"ಸಂಪದ"ದ ಕೊನೆಯ ದಿನಗಳು

"ಸಂಪದ"ದ ಕೊನೆಯ ದಿನಗಳು

ಬರಹ

ಸಂಪದ ಕನ್ನಡ ಸಮುದಾಯ
ಸದಸ್ಯರ ಗಮನಕ್ಕೆ:

ಭಾರತ ಸರ್ಕಾರ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ನಮ್ಮ ಸರ್ಕಾರ ಕನ್ನಡದ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.
ಮೂಲ ಆದೇಶದಲ್ಲಿ "ಸಾಮಾಜಿಕ ಹಾಗು ರಾಜಕೀಯ ಅಭದ್ರತೆಗೆ ಈ ವೆಬ್‌ಸೈಟ್‌ಗಳು ಕಾರಣವಾಗಿರುವುದರಿಂದ ಈ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ" ಎಂಬ ಕಾರಣ ಕೊಡಲಾಗಿದೆ.

ಕರ್ನಾಟಕ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಿ ಪಾಲಿಸದ ವೆಬ್‌ಸೈಟ್ ಮಾಲಿಕರನ್ನು ಬಂಧಿಸಲು ನಿರ್ಧರಿಸಿದೆ. ಈ ಸಲುವಾಗಿ 'ಸಂಪದ'ದ ನಿರ್ವಹಣೆ 'ಸಂಪದ'ದಲ್ಲಿ ನಡೆದಿರುವ ಹಲವಾರು ಮಾತು, ಚರ್ಚೆಗಳನ್ನು ಕೂಡಲೆ ಅಳಿಸಿ ಹಾಕುವುದರ ಜತೆಗೆ ಮೂರು ದಿನಗಳ ಒಳಗೆ ಇಡೀ ವೆಬ್ಸೈಟನ್ನು ಮುಚ್ಚುಹಾಕುತ್ತಿದ್ದೇವೆಂದು ಅಧಿಕೃತವಾಗಿ ಈ ಮೂಲಕ ತಿಳಿಸುತ್ತ ಖೇದ ವ್ಯಕ್ತಪಡಿಸುತ್ತಿದ್ದೇವೆ.

- 'ಸಂಪದ' ನಿರ್ವಹಣೆ

(ಈ ಸೂಚನೆ ರೆಡಿ ಮಾಡಿದ [:user/anivaasi|'ಅನಿವಾಸಿ'ಯವರಿಗೆ] 'ಸಂಪದ'ದ ಸಮಸ್ತ ಸದಸ್ಯರ ಪರವಾಗಿ ವಂದನೆಗಳು).