ಎಲ್ಲ ಪುಟಗಳು

ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 23, 2006
ಆತ್ಮೀಯ ಸ್ನೇಹಿತರೇ, ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ತುಂಬಾ ಚೆನ್ನಾಗಿರುವ ಪಾಲೀಶೇ ಮಾಡದಿರುವ ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ ಅಥವಾ ಮುಂಡಗ ಅಕ್ಕಿ)ಸಿಕ್ಕುತ್ತಿದೆ. ದಯವಿಟ್ಟು ನನ್ನ ಗುರುತು ಹೇಳಿ ಆ ಅಕ್ಕಿಯನ್ನು ಎಲ್ಲರೂ ತೆಗೆದುಕೊಳ್ಳುವುದು. ಶ್ರೀ ಸುಧಾಕರ್ ಶರ್ಮ ಟಾಸ್ಕ್ ಮಾಸ್ಟರ್ಸ್(ಇಕೋಗಾರ್ಡ್ಸ್), ನಂ: ೧೫, 'ಸಂದೇಶ್', ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-೫೬೦ ೦೫೦. ಫೋನ್ : ೨೬೫೨ ೧೯೫೦ ಇದನ್ನು ಕಳುಹಿಸಿದವರು : ಸತ್ಯಪ್ರಕಾಶ್.ಹೆಚ್.ಕೆ.…
ಲೇಖಕರು: shreekant.mishrikoti
ವಿಧ: Basic page
March 23, 2006
ಜು‌ಇಗನ್ ಎಂಬ ಒಬ್ಬ ಭಿಕ್ಷು ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮತ್ತೆಲ್ಲಕ್ಕಿಂತ ಮುಂಚೆ ತನಗೆ ತಾನೇ ಪ್ರಶ್ನೋತ್ತರ ನಡೆಸಿಕೊಳ್ಳುತ್ತಿದ್ದ . ಇಬ್ಬರ ಮಧ್ಯೆ ಅನ್ನುವ ಹಾಗೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿದ್ದ. ಹೀಗೆ- 'ಗುರುವೇ , ಇದ್ದೀರಿ ಅಲ್ಲವೇ ?' 'ಹೌದು ಸ್ವಾಮಿ , ಇದ್ದೇನೆ.' 'ಸರಿ , ಜಾಗೃತನಾಗಿರಬೇಕು, ಕಂಡೆಯ ?' 'ಆಗಲಿ ಸ್ವಾಮಿ , ಜಾಗೃತನಾಗಿರುತ್ತೇನೆ.' 'ಸದಾ ಹುಷಾರಾಗಿ ನೋಡಿಕೊಳ್ಳುತ್ತಿರಬೇಕು, ಯಾರೂ ವಂಚಿಸದ ಹಾಗೆ ' 'ಇಲ್ಲ, ಇಲ್ಲ.…
ಲೇಖಕರು: shreekant.mishrikoti
ವಿಧ: Basic page
March 23, 2006
ಶಿಷ್ಯ ಪ್ರತಿದಿನ ಗುರುವಿನ ಹತ್ತಿರ ಬರುತ್ತಿದ್ದ. ಒಂದು ದಿನ ರಾತ್ರಿ ಹೊತ್ತಾಗಿಬಿಟ್ಟಿತು . 'ಇನ್ನು ಮಲಗಲು ಹೋಗಬಹುದಲ್ಲ?' ಎಂದ ಗುರು. ಶಿಷ್ಯ ಗುರುವಿಗೆ ನಮಸ್ಕರಿಸಿ ಎದ್ದು ತೆರೆ ಸರಿಸಿ ಹೊರ ನೋಡಿದ . 'ತುಂಬ ಕತ್ತಲಾಗಿದೆ' ಎಂದ. 'ತಗೊ, ಈ ಮೇಣದಬತ್ತಿ ತೆಗೆದುಕೊ' ಎಂದು ಗುರು ಅದನ್ನು ಹೊತ್ತಿಸಿಕೊಟ್ಟ . ಶಿಷ್ಯ ಕೈ ನೀಡಿ ಅದನ್ನು ತೆಗೆದುಕೊಂಡ . ಗುರು ಮುಂದಕ್ಕೆ ಬಾಗಿ ಮೇಣದಬತ್ತಿ ಊದಿ ಆರಿಸಿದ.
ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
March 23, 2006
ಅವನಳಿವ ಕೆಲವರು, ಪೂಜಿಪರನೇಕರು. ಸೋತು ತೆಗಳುವರು, ಭಜಿಸುವರು ಜಯದಿ | ನನ್ನೆ ನಾ ತಿಳಿದಿಲ್ಲ ಸವೆಸಿಷ್ಟು ಬಾಳ, ನಾ ಏನ ಹೇಳಲಿ ದೇವನ ಪಂಡಿತಪುತ್ರ || -- ದೇವರ ಇರುವಿಕೆಯ ಬಗ್ಗೆ..ಸಮಾಜದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ...ಕೆಲವರು ಅವನಿಲ್ಲವೆಂದೂ....ಕೆಲವರು ಇದ್ದಾನೆಂದೂ..ವಾದಿಸುತ್ತಾರೆ...ಅವರಿಗೆಲ್ಲಾ ನಾ ಹೇಳುವುದಿಷ್ತ್ಟೆ..ನಾ ಯಾರೆಂಬುದೇ ಇನ್ನೂ ನಾ ಅರಿತಿಲ್ಲಾ..ದೇವರನ್ನು ಏನೆಂದು ಹೇಳಲಿ....ಇನ್ನೊಂದು ರೀತಿಯಲ್ಲಿ....ನಾನು ಯಾರೆಂದು ತಿಳಿದರೆ ದೇವನಾರೆಂದು ತಿಳಿದಂತೆಯೇ…
ಲೇಖಕರು: venkatesh
ವಿಧ: Basic page
March 23, 2006
ಮುಕ್ತ- ಸುಂದರ ಧಾರವಾಹಿ ಈ ಧಾರಾವಾಹಿಯ 'ಕೋರ್ಟ್' ದೃಶ್ಯ ನಿಜವಾಗಿಯೂ ವಿಕ್ರಮವನ್ನು ಸೃಷ್ಟಿಸಿದೆ. ಹಲವಾರು ಕೋನಗಳಿಂದ ಸೀರಿಯಲ್ ಬಹಳ ಪ್ರಭಾವಶಾಲಿಯಾಗಿದೆ. ಆದರೆ ಕೆಲವು ಹಣವಂತ ತಯಾರಕರುಗಳು ಮನರಂಜಯನೆಯ ಹೆಸರಿನಲ್ಲಿ, ಕೀಳು ದರ್ಜೆಯ, ಕಳಪೆ ಸಂಭಾಷಣೆ ಗಳಿಂದ ಕೂಡಿದ, ಗಾಡಿ ಸೆಟ್ ಗಳಿಂದ ವಿಜ್ರಂಭಿಸುತ್ತಿರುವ ಹೊಲಸು ಕಥೆಗಳನ್ನು ಕನ್ನಡದಲ್ಲೂ ತರುತ್ತಿರುವುದು ಶೋಚನೀಯ. ಸೀತಾರಾಮ್ ರವರಿಗೆ ಒಂದು ಸಲಹೆ: ಚರ್ವಿತ, ಚರ್ವಿತ, ಚರ್ವಣ ಯಾವಾಗಲೂ ರುಚಿಸೋದಿಲ್ಲ, ಅದ್ದರಿಂದ ಕೇಸನ್ನು ಎಳೆಯದೇ…
ಲೇಖಕರು: shreekant.mishrikoti
ವಿಧ: Basic page
March 23, 2006
