ವಿಧ: ಬ್ಲಾಗ್ ಬರಹ
March 24, 2006
ನಮಸ್ಕಾರ,
ಇದು ನನ್ನ ಮೊದಲನೆಯ ಬ್ಲಾಗ್. ಇಡೀ ಪ್ರಪಂಚ ಬ್ಲಾಗ್ ಮಯವಾಗ್ತಿದೆಯಲ್ವಾ? ಎಲ್ಲಿ ನೋಡಿದರೂ, ಯಾರನ್ನು ಮಾತಾಡಿಸಿದರೂ ಬ್ಲಾಗ್, ಬ್ಲಾಗ್, ಬ್ಲಾಗ್.
ಹೀಗೆ ಎಲ್ಲಾರೂ ಬ್ಲಾಗಿಸಲು ತೊಡಗಿರುವಾಗ (ಅದರಲ್ಲೂ ಕನ್ನಡದಲ್ಲಿ) ನಾನು ಹೇಗೆ ಸುಮ್ಮನೆ ಕೂರೋದು ನೀವೇ ಹೇಳಿ? ಅದಕ್ಕೇ ಶುರು ಮಾಡಿದ್ದು :)
ಇದೊಂತರ, ಯಾರ ಮುಲಾಜೂ ಇಲ್ಲದೇ ಬರೀತಾ ಹೋಗೋದು ಮಜ ಅನ್ನಿಸ್ತಿದೆ. ಕವಿ ಶಿವರುದ್ರಪ್ಪನವರು ಬರೆದ ಹಾಗೆ (ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ) ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ…
ವಿಧ: ಬ್ಲಾಗ್ ಬರಹ
March 24, 2006
"ಸ್ಟಾರ್ ವನ್" ಟೀವಿ ಚಾನೆಲ್ನಲ್ಲಿ ಬರುವ 'ಇಂಡಿಯನ್ ಲಾಫ್ಟರ್ ಚಾಲೆಂಜ್" ಎಂಬ ಹಾಸ್ಯ ಕಾರ್ಯಕ್ರಮದಿಂದ ಹೆಕ್ಕಿದ್ದು.
ಈ ಕಾರ್ಯಕ್ರಮದಲ್ಲಿ ಶೇಕರ್ ಸುಮನ್ ಮತ್ತು ನವಜೋತ್ ಸಿಂಗ್ ಸಿದ್ದು ತೀರ್ಪುಗಾರರು.
ಸ್ಪರ್ಧಿಯೊಬ್ಬ ಶೇಕರ್ ಸುಮನ್ ಮತ್ತು ಸಿದ್ದು ಕಡೆ ಕೈ ತೋರಿಸುತ್ತಾ,
"ಹಮಾರೆ ಸಾಮ್ನೆ ಭೈಟೆ ಹುಯೆ ಹೇ ದೋ...'
(ಶೇಕರ್ ಸುಮನ್ನ್ನು ತೋರಿಸುತ್ತಾ)ಏಕ್ ಹೇ ಸಮಝ್ದಾರ್ (ಸಿದ್ದುವನ್ನು ತೋರಿಸುತ್ತಾ)ಔರ್ ಏಕ್ ಹೆ ಸರ್ದಾರ್" ಎಂದ.
ಸಿದ್ದುವಿನಿಂದ ಆ ಕ್ಷಣದಲ್ಲೆ ಪ್ರತ್ಯುತ್ತರವು ಬಂತು:"…
ವಿಧ: ಬ್ಲಾಗ್ ಬರಹ
March 24, 2006
ಒಬ್ಬ ಮನುಷ್ಯನ ವ್ಯಕ್ತಿ ವಿಶೇಷದಲ್ಲಿ ಅವನು ಯಾರಿಗೂ ಹೇಳಿಕೊಂಡಿರದ ಹೇಳಬಾರದ ಗುಟ್ಟುಗಳು , ಖಾಸಗಿ ಸಂಗತಿಗಳು ಇರುತ್ತವೆ. . ಈ ಗುಟ್ಟು ಖಾಸಗಿ ಸಂಗತಿಗಳೇ ಅವನ ವ್ಯಕ್ತಿತ್ವ, ಚಹರೆ ಎಲ್ಲವೂ . ಮನೋವಿಜ್ಞಾನಿ ಎರಿಕ್ಸನ್ ಪ್ರಕಾರ ಒಬ್ಬ ಮನುಷ್ಯ ವಯಸ್ಸಿಗೆ ಬಂದ ಪ್ರಬುದ್ಧನಾದ ಅಂದರೆ ತನ್ನ ತಪ್ಪುಗಳನ್ನು ಗುಟ್ಟುಗಳನ್ನು ತನ್ನಲ್ಲೇ ಇಟ್ಟುಕೊಂಡು ಆತ್ಮ ವಿಮರ್ಷೆ ಮಾಡಿಕೊಂಡು ಬೆಳೆಯಬಲ್ಲ ಹಂತಕ್ಕೆ ಬಂದ ಎಂದೇ ಅರ್ಥ .ಅದಕ್ಕೇ ಹೇಳುವದು ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹತ್ತಿರ ಯಾವುದೇ…
