ದಡ ಕಾಣದ ಯಾನ- ಜೀವನ

ದಡ ಕಾಣದ ಯಾನ- ಜೀವನ

ಬರಹ

ಬಾಯಾರಿಸಿ ದಣಿವಾರಿಸಿಕೋ
ನಿಲ್ಲದಿರಲಿ ಪಯಣ
ಗರಿ ಬಿಚ್ಚಿ ಎದೆ ಸೆಟೆಸಿಕೋ
ಮುಂದುವರಿಯಲಿ ಯಾನ

ತುಂಬು ನೀರ ನದಿಯಿರಲಿ
ದಡ ಕಾಣದ ಯಾನ
ಇವು ಯಾವುವೂ ತರದಿರಲಿ
ಈ ಪಯಣಕೆ ವಿಘ್ನ

ಛಲವಿರಲಿ ಹುರುಪಿರಲಿ
ಗುರಿಸೇರುವ ಹಸಿವಿರಲಿ
ಆ ಗಮ್ಯದ ಈ ದೂರವ
ಕ್ರಮಿಸುವ ಮನಸ್ಸಿನಲಿ

ಈ ಜಗದೇ ಶಕ್ತಿಯೊಂದಿದೆ
ಎಲ್ಲದರ ಹಿಂದೆ
ನಿನ್ನಾವೆಗೆ ಅಂಬಿಗ ನೀ
ಸಾಗುತಲಿರು ಮುಂದೆ

ಕೂಡಿ ಬಾಳುವ ನೀತಿಯಲೇ
ಬಾಳರಳ್ವದು ಕಣಾ
ಪರಿಸರದೇ ಸ್ನೇಹದಲೇ
ಇಹುದೊಲುಮೆಯ ಗುಣ

ಬೆಳ್ಳಾಲ ಗೋಪಿನಾಥ ರಾವ್
ಅಶ್ವಥ್ ನಗರ
ಬೆಂಗಳೂರು 94