ಆ ದಿನಗಳು ...

ಆ ದಿನಗಳು ...

ಬರಹ

 ಅ ದಿನಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಜನ ಜಾತ್ರೆ , ಹಾಲ್ ತುಂಬಾ ಸದ್ದ್ದು ಮಾಡುತಿದ್ದ ಹುಡುಗರು.
ಮನೆ ಒಡತಿ,  "ಗಲಾಟೆ ಮಾಡ್ದೆ ಸುಮ್ನೆ ಕೂತ್ಕೊಲ್ದ್ರೋ , ಇವನು ಯಾರೋ !" ಎಂದು ಒಬ್ಬ ಹುಡುಗನ ಕಡೇ
ಬೆಟ್ಟು ತೂರಿಸಿ ಪ್ರಶ್ನಿಸುತಿದ್ದರು. "ರೀ.... . (ಆಗಿನ್ನೂ ಆಂಟಿ ಅಂಕಲ್ ಅಷ್ಟು ಚಾಲ್ತಿ  ಇರಲ್ಲಿಲ್ಲ ) ಇವನು ನಮ್ಮ ರೋಡ್ ನಲ್ಲೆ ಇರೋದು " ಹೀಗೆ ಉತ್ತರಿಸುತ್ತಿದ ಒಬ್ಬ ಹುಡುಗ.

ನಾವೆಲ್ಲಾ ಮನೆಯೊಳಗೇ ಇರೋದಕ್ಕೆ ಮನೆಯ ಒಡೆಯನ ಧಾರಾಳತನವೇ ಕಾರಣ .
 ಅಂತು ಸಮಯ ಬಂದಿತು ನಾವೆಲ್ಲಾ ನಿರೀಕ್ಷಿಸಿದ್ದ ಒಂದು switch on ಮಾಡಲಾಯಿತು, ಅದೊಂದು ಅದ್ಭುತವಾದ ಮಾಂತ್ರಿಕ ಶಕ್ತಿಯ ಯಂತ್ರ " TV " ಯಂದು ಎಲ್ಲರೂ ಕರಯುತ್ತಾರೆ, ಅದು ನಮ್ಮ ಮುಂದೆ ಕಣ್ಣು ತೆರೆಯಿತು .ಪಟಪಟಿ ಚಡ್ಡಿಗೆ zoom ಮಾಡಿರೋ ತರಹದ ಒಂದು ಚಿತ್ರ ಅದನ್ನ PAL color bars ಅಂತ ಕರಿತಾರೆ , ತುಂಬಾ ಕರ್ಕಶ ರೀತಿಯ ಸೌಂಡ್ನೊಂದಿಗೆ ಮೂಡುತ್ತಿತ್ತು.

 ಈ ಚಿತ್ರ ಯಾವಾಗ ಬದಲಾಗುತ್ತದೆ ಎಂದು ಕಾತುರ ದಿಂದ ನೂಡುತಿದ್ದೆವು. "ಅಭ್ಹ  ! ಬಂತು" ಎಂಬ ಸದ್ದು
ಮೂಡದ ಮರೆಇಂದ ಎರಡು ಹಾವಿನ ಹೆಡೆಗಳು ಮಧ್ಯಇರುವ ನಾಗಮಣಿಯನ್ನು ಸಂರಕ್ಷಣೆ ಮಾಡುವಂತೆ ಕಾಣುವ
ದೂರದರ್ಶನ ಚಿನ್ಹೆ  ಮೂಡುತ್ತಿತ್ತು. ಎಲ್ಲರ ಮುಖದಲ್ಲಿ  ಸಂತಸ.

ದೂರದರ್ಶನ ಕಾರ್ಯಕ್ರಮ್ಮಕೆ ಸ್ವಾಗತ ಕೂರುತ್ತಿದ್ದರು, ನಿರೂಪಕಿ ಯಾವ ಸೀರೆ ಉಟಿರುವಳು  ಎಂದು ಮನೆ ಒಡತಿ ತನ್ನ ಸಖಿಯರೊಂದಿಕೆ ಚರ್ಚೆ ಮಾದುತ್ತಿದಳು, ಏಕೆಂದರೆ ನಾವೆಲ್ಲಾ ನೋಡಿತಿದ್ದುದ್ದು Black and white TV .

