ವಿಧ: Basic page
July 07, 2006
ಮೊನ್ನೆ ಪತ್ರಿಕೆಯಲ್ಲಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ವರದಿಗಳನ್ನ ಓದುತ್ತಿದ್ದೆ. ಈ ಹೆಲ್ಮೆಟ್ ಕಡ್ಡಾಯ ಎನ್ನುವುದು ಒಂದು ರೀತಿಯ ಕಣ್ಣಾಮುಚ್ಚಾಲೆ. ಪ್ರತೀ ವರ್ಷವೂ ತಪ್ಪದೆ ನಡೆಯುವ, ಪ್ರತೀ ಹೊಸ ಸರ್ಕಾರ ಬಂದಾಗಲೂ ಜೀವ ಪಡೆಯುವ ಹೆಲ್ಮೆಟ್ ಆಟ ಸ್ವಲ ದಿನ ಪತ್ರಿಕೆಗಳಿಗೆ ಆಹಾರವಾಗಿ, ಹರಟುವ ಬಾಯಿಗಳಿಗೆ ಸ್ನ್ಯಾಕ್ ಆಗಿ ನಿಧಾನವಾಗಿ ಮೊದಲ ಪುಟದಿಂದ ಮೂರನೆ ಪುಟಕ್ಕೆ, ನಂತರ ಸಣ್ಣ ಸುದ್ದಿಯಾಗಿ ಕಾಣಿಸಿಕೊಂಡು ಕ್ರಮೇಣ ಕಣ್ಮರೆಯಾಗುತ್ತದೆ. ಹೆಲ್ಮೆಟ್ ಕಡ್ಡಾಯ ಬೇಕೇ ಬೇಡವೇ ಎಂಬ ತೀರ್ಮಾನ…
ವಿಧ: ಬ್ಲಾಗ್ ಬರಹ
July 04, 2006
ಪಪ್ಪಾ ಅಯ್ಯಪ್ಪ ಸಾಮಿ ಗುಡಿಗೆ ಹೆಂಗಸರು ಹೋಗೋ ಹಾಗಿಲ್ವಂತೆ...?
ಹೌದು ಮಗು
ಮತ್ತೇ ಸಿನಿಮಾ ತಾರೆಯರು ಹೋಗಿದ್ದರಂತೆ...
ಹೌದು ಮಗು
ಹಾಗೆ ಹೋಗಿದ್ದು ತಪ್ಪಲ್ವಾ...
ಹೌದು ಮಗು, ತಪ್ಪಾಗಿದೇಂತ ಒಬ್ಬ ನಟಿ ಬರೆದೂ ಕೊಟ್ಟಿದಾರೆ
ಪಪ್ಪಾ, ಅವರ್ ನೆಲ್ಲಾ ಯಾರು ಒಳಗ್ ಬಿಟ್ಟಿದ್ದೂ
ಆ ದೇವಸ್ಥಾನದವರೇ ಮಗು...
ಪಪ್ಪಾ, ಅದ್ಹೇಗೆ ಬಿಟ್ರೂ ಆ ಹೆಂಗಸ್ರನೆಲ್ಲ
ಅವರೆಲ್ಲ ಸ್ಟಾರ್ ಗಳೂ ತುಂಬಾ ಫೇಮಸ್ಸೂ ಅದಕ್ಕೇ....
ಪಪ್ಪಾ....... ಮತ್ತೇ...... ಮತ್ತೇ........
ಹೇಳು ಮಗೂ....
ಮತ್ತೇ.. ನನ್ನಮ್ಮಾನೂ…
ವಿಧ: Basic page
July 04, 2006
ಮಾಧವನ ಜನನದಿಂದಭುವನ ಬೃಂದಾವನ./೧/.
ಕೇಶವನಾಗಮನದಿಂದಚಂದನಂದನವನ./೨/.
ಕಂಸಜರಾಸಂಧರಿಂದಕಂಪಿಸಿರಲು ಅವನಿ ಜನ./೩/.
ಧರೆಯನುಳಿಸಲೆಂದು ಬಂದದೇವಕೀನಂದನ./೪/.
ಅಶರೀರವಾಣಿಯಿಂದಕದಡಿರಲು ಕಂಸ ಮನ./೫/.
ಕ್ರೋಧಾವೇಷದಿಂದವಸುದೇವಕಿ ಬಂದನ./೬/.
ಆರ್ಬಟಿಸುವ ಕಂಸನಿಂದಹಸುಳೆಯರ ನಿಧನ./೭/.
ದೇವಕಿಯ ಗರ್ಭದಿಂದದೇವಹರಿಯ ಜನನ./೮/.
ಕಂಸನಾ ಸೆರೆಯಿಂದಗೋಕುಲಕೆ ಪಯಣ./೯/.
ಯಶೋದಾನಂದರಿಂದಗೋಪಾಲನ ಪಾಲನ./೧೦/.
ಹಾಲಾಹಲದಿಂದಪೂತನಿಯ ಮರಣ./೧೧/.
