ಪುಸ್ತಕ ಪರಿಚಯ
ಲೇಖಕರು: Ashwin Rao K P
September 12, 2020

ಪ್ರಾಮಾಣಿಕತೆ ಮತ್ತು ಸರಳತೆ ಎಂಬ ವಿಷಯ ಮನಸ್ಸಿಗೆ ಬಂದಾಗಲೆಲ್ಲಾ ನೆನಪಾಗುವುದು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ತಮ್ಮ ಬದುಕಿನ ಉದ್ದಕ್ಕೂ ಅವರು ನಂಬಿದ ತತ್ವ ಸಿದ್ಧಾಂತದಂತೆಯೇ ಬಾಳಿ ಬದುಕಿದರು. ಆದರೆ ಅವರ ಸಾವು ಅವರ ಬದುಕಿನಷ್ಟು ಸರಳವಾಗಿರಲಿಲ್ಲ. ಭಾರತ-ಪಾಕಿಸ್ತಾನದ ನಡುವೆ ರಷ್ಯಾದ ತಾಷ್ಕೆಂಟ್ ಎಂಬಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ರಾತ್ರಿಯೇ ಶಾಸ್ತ್ರೀಜಿಯವರ ಮರಣವಾಗುತ್ತದೆ. ಆದರೆ ಇದು ಸಹಜ ಮರಣ ಅಲ್ಲವೆಂದೇ ಬಹುತೇಕರ ಸಂಶಯ. ಈ ಎಲ್ಲಾ ಸಂಶಯಗಳನ್ನು…
ಲೇಖಕರು: Ashwin Rao K P
September 04, 2020

೨೦೦೧ರಲ್ಲಿ ಚೆನ್ನೈನ ಕೊಡೈಕೆನಾಲ್ ನಲ್ಲಿ ನಡೆದ ಒಂದು ಕೊಲೆಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ಕೋಟ್ಯಾಧೀಶ್ವರ, ಖ್ಯಾತ ಶರವಣ ಭವನದ ಮಾಲಕ ಅಣ್ಣಾಚ್ಚಿ ಪಿ. ರಾಜಗೋಪಾಲ್ ಮಾಡಿಸಿದ ಹೇಯ ಕೊಲೆಯ ಬಗ್ಗೆ ಈ ಪುಸ್ತಕ ಬಹಳ ಮಾಹಿತಿ ನೀಡುತ್ತದೆ. ಜ್ಯೋತಿಷ್ಯದ ಮೇಲೆ ರಾಜಗೋಪಾಲ್ ಗೆ ಬಹಳಷ್ಟು ನಂಬಿಕೆ. ಕೃಪಾನಂದ ವಾರಿಯರ್ ಸ್ವಾಮಿಗಳ್ ಭಕ್ತರಾಗಿದ್ದ. ಆದರೆ ಕುಳಂತೈ ಪಂಡಿಚ್ಚಿ ಎಂಬ ಜ್ಯೋತಿಷಿಯ ಮಾತು ಕೇಳಿಯೇ ಈ ಕೊಲೆ ಮಾಡಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಿದ. ಅತ್ಯಂತ ಕಡು ಬಡತನದ ಹಿನ್ನಲೆಯಿಂದ…
ಲೇಖಕರು: Ashwin Rao K P
August 31, 2020

ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಹಲವಾರು ಸಾಮಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಪತ್ರಿಕೆಯಲ್ಲಿ, ಸುದ್ದಿ ವಾಹಿನಿಗಳಲ್ಲಿ, ಕಾಲೇಜು ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅತ್ಯಂತ ಚಿಕ್ಕ ಪ್ರಾಯದಲ್ಲಿ ಯುವ ಮಾಧ್ಯಮ ರತ್ನ ಪ್ರಶಸ್ತಿಗೆ…
ಲೇಖಕರು: Ashwin Rao K P
August 28, 2020

ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು ಸಾಕಷ್ಟು ಅಧ್ಯಯನ ಮಾಡಿ ಬರೆದವುಗಳಾಗಿರುತ್ತವೆ. ಏಕೆಂದರೆ ವ್ಯಕ್ತಿ ಚಿತ್ರಗಳನ್ನು ರೂಪಿಸುವಾಗ ಅವರ ಬಗ್ಗೆ ನಿಖರವಾದ ದಾಖಲೆಗಳಿರುವುದು ಅತ್ಯಂತ ಅವಶ್ಯಕ. ಅಯೋಧ್ಯಾ ಪ್ರಕಾಶನದವರು ಈ ಪುಸ್ತಕದ ಜೊತೆಗೆ ಇನ್ನೊಂದು ಪುಸ್ತಕವನ್ನೂ ಹೊರತಂದಿದ್ದಾರೆ.…
ಲೇಖಕರು: Ashwin Rao K P
August 22, 2020

ಜನಗಳ ಮನ ಪತ್ರಕರ್ತ ವಿಶ್ವೇಶ್ವರ ಭಟ್ ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿರುವ ಸಮಯದಲ್ಲಿ ಬರೆದ ಅಂಕಣಗಳ ಸಂಗ್ರಹ. ಈಗಾಗಲೇ ೨ ಭಾಗ ಮಾರುಕಟ್ಟೆಗೆ ಬಂದಿದ್ದು, ಇದು ಆ ಸರಣಿಯ ಮೂರನೇ ಭಾಗ. ಅಂಕಣಕಾರನ ಒಂದು ಚೌಕಟ್ಟಿನಿಂದ ಹೊರಗೆ ಬಂದು ಯಾವ ವಿಷಯದ ಮೇಲಾದರೂ ಬರೆಯುವ ಸ್ವಾತಂತ್ರ್ಯದಿಂದ ಬರೆದ ಲೇಖನಗಳು ಇವು. ಇದರಲ್ಲಿ ಇಷ್ಟೇ ಬರೆಯ ಬೇಕೆಂಬ ಒತ್ತಾಯವಿಲ್ಲ, ಎಷ್ಟೇ ಬರೆದರೂ ಆಗಬಹುದು. ಹೀಗಾಗಿ ಈ ಪುಸ್ತಕದ ಬರಹಗಳಿಗೆ ಒಂದು ನಿರ್ದಿಷ್ಟ ಚೌಕಟ್ಟಿಲ್ಲ, ವೈವಿಧ್ಯಗಳಿಗೆ ಚೌಕಾಶಿಯೂ…
ಲೇಖಕರು: Ashwin Rao K P
August 15, 2020

ಪತ್ತೇದಾರಿ ಕಾದಂಬರಿಗಳಿಗೆ ಹೊಸ ಭಾಷ್ಯ ಬರೆದವರು ಎನ್.ನರಸಿಂಹಯ್ಯನವರು. ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದರೂ ೬೦-೭೦ರ ದಶಕದಲ್ಲಿ ಓದುಗರಿಗೆ ಪತ್ತೇದಾರಿಯ ಚಟ ಹಿಡಿಸಿಬಿಟ್ಟಿದ್ದರು. ಆ ಸಮಯದ ಸೀಮಿತ ಸಂಪನ್ಮೂಲಗಳಿಂದ ತಮ್ಮ ಮನದ ಶಕ್ತಿಯಿಂದ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಅವರ ಪತ್ತೇದಾರಿಯ ಪಾತ್ರಗಳಾದ ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಇವರೆಲ್ಲಾ ನಮ್ಮ ನಡುವೆಯೇ ಇದ್ದ ವ್ಯಕ್ತಿಗಳಂತೆ ಆಗಿ ಹೋಗಿದ್ದರು. ಆ ಸಮಯದಲ್ಲಿ ಬರೆದ ನೂರಾರು ಕಾದಂಬರಿಗಳು ಮರು ಮುದ್ರಣ ಕಾಣದೇ ಈಗಿನ…