ಒಂದು ದಿನದ ಸಕಲೇಶಪುರ ಟ್ರೆಕ್....ಮುಕ್ತಾಯ

ಒಂದು ದಿನದ ಸಕಲೇಶಪುರ ಟ್ರೆಕ್....ಮುಕ್ತಾಯ

ಬರಹ

ಇಲ್ಲಿಂದ

 

 

 

 

 

http://sampada.net/article/16725

http://sampada.net/blog/chikku123/18/06/2009/21643

ಆಗ ನಾನು, ವೆಂಕ ನೀನು ಇಲ್ಲೇ ಇರು ನಾನು ಆ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡ್ಕೊಂಡು ಬೇಗ ಓಡಿ ಬರ್ತೀನಿ ಅಂದೆ, ಸರಿ ಹಾಗೇ ಮಾಡು ಆದ್ರೆ ಎಲ್ಲಾ ಬೇಗ ಆಗ್ಬೇಕು ಅಂದ, ಅಂದ್ರೆ ಆ ಟೈಮಲ್ಲಿ ಸೇತುವೆ ಮ‌ತ್ತೆ ಸುರಂಗ ದಾಟಿ ಜೀಪ್ ನೋಡಿ ಮತ್ತೆ ವಾಪಸ್ ಬಂದು ರೈಲ್ ನಿಂತ್ರೆ ಹತ್ತಬೇಕಾದಂತ ಪರಿಸ್ಥಿತಿ.

 

ಸರಿ ಓಡಿದೆ, ಹೋಗಿ ನೋಡಿದ್ರೆ ಆಗಿನ್ನೂ ಜೀಪ್ ಹೋದ ಸದ್ದು ಕೇಳಿಸ್ತು. ವಿಧಿಯಿಲ್ಲದೆ ಮತ್ತೆ ವಾಪಸ್ ಆಗ್ಬೇಕು, ರೈಲ್ ಬರೋದು ಕಾಣ್ತಿತ್ತು, ನಾನು ಓಡಲೇಬೇಕಿತ್ತು, ಅಂತೂ ಸೇತುವೆ ದಾಟಿ ವೆಂಕ ಇರೋ ಜಾಗ ತಲುಪಿದೆ. ಇನ್ನೇನು ಈ ಕಾರ್ಮಿಕರು ರೈಲ್ ನಿಲ್ಲಿಸ್ತಾರೆ ನಮ್ಮನ್ನೂ ಹತ್ತಿಸಿಕೊಂಡು ಹೋಗ್ತಾರೆ ಅಂತ ಸ್ವಲ್ಪ ಧೈರ್ಯ ಬಂತು (ಯಾಕಂದ್ರೆ ವೆಂಕ,ನಾನು ಅವರೊಟ್ಟಿಗೆ ಮಾತಾಡಿ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ವಿ).

 

 

ರೈಲ್ ಬಂತು ಅವ್ರು ಅಡ್ಡ ಹಾಕಿದ್ರು ಆದ್ರೆ ಉಹುಂ ನಿಲ್ಲಿಸ್ಲಿಲ್ಲ....

ಮುಂದೆ....ತಲೆ ಮೇಲೆ ಕೈ ಹೊತ್ಕೊಂಡು ಕೂತ್ವಿ, ಕಾಡಿನ ಮಧ್ಯೆ, ಕಗ್ಗತ್ತಲು. ವಾಪಸ್ ತಲುಪ್ತೀವೋ ಇಲ್ವೋ ಅನ್ನೋ ಅನುಮಾನ....ನಮ್ಮಿಬ್ಬರ ಮುಖದಲ್ಲಿ ಹತ್ತಾರು ಪ್ರಶ್ನೆಗಳು ಹಾದುಹೋದವು.....

 



ನಾನು,ವೆಂಕ ಜೊತೆಗೆ ಆ ಕಾರ್ಮಿಕರು, ಬ್ಯಾಗ್ನಲ್ಲಿ ತಿನ್ನೋದಕ್ಕೆ ಏನೂ ಇಲ್ಲ, ವೆಂಕ ಟ್ರಿಪ್ನಲ್ಲಿ ದುಡ್ಡು ಕೊಟ್ಟು ಪರ್ಸ್ ಖಾಲಿ ಮಾಡ್ಕೊಂಡಿದ್ದ, ನಾನು ಆ ತಿಂಗಳು ಬರ್ಬಾದ್ ಆಗಿಹೋಗಿದ್ದೆ.