ವಿಧ: ಬ್ಲಾಗ್ ಬರಹ
March 24, 2006
ದು:ಖ ಸಾಗರದಲ್ಲಿ ಸುಖದ ಬಿಂದಿಗೆ
ಹಿಡಿದು ,ನೆಲಸಿಗದೆ ನಿಲಲು ,
ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,
ಪ್ರತಿಹನಿಯು ಸುಖವೋ ಪಂಡಿತಪುತ್ರ ||
--ಬಹಳಶ್ಟು ಮಂದಿ... ಸುಖವು ಎಲ್ಲೋ ಇದೆ ಎಂದು ತಿಳಿದು...ಸಾಹಸ ಮಾಡಿ ಅದನ್ನು ಪಡೆಯಲು ಹೋಗುತ್ತೇವೆ...ಸುತ್ತಲಿರುವುದೆಲ್ಲಾ ದು:ಖ..ಸುಖ ಬೇರೆಲೋಕದಲ್ಲೆಲ್ಲೋ ಇದೆಯೆಂದು, ಅದನ್ನು ಪಡೆಯಲು ಏನೆಲ್ಲಾ ಸಾಹಸ ಮಾಡುತ್ತೇವೆ...ಸಾಧ್ಯವಾಗದಿದ್ದರೆ ಮತ್ತೆ ದು:ಖಿತರಾಗುತ್ತೇವೆ....ಅದರಬದಲು ನಮ್ಮಲ್ಲೇ ಅಡಗಿರುವ ಸುಖದ ಪ್ರಜ್ನೆಯನ್ನು ಜಾಗ್ರುತ…
ವಿಧ: ಬ್ಲಾಗ್ ಬರಹ
March 24, 2006
ಕಳೆದ ಮೂರು ತಿಂಗಳಲ್ಲಿ ಸಂಪದ(www.sampada.net) ಕ್ಕೆ ನನ್ನ ಮೆಚ್ಚಿನ ಝೆನ್ ಕಥೆಗಳನ್ನು ಸೇರಿಸಿದ್ದಾಯಿತು , ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ವಿಮರ್ಶೆ ಎಂಬ ಹೆಸರಿನಲ್ಲಿ ಬರೆದಿದ್ದಾಯಿತು. ನಾನು ಪದ ಜೋಡಣೆ ಮಾಡಿದ ಒಂದೆರಡು ಕವನಗಳನ್ನು ಪ್ರಕಟಿಸಿದ್ದಾಯಿತು. 'ತಾರಕ್ಕ ಬಿಂದಿಗೆ' ಮಾದರಿಯಲ್ಲಿ ಬರೆದ 'ತೆರೆಯೋ ಬ್ರೌಸರ್ರು' ಹಾಡಿಗೆ ಮಜಾವಾಣಿಯ ಪ್ರತಿಕ್ರಿಯೆ ಹೊಟ್ಟೆ ಹುಣ್ಣಾಗಿಸುವಂತಿತ್ತು. ನನಗೆ ಬೇಡವಾದ ಪುಸ್ತಕಗಳ ವಿಲೇವಾರಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತು. ಹೀಗಾಗಿ ನಾನೂ…
ವಿಧ: Basic page
March 24, 2006
ಒಬ್ಬ ರಾಜ ಗುರುವಿಗೆ ಕೇಳುತ್ತಾನೆ. ' ಜ್ಞಾನೋದಯವಾದವನು ಸತ್ತ ನಂತರ ಏನಾಗುತ್ತಾನೆ? '
ಗುರು ಹೇಳುತ್ತಾನೆ ' ನನಗೆ ಗೊತ್ತಿಲ್ಲ' .
'ಆದರೆ ನೀವು ಜ್ಞಾನಿಗಳಲ್ಲವೆ?'
