ಬೆ೦ದಕಾಳೂರು ಇನ್ನು ಹಾಗೇ ಇದೆ..

ಬೆ೦ದಕಾಳೂರು ಇನ್ನು ಹಾಗೇ ಇದೆ..

ಬರಹ



 
ನಾನು ಬೆಂಗಳೂರಿನಿಂದ ಶಿವಮೊಗ್ಗ ಹೋಗುವ ಇಂಟರ್ಸಿಟಿ ರೈಲು ಸಂಜೆ 4.30ರ ಸಮಯಕ್ಕೆ ಹೊರಟಿತು.ಮೆಜೆಸ್ಟಿಕ್ ಬಿಟ್ಟು ತುಸು ದೂರ ಬರುತ್ತಿತ್ತು.ಆಗ ರೈಲಿನಲ್ಲಿ
ಬಾಗಿಲ ಬಳಿ ಕುಳಿತಿದ್ದ ಒರ್ವ
ವ್ಯಕ್ತಿ ಫೋನಿನಲ್ಲಿ ಮಾತಾಡುತಿದ್ದ.ರೈಲು ನಿಧಾನವಾಗಿ ಚಲಿಸುತಿತ್ತು.ಅಲ್ಲೇ ರೈಲಿನಿ೦ದ ಹೊರಗೆ ನಿಂತಿದ್ದ ಹುಡುಗನೊಬ್ಬ ಹೊರಗಿನಿ೦ದಲೇ ಆ ವ್ಯಕ್ತಿಯ ಕೆನ್ನೆಗೆ ಹೊಡೆದ.
ಹೊಡೆದಾಕ್ಷಣ ಆ ವ್ಯಕ್ತಿ ಗಾಬರಿಗೆ ಕೈನಲ್ಲಿದ್ದ ಮೊಬೈಲ್ ಮುಂದಕ್ಕೆ ಬಿದ್ದಿತು.ಅದನ್ನು ಆ ಹುಡುಗ ಎತ್ತಿಕೊಂಡು ಒಡಿ ಹೋದ..
ಇದು ಪ್ರತಿನಿತ್ಯ ನೆಡೆಯುವ ಕಳ್ಳತನ.ಅಲ್ಲಿನ ಹುಡುಗರು ಇದಕ್ಕಾಗಿ ನಿಧಾನಕ್ಕೆ ಚಲಿಸುವ ರೈಲಿನ ಹತ್ತಿರ ಬಂದು ಫೋನಿನಲ್ಲಿ ಮಾತಾಡುವರನ್ನು ಗಮನಿಸುತಿರುತ್ತಾರೆ.
ಯಾರಾದರು ಕಂಡೊಡನೆ ಅವರ ಕೆನ್ನೆಗ ಹೊಡೆಯುತ್ತಾರೆ.ಅವರು ಆ ರಭಸಕ್ಕೆ ತಮ್ಮ ಕೈನಲ್ಲಿದ್ದ
ಮೊಬೈಲ್ ಬಿಡುತ್ತಾರೆ.ಆಗ ಮೊಬೈಲ್ ಕಳೆದುಕೊಳ್ಳತ್ತಾರೆ.ಅದನ್ನು ಆ  ಹುಡುಗರು ಎತ್ತಕೊಂಡು ಹೋಗಿ ಸಿಕ್ಕಷ್ಟಕ್ಕೆ ಮಾರಿಕೊಳ್ಳುತ್ತಾರೆ.ಇದಕ್ಕೆ ಆ ರೈಲ್ವೆ ಪೊಲಿಸರು
ಕೊನೆಕಾಣಿಸಬೇಕು.