ಚಿಕ್ಕು ಎಷ್ಟಿದೆಯೋ ದುಡ್ಡು ಅಂದ, ತೆಗೆದು ನೋಡಿದೆ 100 ಇತ್ತು, ತೋರ್ಸಿದೆ.

 


ರಾತ್ರಿ 7:30, ಜೇಬ‌ಲ್ಲಿ ದುಡ್ಡಿಲ್ಲ, ತಿನ್ನೋದ‌ಕ್ಕೆ ಏನಿಲ್ಲ, ಮೊಬೈಲ್ ಸಿಗ್ನಲ್ ಇಲ್ಲ, ವೆಂಕ‌ನ‌ ಮೊಬೈಲ್ ಚಾರ್ಜಿಲ್ಲದೆ ಬೇಸ‌ತ್ತು ನಿದ್ರೆ ಮಾಡ್ತಿತ್ತು, ನ‌ನ್ನ ಮೊಬೈಲ್ ಎಲ್ಲೋ ಸ್ವಲ್ಪ ಜೀವ‌ ಇಟ್ಕೊಂಡಿತ್ತು, ಅದಕ್ಕೂ ಸುಸ್ತಾಗಿ ಹೋಗಿತ್ತು, 2 ದಿನ‌ ಚಾರ್ಜಿಲ್ಲದೆ.

ಈಗೇನು ಮಾಡ್ಬೇಕು ಅಂತ‌ ಗೊತ್ತಾಗ‌ದೆ ಸ್ವಲ್ಪ ಹೊತ್ತು ಹಾಗೆ ಕೂತ್ಕೊಂಡ್ವಿ
ವೆಂಕ‌, ಮುಂದೆ ಹೋಗಿ ಸಿಗ್ನಲ್ ಸಿಗ‌ತ್ತೇನು ಅಂತ‌ ನೋಡ್ಕೊಂಡು ಬ‌ರ್ತೀನಿ ಇಲ್ಲೇ ಇರು ಅಂದೆ, ಸ‌ರಿ ಅಂದ‌. ತುಂಬಾ ಕ‌ತ್ತಲು, ಕ್ಷಣ ಕ್ಷಣ‌ ಮೊಬೈಲ್ ಚಾರ್ಜ್ ಕ‌ಡಿಮೆಯಾಗ್ತಿತ್ತು.

 

 

ಸ್ವಲ್ಪ ಮುಂದೆ ಹೋದ ತಕ್ಷಣ ೧ ಸಿಗ್ನಲ್ ಬಂತು, ಆ ಖುಷಿಗೆ ವೆಂಕ ಸಿಗ್ನಲ್ ಸಿಕ್ತು ಕಣೋ ಅಂದೆ.
ಸೌಜನ್ಗೋ ಪಕ್ಯನ್ಗೋ ಕಾಲ್ ಮಾಡು ಅಂದ.

 

 

ಪಕ್ಯಂಗೆ ಕಾಲ್ ಹೋಯ್ತು, ಲೇ ಗೂಡ್ಸ್ ಟ್ರೈನ್ ಹೋಯ್ತು ಅದ್ರಲ್ಲಿ ಇದೀರಾ ಅಥವ ಯಡಕಮುರಿಯಲ್ಲೇ ಇದೀರಾ ಅಂದೆ.

ಇಲ್ಲಪ್ಪ ಗೂಡ್ಸ್ ಟ್ರೈನ್ ನಿಲ್ಲಿಸ್ಲೇ ಇಲ್ಲ, ನೀವು ವಾಪಸ್ ಬನ್ನಿ.

ಸರಿ ಅಂತ್ಹೇಳಿ ವೆಂಕಂಗೆ ಹೇಳಿ ಅಲ್ಲಿಂದ ಹೊರಟೆವು.