ಪ್ರತಿ ವರ್ಷ ಯುಗಾದಿ ಹಬ್ಬ ಬಂದಾಗ ನನಗೆ ಅನಂತ ಕಲ್ಲೋಳರ ಒಂದು ಹಾಸ್ಯ ಲೇಖನ ನೆನಪಾಗುತ್ತದೆ. ಅವರು ಚಿಕ್ಕವರಿದ್ದಾಗ ಯುಗಾದಿ ಪೂಜೆಗೆ ಅವರ ಅಜ್ಜಿ ಪೂಜಾಕೋಣೆಯಲ್ಲಿ ಪೂಜಾಸಾಮಗ್ರಿಗಳನ್ನು ಅಣಿಮಾಡುತ್ತಿರುವಾಗ ' ಬೇವು ಬೆಲ್ಲದೊಳಿಡಲೇನು ಫಲ ?' ಎಂದು ಪುರಂದರದಾಸರ ಹಾಡನ್ನು ಹಾಡುತ್ತಾ ಅಲ್ಲೇ ಠಳಾಯಿಸುತ್ತಿದ್ದರಂತೆ. ' ಹಬ್ಬದ ದಿನ ಏನು ಅಪದ್ಧ ಹಾಡ್ತೀರೋ? ' ಎಂದು ಬೈಸಿಕೊಂಡರೆ 'ಅಪದ್ಧ ಏನು ಅದರಾಗ, ಮೊನ್ನೆ ಮೊನ್ನೆ ನೀವೆ ಪುರಂದರದಾಸರ ಪುಣ್ಯತಿಥಿ ಮಾಡಿದ್ರಲ್ಲ , ಅವರದS ಹಾಡು ಇದು' ಎಂದು…
ಲೇಖಕರು: sanket
ವಿಧ: ಬ್ಲಾಗ್ ಬರಹ
March 23, 2006
ಸುದ್ದಿಯಲ್ಲಿ ಕೇಳಿದ್ದು, ವೃತ್ತ ಪತ್ರಿಕೆಯಲ್ಲಿ ಓದಿದ್ದು. ಸಂದರ್ಭ: ಅನಂತಮೂರ್ತಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು. ಸ್ವಾರಸ್ಯ: ಸ್ವಾರಸ್ಯವೇ ಸ್ವಾರಸ್ಯ. ಅನಂತಮೂರ್ತಿಯವರು ಪಾಪ ಕುಮಾರಸ್ವಾಮಿಗೆ ಹೇಳದೆ ಕೇಳದೆ ಕಣಕ್ಕಿಳಿದರಂತೆ. ಮಣ್ಣಿನ ಮೊಮ್ಮಗನಿಗೆ ಸಿಟ್ಟು ಬಂದಿರಲಿಕ್ಕೆ ಸಾಕು. ಕುಮಾರಸ್ವಾಮಿ: "ಯಾರ್ರೀ ಅವರು ಅನಂತಮೂರ್ತಿ?" ಆ ಮನುಷ್ಯ ಅಜ್ಞ. ಕ್ಷಮಿಸಿಬಿಡೋಣ. ಇದಾದ ಮೇಲೆ ಕೆಲವರು ಅನಂತಮೂರ್ತಿಯವರ ಪರವಾಗಿಯೂ ಕೆಲವರು ವಿರೋಧಿಸಿಯೂ ಮಾತಾಡಿದರು. ಎಂದಿನಂತೆ…
ಲೇಖಕರು: venkatesh
ವಿಧ: Basic page
March 23, 2006
ಕಸ್ತೂರಿ, ಸುವರ್ಣೋತ್ಸವದ ಹಾದಿಯಲ್ಲಿ.!! ಕನ್ನದ ನಾಡಿನ ಹೆಮ್ಮೆಯ ಮಾಸಪತ್ರಿಕೆ ಕಸ್ತೂರಿ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 50 ವರ್ಷಕ್ಕೆ ಪಾದಾರ್ಪಣೆ ಮಾದುತ್ತಿದೆ. ಈ ಸುದೀರ್ಘ ಸೇವೆ ಸಲ್ಲಿಸಿ, ಕರ್ನಾಟಕದ ನಾಡು ನುಡಿಗೆ ಸೇವೆ ಮಾಡಿರುವ ಪತ್ರಿಕೆ ಶುರುವಾದದ್ದು 1956 ನೇ ವರ್ಷ ಸೆಪ್ಟೆಂಬರ್ ತಿಂಗಳು. ಲೋಕಶಿಕ್ಷಣ ಸಂಸ್ಥೆ ಯ ಹೆಮ್ಮೆಯ ಕೂಸಾದ ಕಸ್ತೂರಿ,ಯನ್ನು ಎತ್ತಿ ಬೆಳೆಸಿದವರು, ಶ್ರಿ. ಮೊಹರೆ ಹನುಮಂತರಾಯರು, ರಂಗನಾಥ ದಿವಾಕರರು, ಮತ್ತು ಪ.ವೆಂ. ಆಚಾರ್ಯ ಅವರು. ಪ.ವೆಂ.…