ಹೀಗೆ ದೂರದರ್ಶನ  ಸುಮಾರು ವರ್ಷಗಳ ಕಾಲ ನಮ್ಮ ಮೇಲೆ ಮನರಂಜನೆಯ ಮಳೆ ಸುರಿಸಿದೆ .
'ಏಕ ಮೇವ ಅದ್ವಿತೀಯ ' ಎಂಬಂತೆ , 'ಊರಿಗೆ ಒಬ್ಬಳೇ ಸುಂದರಿ' ಎಂಬಂತೆ ಮೆರೆಯುತಿತ್ತು.
ಅವರು ತೋರಿಸುತಿದ್ದ ಕಾರ್ಯಕ್ರಮ ನಾವು ನೂಡುತ್ತಿದೆವು.

ಸೋಮವಾರ ಮೂಡಿಬರುತ್ತಿದ್ದ "ಚಿತ್ರ ಮಾಲ " ಎಲ್ಲಾ ಭಾಷೆ ಗಳ ಚಿತ್ರಗೀತೆಗಳ ಕಾರ್ಯಕ್ರಮ.
ಕನ್ನಡ ಹಾಡನ್ನು ನೋಡುವ ನೀರಿಕ್ಷೆ ಇರುತಿತ್ತು , " next ಸಾಂಗ್ ಇರಬಹುದು , ತಮಿಳು ಹಾಡು ತೋರಿಸಿದ ಮೇಲೆ, ಕನ್ನಡ ಬಂದೆಬರೊತ್ತೆ " ಎಂಬ ಲಕ್ಕಚಾರದಿಂದ ನೂಡುತಿದ್ದೆವು. ಅಂತು ಕನ್ನಡ ಹಾಡು ಬಂತು ಎಂದರೆ ,
ಗುರುತು ಪರಿಚಯವಿಲ್ಲದ ಹೀರೋ ಹಾಡು ಹಾಕ್ತಿದ್ರು , ಕಳಪೆ ಸಂಗೀತ,ಕಳಪೆ ನಟನೆ ಇಂದ ಕೂಡಿದ ಚಿತ್ರ ಗೀತೆ .
ನಮಗೆ ಆಗುತಿದ್ದ ಅವಮಾನ ಅಷ್ಟಇಷ್ಟ ಅಲ್ಲ, ನಮ ಜ್ಯೋತೆಯಲ್ಲಿ ಕುಳಿತು ನೋಡುತಿದ್ದ ತಮಿಳರು ತಿರುಗಿ ನೋಡಿ ನಗುತಿದ್ದರು.

ಭಾನುವಾರ regional language ಸಿನಿಮಾ ಗಳು , ಎಷ್ಟೇ ದರಿದ್ರ ವಾಗಿದ್ರು ನೂಡುತಿದ್ದೆವು.
ಬೀಡಿ ಸೇದುವುದನ್ನು 10 ನಿಮಿಷ ತೂರಿಸುತಿದ್ದ Art film ಗಳು , ಓರಿಯ ,ಅಸ್ಸಾಮಿ,ಮಣಿಪುರಿ ಹೀಗೆ
ಯಾವಚಿತ್ರಗಳನ್ನೂ ಎಡ ಬಿಡದೆ ನೂಡುತಿದ್ದೆವು .  ಹೀಗೆ ಒಮ್ಮೆ 'ಬ್ಯಾಂಕರ್ ಮಾರ್ಗಯ್ಯ' ಯಂಬ
ಲೋಕೇಶ್ ನಟಿಸಿದ ಚಿತ್ರ ಪ್ರಸಾರವಾಯಿತು, ಅದನ್ನು ನೋಡಲು ಮಾರವಾಡಿಗಳ ಮನೆಗೆ ಹೋಗಿದ್ದೆವು.
ಅ ಮನೆಯವರು "ಬ್ಯಾಂಕರ್ ಮರ್ಗಯಾ  ಮರ್ಗಯಾ " ಎಂದು ಲೇವಡಿ ಮಾಡಿದ್ದು ಉಂಟು.
ನಮಗೆ ಅಪಮಾನ ಮಾಡಿದ ನಿರ್ಮಾಪಕ ನಿರ್ದೇಶಕರುಗಳಿಗೆ  ನಾವು ಶಾಪ ಹಾಕಿದ್ದು ಉಂಟು.

