ ಬರೆದ ಲೇಖನಗಳ ಸಂಗ್ರಹ. ೭೫ ಸಣ್ಣ ಸಣ್ಣ ಬರಹಗಳು ಓದಿಸಿಕೊಂಡು ಹೋಗುತ್ತವೆ. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬಲ್ಲ ಅನೇಕ ವಿಷಯಗಳನ್ನು ಲೇಖಕರು ಸಣ್ಣ ಸಣ್ಣ ಕಥೆ, ದೃಷ್ಟಾಂತಗಳ ಮುಖಾಂತರ ತಿಳಿಸಿಕೊಟ್ಟಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಬರಹಗಳು ನಮ್ಮ…
ಲೇಖಕರು: Ashwin Rao K P
May 19, 2020

ವೃತ್ತಿಯಲ್ಲಿ 'ನಿಮ್ಮೆಲ್ಲರ ಮಾನಸ' ಎಂಬ ಒಂದು ಸದಭಿರುಚಿಯ ಪತ್ರಿಕೆಯ ಸಂಪಾದಕರಾಗಿದ್ದು ಕೊಂಡು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ ಕೆ.ಗಣೇಶ್ ಕೋಡೂರು ಇವರು. ನನಗೂ ಲವ್ವಾಗಿದೆ ಪುಸ್ತಕವು ೨೦೧೬ರಲ್ಲಿ ಮೊದಲ ಮುದ್ರಣ ಕಂಡಿದ್ದು ಯುವ ಜನಾಂಗಕ್ಕೆ ಪ್ರೀತಿಯ ಬಗ್ಗೆ ಆಪ್ತವಾಗಿ ಬರೆಯುತ್ತಾ ಹೋಗುತ್ತಾರೆ. ಸರಳವಾದ ಭಾಷೆ ಈ ಸಣ್ಣ ಪುಸ್ತಕವನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಕೆ.ಗಣೇಶ್ ಕೋಡೂರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೧೮
ರೂ.೫೦…
ಲೇಖಕರು: Ashwin Rao K P
May 16, 2020

ಪ್ರಸಾದ್ ಶೆಣೈ ಕಾರ್ಕಳ ಇವರ ಚೊಚ್ಚಲ ಕಥಾ ಸಂಕಲನವು ಬಹಳಷ್ಟು ವಿಷಯಗಳಿಂದ ಗಮನ ಸೆಳೆಯುತ್ತದೆ. ೨೦೧೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಥಾ ಸಂಕಲನದ ಮುಖಪುಟ ಮತ್ತು ಆಕಾರ ಗಮನಿಸುವಾಗ ಅತ್ಯಂತ ಆತ್ಮೀಯತೆ ಕಂಡು ಬರುತ್ತದೆ. ೧೭ ಎಕ್ಸ್ಪ್ರೆಸ್ ಕತೆಗಳನ್ನು ಹೊಂದಿರುವ ಈ ಪುಸ್ತಕಕ್ಕೆ ಕಥೆಗಾರ ಅಬ್ದುಲ್ ರಶೀದ್ ಇವರು ಮುನ್ನುಡಿ ಬರೆದಿದ್ದಾರೆ. ಪ್ರಸಾದ್ ಶೆಣೈ ಇವರು ತಾವು ಹುಟ್ಟಿ ಬೆಳೆದ ಪರಿಸರ, ಊರು ಇದರ ತುಂಬೆಲ್ಲಾ ಸುತ್ತಾಡಿದ್ದಾರೆ ಮತ್ತು ಕಥೆ ಓದುತ್ತಾ ಓದುತ್ತಾ ನಮ್ಮನ್ನೂ ಸುತ್ತಿಸುತ್ತಾರೆ…
ಲೇಖಕರು: addoor
March 30, 2020

ವಿಶ್ವವಿಖ್ಯಾತ ಸಸ್ಯತಜ್ನರಾದ ದಿವಂಗತ ಡಾ. ಬಿ.ಜಿ.ಎಲ್. ಸ್ವಾಮಿಯವರು ಸಸ್ಯಗಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದುವುದೇ ಒಂದು ಖುಷಿ. ಯಾಕೆಂದರೆ, ಆ ಬರಹಗಳು ಸಸ್ಯಗಳ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೆ ಕತೆಗಳನ್ನು ಓದುವಾಗಿನ ಆನಂದವನ್ನು ನೀಡುತ್ತವೆ.
ಹಲವು ಮುದ್ರಣಗಳನ್ನು ಕಂಡಿರುವ ಅವರ ಸುಪ್ರಸಿದ್ಧ ಪುಸ್ತಕ "ಹಸುರು ಹೊನ್ನು”. ಅದರಂತೆಯೇ ಸರಾಗವಾಗಿ ಓದಿಸಿಕೊಂಡು ಹೋಗುವ ಸಸ್ಯಗಳ ಕುರಿತಾದ ಇನ್ನೊಂದು ಪುಸ್ತಕ ಇದು. “ಅನ್ಯದೇಶಗಳಿಂದ ಬಂದು ನಮ್ಮಲ್ಲಿ ನೆಲೆಸಿ, ನಮ್ಮ ದಿನ ಜೀವನದಲ್ಲಿ…
ಲೇಖಕರು: Na. Karantha Peraje
February 28, 2020

ಚಿಟ್ಟೆಗಳು ವಿಭಿನ್ನವಾದ ದೇಹ ರಚನೆಯಿಂದಾಗಿ ತುಂಬಾ ಆಕರ್ಷಣೀಯ ವಾಗಿರುತ್ತವೆ. ಪ್ರಾಣಿಜಗತ್ತಿನ ಅಪೂರ್ವ ಜೀವಿಗಳಿವು. ಹೂವಿಗೂ ಚಿಟ್ಟೆಗೂ ಪ್ರಕೃತಿಯಲ್ಲಿ ಅವಿನಾಭಾವ ಸಂಬಂಧ. ಹತ್ತಾರು ವಿಧದ ಹೂಗಳನ್ನು ಮನೆಯ ಸುತ್ತ ನೆಟ್ಟು ಬೆಳೆಸಿದರೆ ಚಿಟ್ಟೆಗಳು ಹೂಗಳಿಗೆ ಆಕರ್ಷಿತವಾಗುತ್ತವೆ. ಆಗ ಹತ್ತಿರದಿಂದ ನೋಡಲು ಅಂದ.
ನಿಸರ್ಗದ ಆಹಾರ ಸರಪಳಿಯಲ್ಲಿ ಚಿಟ್ಟೆಗಳಿಗೆ ವೈಶಿಷ್ಟ್ಯವಾದ ಪಾತ್ರ. ಇವುಗಳಿಗೆ ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಮಹತ್ತರ ಜವಾಬ್ದಾರಿ. ಚಿಟ್ಟೆ ವೀಕ್ಷಣೆ, ಅವುಗಳ ಅಧ್ಯಯನ,…