ಆಗಲೇ ರಾತ್ರಿ ೭.೪೫, ಎಲ್ಲೆಲ್ಲೂ ಕತ್ತಲೆ, ನನ್ನ ಮೊಬೈಲ್ನಲ್ಲಿದ್ದ ಟಾರ್ಚನ್ನು ಹಾಕಿಕೊಂಡು ಹೊರಟೆವು, ಮೊದಲೇ ಚಾರ್ಜ್ ಕಡಿಮೆ ಇತ್ತು ಇನ್ನು ಟಾರ್ಚ್ ಉಪಯೋಗಿಸುತ್ತಿದ್ದುದ್ದರಿಂದ ಇನ್ನೂ ಕಡಿಮೆ ಆಗುತ್ತಿತ್ತು. ೩ ಕಿ.ಮೀ ಹೋಗಬೇಕಿತ್ತು, ಅಲ್ಲಿವರೆಗೆ ಬಂದರೆ ಸಾಕಪ್ಪಾ ಎಂದು ಬೇಗ ಬೇಗ ಹೆಜ್ಜೆ ಹಾಕಿದೆವು.

ಸುತ್ತಲೂ ಕಾಡು, ಅಲ್ಲಲ್ಲಿ ಕಾಡು ಪ್ರಾಣಿಗಳ ಸದ್ದು, ಆನೆ ಕಾಡೆಮ್ಮೆಗಳ ಕೂಗು ನಮ್ಮ ಹೆಜ್ಜೆಯ ವೇಗವನ್ನು ಜಾಸ್ತಿ ಮಾಡುತ್ತಿದ್ದವು. ನಡುನಡುವೆ ಸೇತುವೆಗಳು, ಅಕಸ್ಮಾತ್ ಮಧ್ಯೆ ಇದ್ದಾಗ ಯಾವುದಾದರೂ ರೈಲ್ ಬರಬಹುದು ಎಂದು ಒಂದೇ ಸಮನೆ ಓಡಿಬಿಡುತ್ತಿದ್ದೆವು. ಅಂತೂ ೮.೩೦ಕ್ಕೆ ಯಡಕಮುರಿ ಸ್ಟೇಶನ್ ತಲುಪಿದೆವು.

ಸೌಜ ಇದ್ದವನು ೧೧.೩೦ಕ್ಕೆ ಗೂಡ್ಸ್ ಟ್ರೈನ್ ಇದೆಯಂತೆ, ಅಕಸ್ಮಾತ್ ನಿಲ್ಸಿದ್ರೆ ಅದ್ರಲ್ಲಿ ಹತ್ಕೊಂಡು ಹೋಗಿ ಅಂತ ಸ್ಟೇಶನ್ ಮಾಸ್ಟರ್ ಹೇಳ್ದ ಅಂದ.

ನಿಲ್ಲಿಸ್ದೆ ಇದ್ರೆ??

ನೀವೇ ನಿಲ್ಸಿ ಅಂತ ಅಂದೆ, ಆಸಾಮಿ ಯಾಕೋ ಒಪ್ಲಿಲ್ಲ.

ಸರಿ ಬಿಡು ಇನ್ನೇನ್ಮಾಡೋದು ಅಲ್ಲಿ

ವರೆಗೆ ಕಾಯೋಣ ಅಂತ ಕೇಕ್, ಬನ್, ಬ್ರೆಡ್ ತಿಂದು ಪ್ಲಾಟ್ಫಾರ್ಮ್ ಮೇಲೆ ಮಲಗಿಕೊಂಡ್ವಿ. ಪಕ್ಯ ಸೌಜ ಎಚ್ಚರ ಇದ್ರು. ಸುಮಾರು ೧೧.೪೦ಕ್ಕೆ ಗೂಡ್ಸ್ ಟ್ರೈನ್ ಸದ್ದಾಯ್ತು, ಎಲ್ಲ ಎದ್ದು ನಿಂತೆವು. ಬಂದ ಸ್ಪೀಡಿನಲ್ಲೇ ಹತ್ತಿ ಹೋಯಿತು (ಹಗಲು ಹೊತ್ತಾಗಿದ್ರೆ ಓಡಿ ಹೋಗಿ ಹತ್ತುತಿದ್ವೇ

ನೋ ಆದ್ರೆ ರಾತ್ರಿ).

ಥತ್ತೇರಿಕೆ  ಅಂದು ಮತ್ತೆ ಪ್ಲಾಟ್ಫಾರ್ಮ್ ಮೇಲೆ ಬಿದ್ವಿ, ಸೌಜ ಹೋಗಿ ಮತ್ತೆ ಕೇಳ್ಕೊಂಡು ಬಂದ.

