ಕಾಗದ ಬಂದಿದೆ-ಓದುವಿರಾ?

ಕಾಗದ ಬಂದಿದೆ-ಓದುವಿರಾ?

ಬರಹ

ಯಾವುದೋ ಹಳೆಯಪುಸ್ತಕ ಓದುತ್ತಿದ್ದೆ. ಅದರಲ್ಲಿದ್ದ ಒಂದು ಕಾಗದ ನನ್ನನ್ನು ಆಕರ್ಷಿಸಿತು.೧೯೪೫ ರಲ್ಲಿ ನಮ್ಮ ಸೋದರಮಾವ ನಮ್ಮ ತಾತನಿಗೆ ಬರೆದಿರುವ ಪತ್ರವದು. ಆ ಮೋಡಿ ಅಕ್ಷರವನ್ನು ಸಂಪದ ಓದುಗರಿಗೆ ತೋರಿಸ ಬೇಕೆನಿಸಿತು. ಫೋಟೋ ತೆಗೆದು ಅಪ್ ಲೋಡ್ ಮಾಡಿರುವೆ. ನನಗೆ ಅದರಲ್ಲಿ ಇನ್ನೂ ಹೆಚ್ಚು ಆಕರ್ಷಿಸಿದ್ದು-" ಇದು ನಾಜೂಕಿನ ಕಾಲ, ಮದುವೆಯನ್ನು ಒಂದೇ ದಿನ ಮಾಡಿದರೆ ಸಾಕು, ಹೊಳೇನರಸೀಪುರದಲ್ಲಾದರೆ ಖರ್ಚು ಜಾಸ್ತಿ, ಮಾವಿನಕೆರೆಯಲ್ಲಿ ಮಾಡೋಣ. ಬೆಳಿಗ್ಗೆಯೇ  ವರಪೂಜೆ ಮಾಡಿಕೊಂಡು ಅಂದೇ ಮದುವೆ ಮಾಡಿ ಮುಗಿಸೋಣ" ಇದು ಕಾಗದದಲ್ಲಿ ನಾನು ಓದಿದ್ದು. ಚಿತ್ರವನ್ನು ದೊಡ್ದದು ಮಾಡಿಕೊಂಡು ಪೂರ್ಣ ಓದಬಹುದು.ಇಂದಿನ ಮದುವೆಯ ಸಂಬ್ರಮ, ಅದರಖರ್ಚು, ಎಲ್ಲವನ್ನೂ ನೋಡಿದರೆ, ಅಂದಿನ ಸ್ಥಿತಿ ಹೇಗಿತ್ತು! ನೋಡಿ. ನಮ್ಮ ಕಾಲದಲ್ಲಿ ಮದುವೆ ಎಂದರೆ ಒಂದ ವಾರ ನಡೆಯುವ ಕಾರ್ಯಕ್ರಮ ಎನ್ನುವವರೂ ಇದ್ದಾರೆ. ಆದರೆ ಈ ಕಾಗದ ಅಂದಿನ ಹಣಕಾಸಿನ ಮುಗ್ಗಟ್ಟಿಗೆ ಹಿಡಿದ ಕನ್ನಡಿಯಲ್ಲವೇ?

ಚಿತ್ರ ಪುಟದಲ್ಲಿ ಮತ್ತೆರಡು ಕಾಗದಗಳ ಫೋಟೋ ಇದೆ.ಇಲ್ಲಿ ಕ್ಲಿಕ್ಕಿಸಿ ನೋಡಬಹುದು
http://sampada.net/image/15497
http://sampada.net/image/15496