ಪುಸ್ತಕ ಪರಿಚಯ

ಲೇಖಕರು: Ashwin Rao K P
April 04, 2023
ಉಲ್ಲಾಸವಾಗಿ, ಸಂತೋಷವಾಗಿರಲು ಯಾರಿಗೆ ತಾನೇ ಆಸೆಯಿರೋದಿಲ್ಲ? ಕೆಲವೊಂದು ಸರಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ಉಲ್ಲಾಸಮಯ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎನ್ನುತ್ತಾರೆ ‘ಉಲ್ಲಾಸಕ್ಕೆ ದಾರಿ ನೂರಾರು' ಕೃತಿಯ ಲೇಖಕರಾದ ಅಡ್ಡೂರು ಕೃಷ್ಣ ರಾವ್ ಇವರು. ಕೃಷ್ಣ ರಾವ್ ಇವರು ಈಗಾಗಲೇ ತಮ್ಮ 'ಮನಸ್ಸಿನ ಮ್ಯಾಜಿಕ್' ನಂತಹ ಮನೋವೈಜ್ಞಾನಿಕ ಕೃತಿಯ ಮೂಲಕ ಓದುಗರ ಮನ ಗೆದ್ದವರು. ಬರವಣಿಗೆ ಮತ್ತು ಸಂಘಟನೆಯ ಹಾದಿಯಲ್ಲಿ ಬಹುದೂರ ಸಾಗಿ ಬಂದಿರುವ ಶ್ರೀಯುತರು ನಿವೃತ್ತ…
April 02, 2023
ಶಾರದಾ ಮೂರ್ತಿ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಪಲಾಯನ ಮತ್ತು ಇತರ ಕಥೆಗಳು' ಕೃತಿ. ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಶಾರದಾ ಮೂರ್ತಿ ಅವರ ಕೃತಿಯ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ... ಶಾರದಾ ಮೂರ್ತಿಯವರ ಪಲಾಯನ ಕಥಾ ಸಂಕಲನ ಆಶಾಡದ ತುಂತುರು ಮಳೆಯ ತಂಪಿನೊಂದಿಗೆ ಲೋಕಾರ್ಪಣೆಯಾಯಿತು. ಕಥೆಗಳನ್ನು ಓದಿದಾಗ ಶಾರದ ಅವರಲ್ಲಿದ್ದ ಲೇಖಕಿ ಪ್ರಬುಧ್ಧಳಾಗಿದ್ದಾಳೆ. ಇಂತಹ ಅನೇಖ ಸಂಕಲನಗಳು ಅವರಿಂದ ಹೊರಬಂದು ಜನ ಮನ್ನಣೆ ಗಳಿಸುವುದೆಂದು ಅವರ ಮೊದಲ ಕಥೆಯ ಶೀರ್ಷಿಕೆ 'ನಂಬಿಕೆ'…
ಲೇಖಕರು: Ashwin Rao K P
April 01, 2023
ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ ದುರಾಡಳಿತದ ಒಂದು ಎಳೆ ಗುಪ್ತಗಾಮಿನಿಯಾಗಿದೆ. ಆ ಅಂಶಕ್ಕೆ ಈ ಕಾದಂಬರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನುತ್ತಾರೆ ಲೇಖಕರು. ರುದ್ರಮೂರ್ತಿ ಶಾಸ್ತ್ರಿಯವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿವೆ.…
March 31, 2023
ಇದ್ದವರಿಗಿಂತ ಇಲ್ಲದವರೇ ತಮಗೆ ಮಾಡಿದ ಸಹಾಯವನ್ನ ನೆನಪಿಡುತ್ತಾರೆ ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ತೀರಿಸುತ್ತಾರೆ. ಇದು ಲೋಕದ ನಿಯಮ ಶಾಂತವ್ವ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಇಂತಹ ಅನೇಕ ಆದರ್ಶ ನುಡಿಗಳನ್ನು ಕಾದಂಬರಿಯ ಉದ್ದಕ್ಕೂ ನೋಡಬಹುದು. "ಮಕ್ಕಳು ಓದಿದ ಟೀಚರ್ ಡೈರಿ" ಒಮ್ಮೇಲೆ ಓದಿಸಿಕೊಂಡು ಹೋಗುವ ಕಾದಂಬರಿ. ವೈ ಜಿ ಭಗವತಿಯವರು ನವರಸಗಳನ್ನು ಬೆರೆಸಿ ಹೆಣೆದ ಮಕ್ಕಳ ಕಾದಂಬರಿ ಇದಾಗಿದೆ. ಈ ಕಾದಂಬರಿಯೂ ಸಮನ್ವಯ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಇದರಲ್ಲಿ ಬರುವ ಪ್ರತಿಯೊಂದು…
ಲೇಖಕರು: Ashwin Rao K P
March 31, 2023
ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ ನೀಡಿದ್ದಾರೆ ಹಿರಿಯ ಸಾಹಿತಿ ಬಿ ಎಂ ರೋಹಿಣಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕಿರುನೋಟ ಇಲ್ಲಿದೆ. “ಕರಾವಳಿ ಲೇಖಕಿಯರ-ವಾಚಕಿಯರ ಸಂಘವು ನೀಡುವ ದತ್ತಿ ಬಹುಮಾನವನ್ನು ಪಡೆದ ಲೇಖನ ಸಂಕಲನವಿದು. ಈ ದತ್ತಿ ಬಹುಮಾನವು ಹಿರಿಯ ಲೇಖಕಿ…
ಲೇಖಕರು: addoor
March 30, 2023
ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು. ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್ರತಿಯೊಂದು ಚಿತ್ರದ ಘಟನೆಯ  ವಿವರಣೆ ಬಲಭಾಗದ 60 ಪುಟಗಳಲ್ಲಿವೆ. ಈ ಚಂದದ ಚಿತ್ರಗಳನ್ನು ಒಂದು ಶತಮಾನದ (1916) ಮುಂಚೆ ರಚಿಸಿದವರು ಭವಾನರಾವ್ ಶ್ರೀನಿವಾಸರಾವ್ ಊರ್ಫ ಬಾಳಸಾಹೇಬ ಪಂಡಿತ ಪಂತ ಪ್ರತಿನಿಧಿ, ಬಿ.ಎ., ಸಂಸ್ಥಾನ ಔಂಧ. ಇದರ…