ಪುಸ್ತಕ ಪರಿಚಯ
ಲೇಖಕರು: Ashwin Rao K P
June 16, 2020

‘ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ?’ ಎಂಬ ಸಾಲುಗಳು ‘ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲೇ ಮುದ್ರಿತವಾಗಿವೆ. ಕನ್ನಡದ ವರನಟರಾದ ಡಾ. ರಾಜ್ ಕುಮಾರ್ ಇವರ ತೀರಾ ಖಾಸಗಿ ಬದುಕಿನ ಪುಟಗಳನ್ನು ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯವರು ಅನಾವರಣ ಮಾಡಿದ್ದಾರೆ. ಸ್ವತಃ ಲೀಲಾವತಿಯವರೇ ತಮ್ಮ ಬದುಕಿನ ಕರುಣಾಜನಕ ಕಥೆಯನ್ನು ಈ ಲೇಖಕರ ಬಳಿ ತೆರೆದಿಟ್ಟಿದ್ದಾರೆ. ಅಣ್ಣಾವ್ರು ಬದುಕಿರುವಾಗ ಈ ಪುಸ್ತಕ ಹೊರ ಬಂದಿದ್ದರೆ ಅದರ ಕಥೆಯೇ ಬೇರೆ ಇತ್ತು. ಆದರೆ ಈ ಸಮಯ ಬದಲಾಗಿದೆ. ಸಮಾಜವೂ ಇಂಥಹ…
ಲೇಖಕರು: Ashwin Rao K P
June 13, 2020

‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ. ಪತ್ರಿಕೆಯ ವರದಿಗಾರನಾಗಿ, ಅಂಕಣಗಾರನಾಗಿ, ಉಪಸಂಪಾದಕನಾಗಿ, ಯಕ್ಷಗಾನ ಕಲೆಯ ಉಪಾಸಕರಾಗಿ, ಕಲಾವಿಮರ್ಶಕರಾಗಿ ಇವರು ದುಡಿದಿದ್ದಾರೆ. ‘ಯಕ್ಷಗಾನ ಪುರಾಣ ಜ್ಞಾನ ದರ್ಶನ' ಎಂಬ ಕೃಉತಿ ಯಕ್ಷಗಾನ…
ಲೇಖಕರು: Ashwin Rao K P
June 09, 2020

ಪುಸ್ತಕದ ಲೇಖಕಿಯಾದ ಡಾ.ಪೂರ್ಣಿಮಾ ಕೊಡೂರು ಇವರು ಸ್ವತಃ ಆಯುರ್ವೇದ ವೈದ್ಯೆಯೂ ಆಗಿರುವುದರಿಂದ ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಜನರಿಗೆ ಆಪ್ತವಾಗುವ ರೀತಿಯಲ್ಲಿ ಆಯುರ್ವೇದ ಮನೆ ಮದ್ದುಗಳನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ಮನೆ ಮದ್ದುಗಳ ವಿವರಗಳಿವೆ. ನಾವಿಂದು ನಮಗೆ ಬರುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿಕೊಳ್ಳುತ್ತೇವೆ. ಆದರೆ ಯಾವಾಗ ಕಾಯಿಲೆ ವಾಸಿಯಾಯಿತಾ, ಸುಮ್ಮನಾಗಿ ಬಿಡುತ್ತೇವೆ. ಹೀಗೆ ಸುಮ್ಮನಾಗುವ ಬದಲು ನಮಗೆ ಬಂದ ಕಾಯಿಲೆ ಏನು?…
ಲೇಖಕರು: Ashwin Rao K P
June 04, 2020

ನೊಬೆಲ್ ಬಹುಮಾನ ಪುರಸ್ಕೃತ ಆಂಗ್ಲ, ಸ್ಪಾನಿಷ್ ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇವರ ‘No one writes to the Colonel’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಶ್ರೀನಿವಾಸ ವೈದ್ಯ ಇವರು. ಶ್ರೀನಿವಾಸ ವೈದ್ಯ ಇವರು ಸೃಜನ ಶೀಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಬರೆದದ್ದು ಕಡಿಮೆಯಾದರೂ ಬರೆದುದನ್ನು ಗಮನಿಸಲೇ ಬೇಕಾದ ಬರಹಗಳು ಇವರು ರಚಿಸಿದ್ದಾರೆ. ಈ ಮೇಲಿನ ಆಂಗ್ಲ ಭಾಷೆಯ ಕಿರು ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆಂಬ ತುಡಿತದಿಂದಲೇ ಸೊಗಸಾಗಿ ಅನುವಾದ ಮಾಡಿದ್ದಾರೆ…
ಲೇಖಕರು: Ashwin Rao K P
June 02, 2020

ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ. ಆ ಶತಮಾನದ ಸಮಯದಲ್ಲಿದ್ದ ಸತಿ ಪದ್ಧತಿ, ಯಹೂದಿಗಳ ಹತ್ಯೆ, ಗುಲಾಮರ ಚಟುವಟಿಕೆಗಳು ಮತ್ತು ಅವರ ಯಾತನಾಮಯ ದಿನಗಳು ಓದುಗರ ನಿದ್ದೆಯನ್ನು ಕೆಡಿಸುತ್ತವೆ. ಲಿಸ್ಟನ್ ನಗರದಲ್ಲಿ ಶುರುವಾದ ಒಂದು ಪ್ರೇಮ ಪ್ರಸಂಗ ಭಾರತದ ತುಂಗಭದ್ರಾ ದಂಡೆಯ…
ಲೇಖಕರು: Ashwin Rao K P
June 01, 2020

ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ. ದೇಹದ ಸೌಷ್ಟವ, ಸಾಮರ್ಥ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕಿರುಹೊತ್ತಿಗೆಯಲ್ಲಿ ಅನೇಕ ಪರಿಹಾರಗಳು ಹಾಗೂ ಸ್ಥೂಲಕಾಯದಿಂದ ಅನುಭವಿಸಬೇಕಾಗ ಬಹುದಾದ ಅನಾರೋಗ್ಯಗಳ ಬಗ್ಗೆ ವಿವರಣೆಗಳಿವೆ.
ಇಂದಿನ ಒತ್ತಡದ ದಿನಗಳಲ್ಲಿ ದಿನಕ್ಕೊಂದು ರೀತಿಯ ಸಮಸ್ಯೆಗಳು ವ್ಯಕ್ತಿಗೆ ತಪ್ಪಿದಲ್ಲ. ಅದರಲ್ಲೂ ಒಂದೇ ಜಾಗದಲ್ಲಿ…