ಪೂಜೆಗೆ ಬೇಕಾಗುವ ೮ ಹೂವುಗಳು
ಬರಹ
ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿನ್ದ್ರಿಯ ನಿಗ್ರಹಃ|
ಸರ್ವಭೂತದಯಾಪುಷ್ಪಂ ಸತ್ಯಪುಷ್ಪಂ ವಿಶೇಷತಃ||
ಜ್ಞಾನಪುಷ್ಪಂ ತಪಃಪುಷ್ಪಂ ಕ್ರಿಯಾಪುಷ್ಪಂ ತಥೈವ ಚ|
ಧ್ಯಾನಂಚೈವಾಷ್ಟಮಂ ಪುಷ್ಪಂ ಏಭಿಸ್ತುಷ್ಯತಿ ಕೇಶವಃ||
೧. ಅಹಿಂಸೆ -ಯಾರನ್ನೂ ಹಿಂಸಿಸದಿರುವುದು.
೨. ಇಂದ್ರಿಯ ನಿಗ್ರಹ - ಎಲ್ಲವನ್ನು ಬಯಸುವ ಇಂದ್ರಿಯಗಳಿಗೆ ಸೂಕ್ತ ಕಡಿವಾಣ.
೩. ಸರ್ವಭೂತದಯೆ - ಎಲ್ಲಾ ಜೀವಿಗಳಲ್ಲಿ ದಯೆ.
೪. ಸತ್ಯ - ಸತ್ಯವನ್ನೇ ನುಡಿಯುವುದು.
೫. ಜ್ಞಾನ - ಒಳ್ಳೆಯ ತಿಳುವಳಿಕೆ.
೬. ತಪಸ್ಸು - ಉತ್ತಮ ಚಿಂತನೆ.
೭. ಕ್ರಿಯೆ - ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದು, ಉತ್ತಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವುದು.
೮. ಧ್ಯಾನ - ಅನುಕ್ಷಣ ಪರಮಾತ್ಮನ ಇರವನ್ನು ಅನುಭವಿಸುವುದು.
ಅನುದಿನವೂ ಈ ಹೂವುಗಳಿಂದ ದೇವರನ್ನು ಪೂಜಿಸಿರಿ. ಈ ಶ್ಲೋಕದ ಮೂಲ ಶ್ರೀಮದ್ಭಾಗವತ ಇರಬೆಕು, ಸರಿಯಾಗಿ ಗೊತ್ತಿಲ್ಲ. ನನಗೆ ಹೊಳೆದಂತೆ ಸ್ಥೂಲಾರ್ಥ ಬರೆದಿದ್ದೇನೆ, ತಪ್ಪಿದ್ದರೆ ಸಂಪದಿಗರು ತಿಳಿಸಬೇಕು.