"ಮೂಡಗಳೇ  ನನ್ನ ಮೇಲೆ ಬೀಳದಿರೀ  ಜ್ಯೋಕೆ , ನಾನು ನಿಮ್ಮನ್ನು ಚುಚ್ಚೆ ಬಿಡುವೆ " ಎಂದು ಚೂಪಾದ
ಮುನಿರೆಡ್ಡಿ ಪಾಳ್ಯದ ಬೆಂಗಳೂರು TV tower ಹೇಳತೊಡಗಿತು. ನಮಗೆಲ್ಲಾ ಸಂತಸ ಪ್ರತೀ ಗುರುವಾರ
ಕನ್ನಡ ಹಾಡುಗಳು , ರೇಡಿಯೋ ದಲ್ಲಿ ಕೇಳುತಿದ್ದ ಹಾಡುಗಳು ಈಗ ದೃಶ್ಯ ರೂಪದಲ್ಲಿ .

ಓಹೋ .. ಈ ಹಾಡು  ವಿಷ್ಣು ವರ್ಧಂದಾ ?  ಈ ಹಾಡು ಅಣ್ಣವರುದ್ದ ? ಹೀಗೆ ಆಶ್ಚರ್ಯ ಪಡುತಿದ್ದೆವು.
  "ರವಿ ವರ್ಮನ ಕುಂಚ ದ " ಹಾಡು ಅಣ್ಣವ್ರುದ್ದು ಅನ್ನ್ದುಕೊಂಡಿದ್ದೆ ರಾಜೇಶ್ ಎಂದು ತಿಳಿದ ಮೇಲೆ ಸ್ವಲ್ಪ ಬೇಸರವಾಗಿದ್ದು ಉಂಟು. ಹೀಗೆ  ಸತ್ಯ ಅಸತ್ಯಗಳ ಪರಿಚಯ ವಾಗುತ್ತ ಹೋಯಿತು.

 ಬರಬರುತ್ತ ಕನ್ನಡ ಪ್ರಭ ಪತ್ರಿಕೆ ಯಲ್ಲಿ ಸಿನಿಮಾ ಜಾಹಿರಾತಿನ ಮೇಲೆ  " ಈ ಚಿತ್ರದ ಹಾಡನ್ನು
ಚಿತ್ರಮಂಜರಿ ಯಲ್ಲಿ ನೋಡಿ ಆನಂದಿಸಿರಿ" ಎಂದು ಬರುತ್ತಿತು, ನಮ್ಮ ಉತ್ಸಾಹಕ್ಕೆ ಕೊರತೆಯೇ ಇರಲ್ಲಿಲ್ಲ.
ಶಂಕರ್ ನಾಗ್ ನಡೆಸಿಕೊಡುತ್ತಿದ್ದ  ಸಂದರ್ಶನ ,ಸುತ್ತ ಮುತ್ತ , ಮುನ್ನೋಟ ಹೀಗೆ ಹಲವಾರು ಕಾರ್ಯಕ್ರಮಗಳು.
'ಖನ್ನಡ' news reader ಗಳಾದ "ಕೃಷ್ಣಾ ಗಲಿ ಗಲಿ , ರಾಮಕೃಷ್ಣ ,ಸಭೀಹ ಬಾನು,' ಇವರೆಲ್ಲರನ್ನು
ಪ್ರತಿದಿನ ನೋಡಿ ನೋಡಿ ನಮ್ಮ ಮನೆಯವರೆನೋ ಎಂಬಂತೆ ಇರುತಿತ್ತು.

