ಪುಸ್ತಕ ಪರಿಚಯ

ಲೇಖಕರು: Ashwin Rao K P
November 05, 2022
ತಮ್ಮ ಭಾವನಾತ್ಮಕ ಅಂಕಣ ಬರಹಗಳಿಗೆ ಹೆಸರುವಾಸಿಯಾದ ಲೇಖಕ ಎ ಆರ್ ಮಣಿಕಾಂತ್ ಆವರ ನೂತನ ಪುಸ್ತಕವೇ ‘ಮತ್ತೆ ಹಾಡಿತು ಕೋಗಿಲೆ'. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖಕರ ಅಂಕಣ ಬರಹವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದಲ್ಲಿರುವ ಪ್ರತಿಯೊಂದು ಅಧ್ಯಾಯವನ್ನು ಓದಿ ಮುಗಿಸುವಾಗ ನಿಮ್ಮ ಕಣ್ಣಂಚಿನಲ್ಲಿ ಖಂಡಿತಕ್ಕೂ ನೀರು ಜಿನುಗುತ್ತಿರುತ್ತದೆ. ಅಷ್ಟೊಂದು ಆಪ್ತವಾಗಿರುವ ಬರಹಗಳಿವೆ. ಇಲ್ಲಿ ಮುದ್ರಿತವಾಗಿರುವ ಬಹಳಷ್ಟು ಬರಹಗಳು ವ್ಯಕ್ತಿಯೊಬ್ಬರ ನಿಜ ಜೀವನಕ್ಕೆ ಸಂಬಂಧಿಸಿದವುಗಳೇ.…
November 03, 2022
ಡಾ. ವಿಜಯ್ ನಾಗ್ ರಿಂದ ಕನ್ನಡಕ್ಕೆ ಭಾಷಾಂತರವಾದ ಜಪಾನಿನ ಕಾದಂಬರಿಕಾರ ಜುನ್ ಇಚಿರೋ ತಾನಿಜ಼ಾಕಿ ಅವರ "ಕಾಗಿ" ಯೇ ಈ "ಬೀಗದ ಕೈ" ಕಾದಂಬರಿ. ಎರಡು ದೇಶಗಳ ಜನರ ಸಂಸ್ಕೃತಿ ಮತ್ತು ಮನುಷ್ಯ ಸಂವೇದನೆಗಳನ್ನು ಬೆಸೆವ ಕೆಲಸ ಈ ಅನುವಾದ. ಕಲೋನಿಯಲ್ ಎಂಬ ಮಟ್ಟದಲ್ಲಿ ಎಂದೂ ಜಪಾನ್ ಭಾಷೆ ಭಾರತದ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪನೆ ಮಾಡಿಲ್ಲದಿರುವುದು ವಿಶೇಷವಾದ ಮತ್ತು ಬಹಳ ಮುಖ್ಯವಾದ ಅಂಶ. ಚಿತ್ರಲಿಪಿಗೂ ಭಾರತೀಯರ ಅಕ್ಷರ ಲಿಪಿಗೂ ಬಹಳ ವ್ಯತ್ಯಾಸದ ಜೊತೆಗೆ,…
ಲೇಖಕರು: addoor
November 03, 2022
ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು ಸಮರ್ಥವಾಗಿ ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು. ಇದರ ಮೊದಲ ಶಿಕಾರಿ ಕತೆಯೇ ಪುಸ್ತಕದ ಶೀರ್ಷಿಕೆ ಕತೆ: ಮುನಿಶಾಮಿ ಮತ್ತು ಮಾಗಡಿ ಚಿರತೆ. ಮುನಿಶಾಮಿ ಎಂಬಾತ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಶಿಕಾರಿಯ ಹುಚ್ಚು…
ಲೇಖಕರು: Ashwin Rao K P
November 01, 2022