ಮೆಜೆಸ್ಟಿಕ್ ಅ೦ಡರ್ ಪಾಸ್ ಹಲವರ ಪಾಲಿಗೆ ಹಲವು ವ್ಯವಹಾರಗಳ ಅಡ್ಡ...ಆ ಜಾಗದಲ್ಲಿ ಸಾವಿರಾರು ಜನರು ತಿರುಗಾಡುತ್ತಿರುತ್ತಾರೆ,,ನಾನು ಅಲ್ಲಿ ಹೋಗುತ್ತಿರುವಾಗ
ಇಬ್ಬರು ಒಬ್ಬರು ಪುರುಷ ಒಬ್ಬರು ಮಹಿಳೆ..ಇಬ್ಬರು ಕುರುಡರು.ಅವರು ಗ೦ಡ
ಹೆ೦ಡತಿಯರೋ ಅಲ್ಲವೊ ಗೊತ್ತಿಲ್ಲ..ಆದರೆ ಇಬ್ಬರು ಒ೦ದು ಕೈ ಚಾಚಿ ಹೋಗಿ ಬರುವವರನ್ನು ಸಹಾಯ ಮಾಡುವ೦ತೆ ಕೋರಿಕೊಳ್ಳುತ್ತ ನಿ೦ತಿದ್ದರು..ಅವರು ಏನು
ಮಾತಾಡದೆ ಇಬರು ಮೌನವಾಗಿ ಸುಮ್ಮನೆ ನಿ೦ತಿದ್ದರಷ್ಟೆ..ಆ ವ್ಯಕ್ತಿ ಆ ಮಹಿಳೆಯ
ಕೈಯನ್ನು ಇನ್ನೊ೦ದು ಕೈನಲ್ಲಿ ಹಿಡಿದು ನಿ೦ತಿದ್ದ..ಇಬ್ಬರು ಸಹಾಯ ಯಾಚಿಸುತ್ತ ನಿ೦ತುದ್ದರು...ಯಾರೊಬ್ಬರು ಅವರತ್ತ ತಿರುಗಿ ನೋಡುವ ವ್ಯವಧಾನ ಹೊ೦ದಿರಲಿಲ್ಲ.
.ಅವರನ್ನು ನೋಡಿದರೆ ಕರುಳು ಕಿತ್ತು ಬರುವ೦ತಿತ್ತು..ಮನಸ್ಸಿಗೆ ಬಹಳ ಬೇಸರವೆನಿಸುತಿತ್ತು....
ಆದರೆ ಆ ದೇವರೆ ಅವರಿಗೆ ಸಹಯಾ ಮಾಡಬೇಕಿತ್ತಷ್ಟೆ....
ಮೆಜೆಷ್ಟಿಕ್ ಹಾಗು ಸಿಟಿ ರೈಲ್ವೆ ನಿಲ್ದಾಣಕ್ಕೆ ಸ೦ಪರ್ಕ ಕಲ್ಪಿಸುವುದು ಒ೦ದು ಅ೦ಡರ್ ಪಾಸ್ ಅದು ಬಿಟ್ಟರೆ ಬೇರಿ ಯಾವುದೇ ಸನಿಹದ ಮಾರ್ಗವಿರಲ್ಲ..ಬಿ.ಬಿ.ಎ೦.ಪಿ
ಅಲ್ಲೊ೦ದು ಬ್ರಿಡ್ಜ್ ಮೇಲ್ಸೇತುವೆ ನಿರ್ಮಿಸಿದರೆ ಬಹಳ ಅನುಕೂಲವಾದೀತು...
ನೀವೆಲ್ಲಾ ಬೆಂಗ್ಳೂರು ನಿವಾಸಿಗಳಲ್ವೇ...
ನೀವ್ ಬೆಂಗಳೂರ್ನ ಪೂರ್ತಿ ನೋಡಿದಿರಾ
ನೋಡಿದ್ರೆ ಒಂದ್ನಿಮಿಷ ಅಲ್ಲಿರಲ್ಲ.ಯಾಕ್ ಗೊತ್ತಾ?
ನೀವು ನೋಡಿರೊ ಮಾಲ್ ಮಲ್ಟಿಪ್ಲೆಕ್ಸ್ ಪಾರ್ಕ ಹೊಟೆಲ್ ರೆಸ್ಟೊರೆಂಟ್ ಹೈಟೆಕ್ ಸಿಟಿ ಬ್ಯಾಂಗ್ಳೂರ್.
ಆದ್ರೆ ಮೆಜೆಸ್ಟಿಕ್ ಸಮೀಪ ಇರುವ ಸ್ಲಮ್ ಗಳನೊಮ್ಮೆ ನೋಡಿದರೆ ಹೈಟೆಕ್,ಸಿಲಿಕಾನ್ ಸಿಟಿ ಬೆ೦ಗಳುರಿನ ನಿಜ ಜೀವನ ದರ್ಶನವಾಗುತ್ತದೆ. ಅಲ್ಲಿನ ಗಲ್ಲಿ ಗಳನ್ನು ಮನೆಗಳನ್ನು ನೋಡಿದರೆ ಅಬ್ಬ ಔಸಿರು ಕಟ್ತಿಸುವ೦ತ ಜಾಗ ಅದು..