ಕೆಲಒಮ್ಮೆ  announcers ಗಳು ಸೀರೆ ಸರಿಮಾಡಿಕೊಳ್ಳುತಿದ್ದನು ಫಟಿಂಗ ಕ್ಯಾಮರಾಮೆನ್ ಗಳು ಸೇರೆಹಿಡಿಯುತಿದ್ದರು . "ಇದೀಗ ದೆಹಲಿಗೆ " ಎಂಬ ನಾಮ ಫಲಕ 10 ನಿಮಿಷ ವಾದರೂ ಇರುತಿತ್ತು.

ಆಗಿದ್ದ  ಶತ್ರುಗಳೆಂದರೆ KEB ಮತ್ತು ರಾಜಕೀಯ ವ್ಯಕ್ತಿಗಳು.
ಈ  ನಾಯಕರು ಸತ್ತರೆ , ನಾವೇ ಸತ್ತಂತೆ ಭಾಸವಾಗುತಿತ್ತು.
TV announcers ಗಳು ವಿಧವೆಯರಂತೆ ಬಂದು ನಿಂತು , "ಎಲ್ಲಾ ಕಾರ್ಯಕ್ರಮ ರದ್ದು ಪಡಿಸಲಾಗಿದೆ "
ಎಂದು  ಹೇಳುತಿದ್ದರು. ಈ ವ್ಯಕ್ತಿಗಳೆಲ್ಲ ಸಾಯುತಿದ್ದ ದಿನಗಳು ಯಾವುವು ಎಂದರೆ , ಗುರುವಾರ -Gaint robot ಇರುತಿದ್ದ ದಿನ , ಶನಿವಾರ  Didi 's comedy show  ಇರುತಿದ್ದ ದಿನ. ಭಾನುವಾರ ಕೇಳಲೇ ಬೇಡಿ
ಈಗ ನೆನಸಿಕೊಂಡರು ಬೇಜಾರ್ಅಗೊತ್ತೆ .
ಎಲ್ಲ ಧರ್ಮದ ಪಂಡಿತರಿಗೂ  demando demandu , ಗೀತೆ , ಖುರಾನ್ ,ಬೈಬಲ್  ,ಗ್ರಂಥ ಸಾಹಿ  ಹಿಗೆ
one by one ಸತತವಾಗಿ (ಅಳುತ್ತ ) ಬರುತಿತ್ತು . ಕೆಲವು ಘಂಟೆಗಳ ಕಾಲ TV ಆನ್ ಮಾಡಿದ್ರೆ ಸತ್ತವನ ಫೋಟೋ , ಸಾರಂಗಿ background music  ಮೂಡಿ ಬರುತ್ತಿತು. ಹೆಣ ಯಾರ್ ಮನೆಯಲ್ಲಿ ಬಿದ್ದಿದೆ ಎನ್ನುವುದು ಅನುಮಾನವಾಗಿತ್ತು.

KEB ನವರು ತಪ್ಪದೆ ಶನಿವಾರ ಕನ್ನಡ ಚಲನ ಚಿತ್ರದ ಸಮಯಕ್ಕೆ power cut ಮಾಡುತಿದ್ರು (ಒನ್ seanson ನಲ್ಲಿ), ಈಗಲೂ ಸಂಪ್ರದಾಯವನ್ನು ಇವರ ಮಕ್ಕಳು ನಡೆಸಿಕೊಂಡು ಬರುತಿದ್ದಾರೆ (BESCOM).

postal department ಗೆ ಕಷ್ಟ ಕೊಟ್ಟ ಕಾರ್ಯಕ್ರಮ ಎಂದರೆ "ಪ್ರಿಯ ವೀಕ್ಷಕರೆ ", ರಾಶಿ ರಾಶಿ ಪತ್ರಗಳ ಜ್ಯೋತೆ ಕೂರುತಿದ್ದ ಶ್ರೀನಿವಾಸ್ ಪ್ರಭು ಮತ್ತು ನಳಿನಿ ರಾಮಣ್ಣ ಕೇವಲ ಹೊಗಳಿಕೆಯ ಪತ್ರಗಳನ್ನು ಓದುತಿದ್ದುದ್ದು ಈಗಲೂ ಕಣ್ಣಿಗೆ ಕಟ್ಟಿದ ಹಾಗೆ ಇದೆ.