ವೀರ ಸಾವರ್ಕರ್ ಎಂಬ ಹೆಸರು ಈಗ ಬಹು ಚರ್ಚಿತವಾಗುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿರುವಂತದ್ದೇ. ಸಾವರ್ಕರ್ ಅವರು ದೇಶಭಕ್ತರೇ, ಸ್ವಾತಂತ್ರ್ಯ ಯೋಧರೇ, ಗಾಂಧೀಜಿ ಹತ್ಯೆಯಲ್ಲಿ ಅವರ ಕೈವಾಡವಿದೆಯೇ, ಎರಡು ಜೀವಾವಧಿ ಶಿಕ್ಷೆಗಳನ್ನು ಅವರು ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ ಹೇಗೆ ಕಳೆದರು? ಅಲ್ಲಿನ ಯಾತನಾಮಯ ದಿನಗಳು ಹೇಗಿದ್ದವು? ಅವರು ಬ್ರಿಟೀಷ್ ಸರಕಾರಕ್ಕೆ ಕ್ಷಮಾಪಣಾ ಅರ್ಜಿ ಬರೆದದ್ದು ಹೌದೇ? ಈ ಎಲ್ಲಾ ಸಂಶಯಗಳನ್ನು ನಿವಾರಣೆ ಮಾಡಲು ಖ್ಯಾತ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಇವರು…
ಲೇಖಕರು: Ashwin Rao K P
October 29, 2022
ಮಂಗಳೂರಿನ ಸಾವಯವ ಕೃಷಿಕರ ಬಳಗವು ‘ವಿಷಮುಕ್ತ ಅನ್ನದ ಬಟ್ಟಲಿನತ್ತ ಪುಟ್ಟ ಹೆಜ್ಜೆ' ಎಂಬ ಪರಿಕಲ್ಪನೆಯ ಮಾಲಿಕೆಯ. ಮೊದಲ ಕೃತಿಯಾಗಿ ‘ಕೈತೋಟ ಕೈಪಿಡಿ' ಎಂಬ ಪುಟ್ಟ ಆದರೆ ಮಹತ್ವಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. ಸ್ವತಃ ಪ್ರಗತಿಪರ, ಸಾವಯವ ಕೃಷಿಕರಾದ ಪುತ್ತೂರಿನ ಮಂಜುನಾಥ ಫಾರ್ಮ್ಸ್ ನ ಹರಿಕೃಷ್ಣ ಕಾಮತ್ ಅವರು ಉತ್ತಮ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಹೆಕ್ಕಿ ತಂದು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕಕ್ಕೆ ಮೊದಲ ಮಾತನ್ನು ಬರೆದಿದ್ದಾರೆ, ಸಾವಯವ ಕೃಷಿಕ ಗ್ರಾಹಕ ಬಳಗ ಇದರ…
ಲೇಖಕರು: Ashwin Rao K P
October 27, 2022
ಕೆ ಆರ್ ಉಮಾದೇವಿ ಉರಾಳ ಇವರ ನೂತನ ಪ್ರಬಂಧಗಳ ಸಂಕಲನವೇ ‘ಮುಳ್ಳುಬೇಲಿಯ ಹೂಬಳ್ಳಿ’. ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು ಹಿಂಸೆಗಳಿಂದ ಕೊನೆಗೂ ಚೇತರಿಸಿಕೊಂಡು ವಾಕರಿನಲ್ಲಿ ನಡೆಯಲು ಪ್ರಾರಂಭಿಸಿದಾಗ ಲೇಖಕಿಗೆ ಸರಳ ತತ್ವ ಸಾಕ್ಷಾತ್ಕಾರವಾದ ಅನುಭವವಾಗುತ್ತದೆ. 'ಇದೆ' ಅಂದುಕೊಂಡರೆ ಎಲ್ಲವೂ ಇದೆ: 'ಇಲ್ಲ' ಅಂದುಕೊಂಡರೆ ಯಾವುದೂ ಇಲ್ಲ. ಹಾಗಾಗಿ 'ಇದೆ' ಎಂಬ ಭಾವ ತುಂಬಿದ ಬದುಕೇ…