ರಾಕ್ಷಸರ ಮಾಯೆಯಿಂದವ್ಯರ್ಥವಾದ ಪ್ರಯತ್ನ./೧೨/.
ಬೆಳೆಯುತಿರುವ…
ವಿಧ: ಬ್ಲಾಗ್ ಬರಹ
July 04, 2006
೧) ತುತ್ತಿಗೊ೦ದಕ್ಷರವ ಕಲಿಸಿದರೆ ಸಾಕು ನಾಡಮಕ್ಕಳ ಭವಿತವ್ಯಕಿನ್ನೇನು ಬೇಕು? ಬಿಸಿಯೂಟಕೆ೦ದು ತ೦ದಿಟ್ಟ ಸರಕು ಹುಳಿತು ಕೊಳೆಯದೇ ಚಿಣ್ಣರು೦ಡು ಬದುಕುವ೦ತಿದ್ದರೆ ಸಾಕು
೨) ಅಕ್ಷರದ ದಾಸೋಹ ನಡೆದಿಹುದು ನಾಡಲ್ಲಿ, ಭಿಕ್ಷೆಯ೦ದದಿ ತಟ್ಟೆಗಳ ಚಾಚಬೇಕು ಸಾಲಿನಲಿ ಕಲಿಸುವುದ ಕಡೆಗೆಣಿಸಿ, ಗುರುಗಳೇ ಭಟ್ಟರಾಗಿ, ಶಿಸ್ತಿನಾ ಭಟರಾಗಿ ನೋಡಬೇಕಿದೆ ಅಕ್ಕಿ ಬೇಳೆಗಳ ಸರಿಯಾಗಿ ತೂಗಿ!!
೩) ಬಿಸಿಯೂಟದ ಬೇಗೆ ಹಸು ಮಕ್ಕಳ ಬಾಯಿಗೆ, ಎಲ್ಲೆಡೆ ಆಯ್ತು ಕಳಪೆ ಧಾನ್ಯಗಳ ಪೂರೈಕೆ ಪೂರಾ ತಿ೦ದವರ ಎಳೆದೊಯ್ಯಿತು…
ವಿಧ: ಬ್ಲಾಗ್ ಬರಹ
July 04, 2006
ಆರು ವೈರಿಗಳು.
ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ
ಆಶೆಯೆಂಬ ಬೀಜವುಕಾಮಗಿಡದ ಮೂಲವುಗಿಡದ ನಾಶಕಿಂತಲೂಮೂಲನಾಶ ಶ್ರೇಷ್ಠವು
ಕಾಮ ಫಲಿಸದಾಗ ಬರುವವೈರಿಯೇ ಕ್ರೋಧವುಕ್ರೋಧವೂ ನಡೆಯದಾಗಲೋಭ ಪ್ರ-ವೇಶವು.
ಆಶೆ ಕೊಂದ ವ್ಯಕ್ತಿಗೇಭಕ್ತಿ ಕೊಡುವ ಶಕ್ತಿಯಿಂದಕಾಮ ಕ್ರೋಧ ಲೋಭವೆಂಬಶತೃ ನಾಶ ಸುಲಭವು
ನಾಲ್ಕನೆಯ ಶತೃವುಮಾಯಾಮೋಹಪಾಶವುಮೋಹ ನಾಶ ಶಸ್ತ್ರಗಳುಸ್ನೇಹ ಪ್ರೇಮ ಕರುಣೆಗಳು
ಕಂಸ ಜರಾಸಂಧರುಮದಕೆ ದಾಸರಾದರುಮಾಧವನಾ ದೆಸೆಯಿಂದಜೀವ ಕಳೆದುಕೊಂಡರು
ಕೊನೆಯ ವೈರಿ…
ವಿಧ: Basic page
July 03, 2006
೧. ಸಾಲ ಮಾಡಿದವನು ತೀರಿಸಿ ಸಾಯಲ್ಲಿಲ್ಲ, ಮೂಲ ಮಾಡಿದವನು ತಿಂದು ಸಾಯಲ್ಲಿಲ್ಲ.
೨. ಹುಟ್ಟಿದ ಲಾಗಾಯ್ತೂ ಯಜ್ಞಕಾರ್ಯ ಮಾಡದಿದ್ದವನು ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡನಂತೆ.
೩. ಬಳಸದೇ ಬಾವಿ ಕೆಟ್ಟಿತು, ಹೋಗದೇ ನೆಂಟಸ್ತನ ಕೆಟ್ಟಿತು.
೪. ಮನೆಗೊಬ್ಬ ಅಜ್ಜಿ, ಒಲೆಗೊಂದು ಕುಂಟೆ.
೫. ಚೇಳಿನ ಮಂತ್ರವೂ ಗೊತ್ತಿಲ್ಲ, ಹಾವಿನ ಬುಟ್ಟಿಗೆ ಕೈ ಹಾಕಿದಂತೆ.
