ಎಲ್ಲ ಪುಟಗಳು

ಲೇಖಕರು: ahoratra
ವಿಧ: Basic page
June 22, 2006
ನಾಡಗುಡಿ ನಾಡಸೇವೆ ಮಾಡುವವರೆ,ನಾಡಿಗಾಗಿ ಮಡಿಯುವವರೆ,ಬೇಡರಿಂದ ಕಾಡನುಳಿಸಿ,ಬೆವರಸುರಿಸಿ ಗಿಡವ ಬೆಳೆಸಿ,ಕೇಡಿಗಳಿಗೆ ಬೇಡಿ ತೊಡಿಸಿ,ಕಾಡಿಬೇಡೊ ರೌಡಿಗಳನುಸೆದೆಬಡಿದು ನೀರಕುಡಿಸಿ,ಹೇಡಿತನವ ಹೊಡೆದೋಡಿಸಿ,ನಾಡಿಗಾಗಿ ದುಡಿಯಬೇಕು.ನಾಡನುಡಿಯ ಹಾಡುಮಾಡಿ,ನಾಡಗೀತೆ ಹಾಡಬೇಕು.ನಾಡಗುಡಿಯ ಭಕ್ತರಾಗಿ,ನಡಿಗಾಗಿ ನಾಡಿನಲ್ಲೆಮಡಿಯಬೇಕು. ಅಹೋರಾತ್ರ.
ಲೇಖಕರು: ರಾಮಕುಮಾರ್
ವಿಧ: Basic page
June 22, 2006
೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ. ೨. ಉಂಡರೆ ಉಬ್ಬಸ, ಹಸಿದರೆ ಸಂಕಟ. ೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು. ೪. ಬಂಡವಾಳ ಮೂರು ಕಾಸು, ಬಡಿವಾರ ಆರು ಕಾಸು. ೫. ಗಂಜಿ ಕುಡಿಯುವವನ ಮೀಸೆ ತೀಡಕ್ಕೆ ಒಂದಾಳು. ೬. ಊರ ಚಿಂತೆ ಕಟ್ಟಿಕೊಂಡು ವೀರಶೆಟ್ಟಿ ಬಡವಾದ. ೭. ಮೊದಲು ಬಂದ ಕಿವಿಗಿಂತ ಆಮೇಲೆ ಬಂದ ಕೋಡು ಉದ್ದ. ೮. ಉಗುರಿನಲ್ಲಾಗುವ ಕೆಲಸಕ್ಕೆ ಕೊಡಲಿ ತಗಂಡರು. ೯. ಕೈಲಿ ಸಾಗದವನಿಗೆ ಒಂಭತ್ತು ಕುಡುಗೋಲು. ೧೦. ಉತ್ತರನ ಪೌರುಷ ಒಲೆ ಮುಂದೆ.
ಲೇಖಕರು: venkatesh
ವಿಧ: Basic page
June 22, 2006
ಗೊಲಿಯೋ VI, ವಿಶ್ವಕಪ್ ಕಾಲ್ಚೆಂಡಾಟ ೨೦೦೬,ರ ಎಂದೂ ಕಂಡು ಕೇಳರಿಯದ ಲಾಂಛನ,ದ ಅನಾವರಣ ಶನಿವಾರದಂದು,ಜರ್ಮನಿಯಲ್ಲಿ ನಡೆಯಲಿದೆ ! ವಿಶ್ವ ಫುಟ್ ಬಾಲ್ ಪ್ರೇಮಿಗಳು ಅತಿಸಂಭ್ರಮ, ಪ್ರೀತಿಗಳಿಂದ ನೋಡಲು ಕಾತರಿಸುತ್ತಿರುವ ಗೋಲಿಯೋ, ಶನಿವಾರದ ದಿನ ವಿಧ್ಯುಕ್ತವಾಗಿ ಜರ್ಮನಿಯ ದೂರದರ್ಶನ ಹಾಗು ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಳ್ಳಲಿದೆ. ಫಿಫಾ ಪ್ರಕಾರ, ಗೋಲಿಯೋ ಪದವನ್ನು ವಿಸ್ತರಿಸಿದರೆ, 'ಗೋ ಲಿಯೋ ಗೋ' ಎಂದಾಗುತ್ತದೆ. ಈ ಸಿಂಹ ಮುಖದ ಮಾನವನ ಕಾರ್ನಾಮಗಳೆಲ್ಲಾ, ವಿಶೇಷವೇ ! ಲೋಥರ್…
ಲೇಖಕರು: venkatesh
ವಿಧ: Basic page
June 22, 2006
