ಹಲ್ಮಿಡಿ ಶಾಸನ

ಹಲ್ಮಿಡಿ ಶಾಸನ

ಬರಹ

ಇತಿಹಾಸಜ್ಞ ಎಂ ಎಚ್ ಕೃಷ್ಣ ಅವರು ಹಾಸನ ಜಿಲ್ಲೆಯಲ್ಲಿ ಸಂಶೋಧನಾ ಸಂಚಾರ ನಡೆಸಿದ್ದಾಗ ದನಗಳನ್ನು ಕಟ್ಟಿದ್ದ ಕಲ್ಲಿನ ಗೂಟವೊಂದು ಅವರ ಗಮನ ಸೆಳೆಯಿತು. ಅದು ವಿಶಿಷ್ಟ ಆಕಾರದಲ್ಲಿತ್ತು ಮಾತ್ರವಲ್ಲ ಅದರ ಮೇಲೆ ಅಕ್ಷರಗಳನ್ನು ಕೆತ್ತಲಾಗಿತ್ತು. ರೇಡಿಯೋಕಾರ್ಬನ್ ಡೇಟಿಂಗ್ ಮೂಲಕ ಆ ಕೆತ್ತನೆ ಕ್ರಿಸ್ತಶಕ ೪೫೦ರ ಸುಮಾರಿನದೆಂದು ತಿಳಿದುಬಂತು. ಅಕ್ಷರಗಳನ್ನು ಓದಿದಾಗ ಅದರಲ್ಲಿ ಪ್ರಸ್ತಾಪವಾಗಿದ್ದ ಕದಂಬ ಕಾಕುತ್ಸ್ಥವರ್ಮನ ಹೆಸರು ಸಹ ಈ ವಾದಕ್ಕೆ ಇಂಬುಗೊಟ್ಟಿತು.ಅದೇ ನಮ್ಮ ಪ್ರಸಿದ್ಧ ಹಲ್ಮಿಡಿ ಶಾಸನ.

ಆ ಶಾಸನವನ್ನು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಸರ್ಕಾರಿ ಪ್ರಾಚ್ಯವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಾಂಛನವಾಗಿ ಈ ಶಾಸನದ ಪ್ರತಿಕೃತಿಯನ್ನು ಅಳವಡಿಸಿಕೊಳ್ಳಲಾಗಿದೆ.

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಕೆ ವಿ ನಾರಾಯಣರ ಲೇಖನಕ್ಕೆ ಪೂರಕವಾಗಿ ಈ ಶಾಸನದ ಪ್ರತಿಕೃತಿಯನ್ನು ಮುದ್ರಿಸಿದ್ದಾರೆ.

http://www.prajavaniepaper.com/pdf/2008/11/23/20081123h_001100002.jpg

ಶಾಸನದ ತಲೆಯ ಭಾಗದಲ್ಲಿರುವ ಚಕ್ರಾಕಾರದ ಸುತ್ತಲಿನ ಅಕ್ಷರಗಳು ಇಂತಿವೆ:

ಜಯತಿಶ್ರೀಪರಿಶ್ವಙ್ಗಶಾರ್‍ಙ್ಗವ್ಯಾನತಿರಚ್ಯುತಃದಾನವಾಕ್ಷ್ಣೋರ್ಯುಗಾನ್ತಾಗ್ನಿಶಿಷ್ಟಾನಾನ್ತು ಸುದರ್ಶನಃ

ಬಹುಶಃ ಇದರರ್ಥವನ್ನು ನಮ್ಮ ಹಂಸಾನಂದಿಗಳು ಚೆನ್ನಾಗಿ ವಿವರಿಸಬಲ್ಲರೇನೋ?

 

ಪ್ರೀತಿಯಿಂದ

ಸಿ ಮರಿಜೋಸೆಫ್