ರಾತ್ರಿ ೧.೩೦ಕ್ಕೆ ಮತ್ತೊಂದು ಗೂಡ್ಸ್ ಟ್ರೈನ್ ಇದೆ ಅಂದ.ನಮಗೆ ಸುಸ್ತಾಗಿದ್ದಿದ್ರಿಂದ ನಾವು ಪಾಚ್ಕೊಂಡ್ವಿ, ಸೌಜ ಪಕ್ಯ ಜಾಗರಣೆ ಮಾಡ್ತಿದ್ರು.

೧.೩೦ಕ್ಕೆ ಬಂತು, ಆಗ್ಲೂ ನಿಲ್ಲಿಸ್ಲಿಲ್ಲ.

ಸ್ಟೇಶನ್ ಮಾಸ್ಟರ್ಗೆ ನಮ್ಮನ್ನ ನೋಡಿ ಸ್ವಲ್ಪ ಕರುಣೆ ಬಂತು ಅನ್ಸತ್ತೆ. ೩.೩೦ ಸುಮಾರಿಗೆ ಪ್ಯಾಸೆಂಜರ್ ಗಾಡಿ ಬರತ್ತೆ, ನಿಲ್ಲಿಸ್ತೀನಿ ಹತ್ಕೊಂಡು ಹೋಗಿ ಅಂದ.

ಅಂತೂ ತಲುಪ್ತೀವಿ ಅನ್ನೋ ಸಮಾಧಾನ ಆಯ್ತು.೪ಕ್ಕೆ ಬಂತು ಟ್ರೈನ್, ಹತ್ತಿದೆವು, ಟ್ರೈನ್ ತುಂಬಿ ಹೋಗಿತ್ತು, ಹೆಂಗೋ ಜಾಗ ಮಾಡ್ಕಂಡು ಕೆಳಗೆ ಕೂತ್ವಿ. ೫.೩೦ರ ಸುಮಾರಿಗೆ ಸಕಲೇಶಪುರಕ್ಕೆ ಬಂದ್ವಿ.

ಸರಿಯಾಗಿ ನಿದ್ರೆ ಇಲ್ಲದೆ ಎಲ್ಲರೂ ಸುಸ್ತಾಗಿದ್ವಿ.ಈಗ ಮತ್ತೊಂದು ಸಮಸ್ಯೆ ಶುರುವಾಯಿತು.

 

ವ್ಯಾನ್ ಡ್ರೈವರ್ಗೆ ಸುಬ್ರಮಣ್ಯಕ್ಕೆ ಹೋಗೋಕೆ ಹೇಳಿದ್ವಿ (ಟ್ರೆಕ್ ಮಾಡಿ ಅಲ್ಲಿಗೆ ಹೋಗಿ ಅಲ್ಲಿಂದ ವ್ಯಾನ್ ಹತ್ತಿ ಬೆಂಗಳೂರಿನ ಹಾದಿ ಹಿಡ್ಯಣ ಅಂತ).

ಡ್ರೈವರ್ಗೆ ಕಾಲ್ ಮಾಡಿದ್ರೆ ನಾಟ್ ರೀಚಬಲ್. ೧

೦ ನಿಮಿಷ ಪ್ರಯತ್ನ ಮಾಡಿದ್ವಿ ಆದ್ರೆ ಸಿಗ್ಲೇ ಇಲ್ಲ.ಅಯ್ಯೋ ಶಿವನೆ, ಈಗ ಮತ್ತೆ ಸುಬ್ರಮಣ್ಯಕ್ಕೆ ಹೋಗ್ಬೇಕು :(.

ಮತ್ತೆ ನಾನು ವೆಂಕ ಸಕಲೇಶಪುರ ಬಸ್ ನಿಲ್ದಾಣಕ್ಕೆ ಹೊರಟೆವು. ಬೆಳಗ್ಗೆ ೫.೪೫, ಇಬ್ರೂ ತೂಕಡಿಸುತ್ತಿದ್ವಿ.