ಲೇಖಕರು: shreekant.mishrikoti
ವಿಧ: Basic page
March 23, 2006
ಗುರು ಸಿಯುಂಗ್ ಸಾನ್ ತನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದ - " ನೀವು ತಿನ್ನುತ್ತಿರುವಾಗ ಕೇವಲ ತಿನ್ನಿ , ಅಷ್ಟೆ . ಪೇಪರ್ ಓದುವಾಗ ಕೇವಲ ಪೇಪರ್ ಓದಿ, ಅಷ್ಟೆ . ನೀವು ಏನು ಮಾಡುತ್ತೀರೋ ಅದಕ್ಕಿಂತ ಹೊರತಾದದ್ದನ್ನು ಮಾಡಬೇಡಿ , ಎರಡೆರಡು ಕಡೆ ಗಮನ ಹರಿಸಬೇಡಿ . " ಒಂದು ದಿನ ಗುರು ಏನನ್ನೋ ತಿನ್ನುತ್ತ ಪೇಪರ್ ಓದುತ್ತಿರುವದನ್ನು ನೋಡಿದ ಶಿಷ್ಯ ಕೇಳಿದ -" ನಿಮ್ಮ ಬೋಧನೆಗೆ ವ್ಯತಿರಿಕ್ತವಾದದ್ದಲ್ಲವೇ ಇದು ? " ಗುರು ಉತ್ತರಿಸಿದ - " ನೀನು ತಿನ್ನುತ್ತ ಪೇಪರ್ ಓದುತ್ತ…
ಲೇಖಕರು: shreekant.mishrikoti
ವಿಧ: Basic page
March 23, 2006
ಗುರುವಿನ ಹತ್ತಿರ ಒಂದು ಬೆಲೆಬಾಳುವ ಪಿಂಗಾಣಿ ಬಟ್ಟಲು ಇತ್ತು . ಶಿಷ್ಯ ಇಕ್ಯೂ ಒಂದು ದಿನ ಅಕಸ್ಮಾತ್ತಾಗಿ ಒಡೆದುಬಿಟ್ಟ . ಗುರು ಅತ್ತಲೇ ಬರುವದು ಕಂಡಿತು . ಬಟ್ಟಲಿನ ಚೂರುಗಳನ್ನು ಮರೆ ಮಾಡಿಟ್ಟ . ಗುರು ಕಾಣಿಸಿಕೊಂಡ ಕೂಡಲೇ ಅವನನ್ನು ಪ್ರಶ್ನಿಸಿದ. "ಗುರುಗಳೇ , ಯಾವುದೇ ವಸ್ತು ನಾಶವಾಗುವದು ಏತಕ್ಕೆ ?" ಗುರು ಹೇಳಿದ - " ಜಗತ್ತಿನಲ್ಲಿ ಎಲ್ಲವೂ ನಶ್ವರವಾದದ್ದು . ಪ್ರತಿ ವಸ್ತುವಿಗೂ ಅದರ ಸಮಯ ತುಂಬಿ ಬಂದಾಗ ನಾಶವಾಗುತ್ತದೆ" . ಶಿಷ್ಯ ಒಡೆದ ಬಟ್ಟಲಿನ ಚೂರುಗಳನ್ನು ತೋರಿಸಿ ಹೇಳಿದ…