ಒಂದಿಂಚು ಜಾಗ ಬಿಡದೆ ಒತ್ತೊತಿಗೆ ಕಟ್ಟಿರೊ ಮನೆಗಳು
ಚರಂಡಿ ನೀರು ಹರಿಯಲು ಸಾಧ್ಯವಿರದಂತೆ ಕಟ್ಟಿರೋ ಗೋಡೆಗಳು.ಉಸಿರಾಡಲು ಸಾಧ್ಯವಿಲ್ಲದಂತೆ ಗಾಳಿಯು ನುಸುಳಲಾಗದಂತೆ ಪಕ್ಕಪಕ್ಕಕ್ಕೆ ಕಟ್ಟಿದ್ದಾರೆ.ಒರ್ವ ಧಡೂತಿ ವ್ಯಕ್ತಿಯಂತು ಅಲ್ಲಿ ಹೋಗಲು ಸಾಧ್ಯವೇ ಇಲ್ಲ.
ಇವೆಲ್ಲಾ ಕಾಣುವುದು ನೀವು ಹುಬ್ಬಳ್ಳಿ ಶಿವಮೊಗ್ಗ
ರೈಲಿನಲ್ಲಿ ಯಶವಂತಪುರ ಮೂಲಕ ಬೆಂಗಳೂರೂ ಪ್ರವೇಶಿಸುವಾಗ ಕಾಣುವ ಐಟಿ ಬಿಟಿ ಸಿಟಿ ಸಿಲಿಕಾನ್ ಸಿಟಿ ಬೆಂಗಳೂರಿನ ಮತ್ತೊಂದು ವೈಭೋಗ.ನೋಡುವ
ನಮಗೆ ಇಲ್ಲಿ ಹೇಗೆ ಜೀವಿಸುತ್ತಾರೋ ಏನಿಸುತ್ತದೆ.
ಇದು ಯಶವಂತಪುರದಿಂದ ಮೆಜೆಸ್ಟಿಕ್ ವರೆಗೂ ಸ್ಲಮ್ ಬಾಲ ಸಿಗುತ್ತದೆ.ನಡುವೆ ಮಲ್ಲೇಶ್ವರಂ ಬಿಟ್ಟು.ರಾಜಕಾಲುವೆಯ ಕಟ್ಟೆಯ ಮೇಲು ಬಿಡದೆ ಕಟ್ಟಿಕೊಂಡಿದ್ದಾರ.ಆ
ವಾಸನೆ ಸೊಳ್ಳೆ ಕಾಟ ಕ್ರಿಮಿ ಕೀಟ ಗಳಿಂದ ಖಾಯಿಲೆ ಬರುವುದಿಲ್ಲವೆ..,.
ಅದಲ್ಲದೆ ಅಲ್ಲೊಂದು ಕೆರೆ ಇದೆ ಸ್ಲಮ್ ಪಕ್ಕವೇ.ಅಲ್ಲಿ ಆ ಕೆರೆಗೆ ಇಡೀ ನಗರದ ತ್ಯಜ್ಯಾ ವಿಲೇವಾರಿಯಾಗುತ್ತದೆ.ಸ್ಲಮ್ ಮಕ್ಕಳು ಅಲ್ಲಿ ಬಂದು ಆ ಕೊಳಕು ನೀರಿನೊಳ
ಗೆ ಸಾಹಸದವಾಟವಾಡುತ್ತಾರೆ.ಅದು ರೋಗವನ್ನು ಆಹ್ವಾನಿಸಿದಂತೆ ಸರಿ.
ಬೆ೦ಗಳುರನ್ನು ಸಿ೦ಗಪೂರ್ ಮಾಡಿದರೆ ಅದು ನಿಜಕ್ಕು ಹೆಮ್ಮೆಯ ವಿಷಯವೆ..ಈಗಿನ ಅಭಿರೄದ್ಧಿಯ ದಿಕ್ಸೂಚಿಯೇ ಸರಿ..ಮೆಟ್ರೋ,ಬುಲೇಟ್ ಟ್ರೈನ್ ಟ್ರಾಕ್ ಪ್ರಸ್ತಾಪ್
ಬೆ೦ಗಳುರನ್ನು ಇನ್ನಷ್ಟು ವೇಗವಾಗಿ ಬೆಳೆಸಬಹುದು,,,ಆದರೆ ಅದಕ್ಕು ಮುನ್ನ ಇರುವ ಕೊಳಚೆ
ಪ್ರದೇಶವನ್ನು ಸ೦ಪೂರ್ಣ ಖಾಲಿ ಮಾಡಿ ಬೆ೦ಗಳುರನ್ನು ಸು೦ದರ ನಗರವನ್ನಾಗಿಸಬೇಕು ಎ೦ಬುದೇ ನಮ್ಮ ಆಶಯ.....