'ಇರಬಹುದು, ಆದರೆ ನಾನು ಈವರೆಗೂ ಸತ್ತಿಲ್ಲ! '
ವಿಧ: Basic page
March 24, 2006
ಕಿತಾಗಾಕಿ ಗುರುವನ್ನು ಭೆಟ್ಟಿಯಾಗಲು ಬಂದ . ಆಗ ಅವನು ಕ್ಯೋಟೊ ಪ್ರಾಂತದ ರಾಜ್ಯಪಾಲನಾಗಿದ್ದ . ತನ್ನ ಗುರುತಿನ ಚೀಟಿಯನ್ನು ಗುರುವಿನ ಸಹಾಯಕನ ಮೂಲಕ ಕೊಟ್ಟು ಕಳಿಸಿದ . ಆ ಚೀಟಿಯಲ್ಲಿ ಹೀಗೆ ಬರೆದಿತ್ತು - " ಕಿತಾಗಾಕಿ , ಕ್ಯೋಟೊದ ಗವರ್ನರ್ ". ಗುರು ಅದನ್ನು ನೋಡಿ ಹೇಳಿದ - " ಗವರ್ನರ್ ಜತೆಗೆ ನನಗೆ ಏನು ಕೆಲಸ ? ಅವನಿಗೆ ಹೋಗಲು ಹೇಳಿ " . ಸಹಾಯಕ ವಿಷಾದ ಸೂಚಿಸುತ್ತ ಆ ಚೀಟಿಯನ್ನು ಹೊರಗೆ ಕಾದು ನಿಂತಿದ್ದ ಕಿತಾಗಾಕಿಗೆ ಮರಳಿಸಿದ . "ನನ್ನದೇ ತಪ್ಪು " ಎಂದ ರಾಜ್ಯಪಾಲ…
ವಿಧ: Basic page
March 24, 2006
ಹೆಚ್ಚಿನ ವಿವರಗಳಿಗಾಗಿ [:http://kn.wikipedia.org/wiki/WP:PM] ನೋಡಿ.
ಕಾರ್ಯಕ್ರಮಕ್ಕೆ ಇಂದೇ [:http://hpnadig.net/Kannada-Wikipedia-Meet|ನೋಂದಾಯಿಸಿಕೊಳ್ಳಿ!]
ವಿಧ: Basic page
March 24, 2006
ಆಸೆ
ನಾನು ಶಾಲೆಯಲ್ಲಿದ್ದಾಗ ಅಪ್ಪ ಒಮ್ಮೆ ಮೊಬೈಲ್ ಕೊಂಡುಕೊಂಡಿದ್ದರು. ರಾಜ್ಯವಿಡೀ ನಮಗಾಗ ಇದ್ದದ್ದು ಒಂದೇ ಒಂದು ಸರ್ವೀಸ್ - 'spice'ಟೆಲಿಕಾಮ್. ಎಲ್ಲೋ ಕೆಲವರು ಹೊತ್ತುಕೊಂಡು ತಿರುಗಾಡುತ್ತಿದ್ದ ಭಾರವಾದ ಮೊಬೈಲ್ ಫೋನುಗಳು ಆಗ ಆಭರಣಗಳಂತೆ. ನೋಕಿಯ ಇದ್ದವರಂತೂ ಸಾಕ್ಷಾತ್ 'ಯಜಮಾನ'ರೇ. ಆಗ incoming callsಗೂ ದುಡ್ಡು!
ಅಪ್ಪನ ಬಳಿ ಇದ್ದ ಮೊಬೈಲ್ ನೋಡಿ ನನಗೂ ಒಂದು ಮೊಬೈಲ್ ಬೇಕೆಂದೆನಿಸಿತ್ತು. ನಮ್ಮ ಕೈಗೆ ಮೊಬೈಲ್ ಸಿಕ್ಕಾಗಲೆಲ್ಲ ಅದರ ಗುಂಡಿಗಳನ್ನು ಅದುಮಿ ಅದನ್ನ explore ಮಾಡುವುದು,…
ವಿಧ: ಬ್ಲಾಗ್ ಬರಹ
March 24, 2006
ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು
ನಮ್ಮಮ್ಮ ಕಳಿಸಿದ್ರು. ನಾನು ಕೆಲವು ಸ್ನೇಹಿತರೊಡಗೂಡಿ ತುಂಗಭದ್ರೆಯಲ್ಲಿ ಈಜಲು ಹೋದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿದು, ಮತ್ತೆ ಉತ್ತರ
ವಾಹಿನಿಯಾಗುವ ಜಾಗೆಯಲ್ಲಿ ನಾವು ಸಾಮಾನ್ಯವಾಗಿ ಈಜಾಡುವುದು ರೂಢಿಯಲ್ಲಿತ್ತು. ಮಧ್ಯ ಒಂದು ಮೊನಚಾದ ತುದಿಯ ಬಂಡೆಯೊಂದು ಎದ್ದು ನಿಂತಿತ್ತು.
ಇದಕ್ಕೆ "ಶಿವ್ರಾತ್ರಿಬಂಡಿ" (ಶಿವರಾತ್ರಿ ಬಂಡೆ) ಎಂಬ…