೬. ಲಂಕೆ ಸುಟ್ಟರೂ ಹನುಮಂತ ಹೊರಗೆ.
೭. ತಲೆ ಬೋಳಿಸಿದರೆ ಸುಳಿ ಹೋಗುತ್ತದೆಯೆ?
೮. ದಿವಾಳಿ ತೆಗೆಯುವವನ ವ್ಯಾಪಾರ ಹೆಚ್ಚಂತೆ, ಆಚಾರ ಕೆಟ್ಟವನ ಪೂಜೆ…
ವಿಧ: Basic page
July 03, 2006
ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು garden city(?) ಬೆಂಗಳೂರಿನಲ್ಲಿ "walking" ಎನ್ನುವ ಹೆಸರಿಗೆ ಅವಮಾನ ಮಾಡುವಂತೆ ತೆವಳಿಕೊಂಡು ಸಾಗುವ ೪೦ ಇಂಚು ಸುತ್ತಳತೆಯ ಹೊಟ್ಟೆಯ ಯಜಮಾನನನ್ನು ದರದರನೆ ಎಳೆದುಕೊಂಡು ಹೋಗುತ್ತಿರುತ್ತವೆ. ಇಂಗ್ಲಿಷ್ನಲ್ಲಿ "estop" ಎಂದರೆ ಮಾತ್ರ ಬ್ರೇಕ್ ಹಾಕುವ ಇವು ಕನ್ನಡದಲ್ಲಿ…
ವಿಧ: ಬ್ಲಾಗ್ ಬರಹ
July 03, 2006
ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ.
ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.
ಈಗ ನನ್ನ ಕಥೆ ಕೇಳಿ. ನಾನು ವಿದೇಶಕ್ಕೆ ಹೊರಟಿರುವುದರಿಂದ ಸಂಪೂರ್ಣವಾಗಿ ದೈಹಿಕ ಪರೀಕ್ಷೆ ಮಾಡಿಸ ಬೇಕೆಂದು ನಿರ್ಧರಿಸಿದೆ. ಇತರ ಪರೀಕ್ಷೆಗಳೆಲ್ಲ ಆದಮೇಲೆ ನನ್ನ ಗಮನ ಕಣ್ಣು ಕಿವಿ ಬಾಯಿಗಳ ಮೇಲೆ ಹರಿಯಿತು.
ಸರಿ, ನನ್ನ ಜೀವನದಲ್ಲಿ ಪ್ರಥಮಬಾರಿಗೆ…
ವಿಧ: ಚರ್ಚೆಯ ವಿಷಯ
July 02, 2006
ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಪ್ರಭಾವಶಾಲಿಯಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಈಗ ಕನ್ನಡವನ್ನು ಕಾಪಾಡಬೇಕಾಗಿರುವುದು, ಹೊರಗಿನವರಿಂದಲ್ಲ ಕನ್ನಡ ಚಿತ್ರರಂಗದವರಿಂದ. ಹೌದು. ನಾನು ಹೇಳುತ್ತಿರುವುದು ಕರ್ನಾಟಕದಲ್ಲಿ ಡಬ್ಬಿಂಗ ಚಿತ್ರಗಳನ್ನು…
ವಿಧ: ಬ್ಲಾಗ್ ಬರಹ
July 02, 2006
ಇದು ನಾನು ಇತ್ತೀಚೆಗೆ ಓದಿದ, ಸೇಡಿಯಾಪು ಕೃಷ್ಣಭಟ್ಟರು ಬರೆದ ಒಂದು ಲೇಖನದ ಸಂಗ್ರಹ .
ಸಾಹಿತ್ಯ ಎಂದರೆ ಗ್ರಂಥ ಸಮುದಾಯ. ಗ್ರಂಥಗಳ ಅಧ್ಯಯನ ಮತ್ತು ಪಠನಗಳಿಂದ ಮನೋರಂಜನೆ ಮತ್ತು ಮನಃಸಂಸ್ಕಾರ ಆಗುತ್ತದೆ. ಸಂಸ್ಕಾರದ ಪರಿಣಾಮವೇ ಸಂಸ್ಕೃತಿ. ಹೀಗಾಗಿ ಸಾಹಿತ್ಯ ಎನ್ನುವದು ಸಂಸ್ಕೃತಿಯ ಸಾಧನ. ಯಾವ ಬರವಣಿಗೆ ಸಂಸ್ಕೃತಿಯನ್ನು ಪೋಷಿಸುವದಿಲ್ಲವೋ ಅದು 'ಸಾಹಿತ್ಯ' ಎನ್ನಿಸಿಕೊಳ್ಳುವದಕ್ಕೆ ಅರ್ಹವಲ್ಲವೆಂಬ ಮಾನದಂಡವು ಇದರಿಂದಾಗಿ ಲಭಿಸುತ್ತದೆ. ಸಂಸ್ಕಾರ್ಅವೆಂದರೆ ಅಶುದ್ಧವಾದದ್ದನ್ನು…