ಕೆಲೊಮ್ಮೆ ಚಲನಚಿತ್ರಗಳನ್ನೂ cancel ಮಾಡಿ ಗೀತಚಿತ್ರಗಳನ್ನೂ ಹಾಕುತ್ತಿದ್ರು.
ಗೀತಚಿತ್ರದಲ್ಲಿ ಮಾಡಿದವರೆಲ್ಲ ನಿಲಯದ ಕಲಾವಿದರೇ , ಕ್ಯಾಮರಾಮನ್ ತಮ್ಮ ,ಸ್ಟೇಷನ್ Director ge ಬೇಕಾದವರು.

ಕೆಲವೊಂದು ಒಳ್ಳೆಯಾ serial ಗಳು ಬರುತ್ತಿತು "ಕ್ರೇಜಿ ಕರ್ನಲ್ ", "ದೊಡ್ಡಮನೆ " , "ಅಜಿತನ ಸಾಹಸ" ಹೀಗೆ .
 ಕೆಲವು ನಾಟಕಗಳು , ಭಾಸ್ಕರನ ಡೈರಿ , ಗುನ್ಪುಟ್ಟಿ, ಮುನ್ಪುಟ್ಟಿ, ಭಾವಿ ಕಳೆದಿದೆ (ಪ್ರುಥಿವಿರಾಜ್ ರ ಅಭಿನಯ ಅಮೋಘ).

ಈ ಸಾರ್ವಭೌಮತ್ವಕ್ಕೆ  ತೆರೆಯೆಳದಿದ್ದು  ತಮಿಳರ ಕನ್ನಡ ಚಾನೆಲ್ ಆದ "ಉದಯ" TV .

ಇಗ ನೋಡಿದರೆ A to Z ಚಾನೆಲ್ ಗಳಿವೆ, ಬೆಳ್ಳಿಗೆ ಉಸಿರಾಡುವ ಕಾರ್ಯಕ್ರಮ ದಿಂದ ಶುರುವಾಗಿ
ಉಸಿರು ತೆಗೆಯುವ  crime report  ದಿಂದ ಕೊನೆಗೊಳ್ಳುತದ್ದೆ, ಈ  ಮಾದರಿಯ ಕಾರ್ಯಕ್ರಮಗಳು ಎಲ್ಲ ಚಾನೆಲ್ ನಲ್ಲೂ ಪ್ರಸಾರವಾಗುತ್ತದೆ.

ನೀವು ಹೋದ ಜನ್ಮ ದಲ್ಲಿ ಕತ್ತೆ,ನಾಯಿ, ಹಂದಿಯಾಗಿದ್ರೋ ತಿಳಿದುಕೊಳ್ಳಲು ಜನ್ಮ ಜನ್ಮಾಂತರ ಟೈಪ್
ಕಾರ್ಯಕ್ರಮಗಳು. ಭವಿಷ್ಯ ಹೇಳುವ 'ಭೂತಾಕಾರದ' ವಿದೂಷಕರು (ಜ್ಯೋತಿಷಿಗಳು ).

ಈ ಎಲ್ಲಾ ಅಬ್ಬರದ ನಡುವೆ 'ದೂರ' ದರ್ಶನ ವಾಗಿದೆ, ಅದಕ್ಕೆ ಕಾರಣ, ಆಗ ಹೇಗೆ ಇದ್ದರೋ ಇಗಲೂ ಹಾಗೆ ಇದ್ದಾರೆ  ಅವರೆಂದು ಬದಲಾಗುವುದಿಲ್ಲ .....................