ಬಸ್ ಹತ್ತಿ ೨ ಸೀಟ್ ಮುಂದೆ ಹೋದ ತಕ್ಷಣ ಇಬ್ಬರು ಆಸಾಮಿಗಳು ಕಂಠಪೂರ್ತಿ ಕುಡಿದು ಸೀಟ್ ಕೆಳಗೆ ಅಡ್ಡಡ್ಡ ಬಿದ್ದಿದ್ರು, ಅವರನ್ನ ದಾಟಿಕೊಂಡು ಹೋಗಿ ಹಿಂದ್ಗಡೆ ಸೀಟಲ್ಲಿ ಕೂತ್ವಿ.

ಶಿರಾಡಿ ಘಾಟ್ ಬರೋತಂಕ ಆರಾಮಾಗಿ ಹೋಗ್ತಿದ್ವಿ. ಆಮೇಲೆ ನೋಡಿ ಶುರುವಾಯ್ತು, ಕೆಳಗೆ ಕುಡಿದು ಬಿದ್ದವರಿಗೂ ನಮಗೂ ವ್ಯತ್ಯಾಸ ಇಲ್ಲವೇನೋ ಅನ್ನೋ ಹಾಗೆ ತೂರಾಡೋಕೆ ಶುರು ಮಾಡಿದ್ವಿ, ಕಾರಣ ರಸ್ತೆಯಲ್ಲಿದ್ದ ಗುಂಡಿಗಳು (ರಸ್ತೆಯಲ್ಲಿ ಗುಂಡಿ ಅನ್ನೋದ್ರ ಬದ್ಲು ಗುಂಡಿನೇ ರಸ್ತೆ ಆಗಿತ್ತು), ಪಾಪ ಬಸ್ಸಿನಲ್ಲಿದ್ದ ಹೆಂಗಸರು ಮಕ್ಕಳಪಾಡನ್ಥೂ ಹೇಳತೀರದು.

ನಾವಂತೂ ಗುಂಡ್ಯ ಹತ್ರ ಬರೋ ಹೊತ್ತಿಗೆ ಹಣ್ಣುಗಾಯಿ ನೀರುಗಾಯಿ ಆಗಿದ್ವಿ. ಆಮೇಲೆ ಯೋಚನೆ ಮಾಡಿದಾಗ ಗೊತ್ತಾಯ್ತು ಬಸ್ಸಿನಲ್ಲಿದ್ದ ಇಬ್ಬರು ಯಾಕೆ ಕುಡಿದಿದ್ರು ಅಂತ.

ಸುಬ್ರಮಣ್ಯಕ್ಕೆ ಹೋಗೋ ಯಾವ್ದಾದ್ರೂ ಬಸ್ ಬರತ್ತಾ ಅಂತ ಕಾಯ್ತಾ ಅಲ್ಲೇ ಸುತ್ತಾಡ್ತಿದ್ವಿ, ಸುಬ್ರಮಣ್ಯ ರಸ್ತೆ ಹಾದಿಯಲ್ಲಿ ಒಂದು ವ್ಯಾನ್ ಕಾಣಿಸ್ತು, ನಮ್ದೆ ಇರ್ಬೇಕು ಅಂದ್ಕೊಂಡು ಹೋಗಿ ನೋಡಿದ್ರೆ

ಅದೇ.

ಅಬ್ಬ ಅಂತೂ ನಮ್ಮ ಹುಡುಕಾಟ ಮುಗಿಯಿತಲ್ಲ ಇನ್ನು ಬೆಂಗಳೂರಿಗೆ ಆರಾಮಾಗಿ ಹೋಗಬಹುದು ಅಂತ ವ್ಯಾನ್ ಹತ್ತಿ ಕೂತ್ವಿ. ನಮಗೆ ನಿದ್ರೆ ಎಷ್ಟು ಬಂತು ಅಂದ್ರೆ ಶಿರಾಡಿ ಘಾಟ್ನ ಗುಂಡಿಗಳು ನಿದ್ರಾದೇವಿಯ ಮುಂದೆ ಸೋತು ಶರಣಾಗಿದ್ದವು.

 

ಸಕಲೇಶಪುರದಲ್ಲಿ ಉಳಿದವರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಬಂದಾಗ ಸದ್ಯ ತಲುಪಿದೆವಲ್ಲ ಅನ್ನೋ ಸಮಾಧಾನ