ಫಿಫಾ ವಿಶ್ವಕಪ್: ಇಂದು, ಗುರುವಾರ, ೨೨, ಜೂನ್, ೨೦೦೬ ರಂದು ನಡೆಯಲಿರುವ ಆಟಗಳು: ಸಾ.೭-೩೦ ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ 'ಇ' ಗ್ರುಪ್ ಸಾ.೭-೩೦ ಘಾನ ವಿರುಧ್ದ ಯು.ಎಸ್.ಎ 'ಇ'ಗ್ರುಪ್ ಮ.ರಾ.೧೨-೩೦ ಜಪಾನ್ ವಿರುಧ್ದ ಬ್ರೆಸಿಲ್ 'ಎಫ್'ಗ್ರುಪ್ ಮ.ರಾ.೧೨-೩೦ ಆಷ್ಟ್ರೇಲಿಯ ವಿರುಧ್ದ ಕ್ರೊವೇಷಿಯ 'ಎಫ್'ಗ್ರುಪ್ ಬುಧವಾರ, ೨೧, ಜೂನ್, ೨೦೦೬ ರಂದು ವಿಶ್ವ ಕಪ್ ಸಾಕರ್ ನಲ್ಲಿ ಆಡಿದ ಆಟಗಳ ವಿವರ: ೧. ಡಿ' ಗ್ರುಪ್: ವೆಲ್ಟಿನ್ಸ್ ಅರೆನ, ಗೆಲ್ ಸೆನ್ ಕಿರ್ಚಿನ್ ನಲ್ಲಿ. ಪೋರ್ಚುಗಲ್…
ಲೇಖಕರು: ರಾಮಕುಮಾರ್
ವಿಧ: Basic page
June 21, 2006
೧. ದರಗು ತಿನ್ನೋರ ಹತ್ತಿರ ಹಪ್ಪಳ ಕೇಳಿದಂತೆ. ೨. ಸಂತೆ ನೆರೆಯುವ ಮುಂಚೆ ಗಂಟುಕಳ್ಳರು ನೆರೆದರು. ೩. ಹತ್ತಿ ತೂಗುವಲ್ಲಿ ನೊಣಕ್ಕೆ ಉಪವಾಸ. ೪. ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದ್ಳು. ೫. ಹಾಲು ಕೊಳ್ಳೋಕ್ಕೆ ಬಂದವರಿಗೆ ಎಮ್ಮೆ ಕ್ರಯ ಯಾಕೆ? ೬.ಲಂಡ ದೇವರಿಗೆ ಬಂಡ ಪತ್ರೆ ೭. ಸುಮ್ಮನೆ ತಿನ್ನು ಬಾ ಮಗನೆ ಅಂದರೆ ಓಣಿ ಭಕ್ಕೆ ಹಣ್ಣಾ ಎಂದನಂತೆ. ೮. ಅನಾಚಾರಿ ಗುರುವಿಗೆ ವ್ರತಗೇಡಿ ಶಿಷ್ಯ. ೯.ಎಲೆ ತೆಗೆಯೋ ಗುಂಡ ಅಂದರೆ ಉಂಡೋರು ಎಷ್ಟು ಜನ ಅಂದನಂತೆ. ೧೦.ಹನುಮಪ್ಪ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 21, 2006
(ಬೊಗಳೂರು someಶೋಧನೆ ಬ್ಯುರೋದಿಂದ)‌ ಬೊಗಳೂರು, ಜೂ.21- ಸಾವಿರಾರು ವರ್ಷಗಳ ಕಾಲ ಬೀಜವನ್ನು ಸಂರಕ್ಷಿಸುವ ತಂತ್ರಜ್ಞಾನವೊಂದು ಜಗತ್ತಿಗೆ ಪರಿಚಿಸಲ್ಪಟ್ಟಿರುವುದರಿಂದ ಚಿಂತಾಜನಕವಾಗಿ ಕಳವಳಗೊಂಡಿರುವ ಬೊಗಳೂರು ಬ್ಯುರೋ, ಈ ಅಜ್ಞಾನದ some-ಶೋಧಕರನ್ನು ತದ್ವಾತದ್ವಾ ತರಾಟೆಗೆ ತೆಗೆದುಕೊಂಡ ಪ್ರಸಂಗ ವರದಿಯಾಗಿದೆ. ಬೊಗಳೂರು ಬ್ಯುರೋದ ಈ ಕಳವಳಕ್ಕೆ ಕಾರಣವೆಂದರೆ ಇದರಲ್ಲಿ ಭಾರತೀಯ ಭ್ರಷ್ಟರಾಜಕಾರಣಿಗಳ ಕೈವಾಡವೇನಾದರೂ ಇದೆಯೇ ಎಂಬುದು. ಅಲ್ಲದೆ, ಅವರೂ ತಮ್ಮ ತಮ್ಮ ವಿವಿಧ ನಮೂನೆಯ ಬೀಜಗಳನ್ನು ಈ…
ಲೇಖಕರು: ವಿಶ್ವನಾಥ
ವಿಧ: ಬ್ಲಾಗ್ ಬರಹ
June 21, 2006
ಸ್ವಾತಂತ್ರ್ಯ ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್ ಜಿಂದಾಬಾದ್ ಘೋಷಣೆಗಳ ಮೊರೆತ. ಸರಿಸುಮಾರು ಇದೇ ಸಮಯದಲ್ಲಿ ಸಾವಿರದಾ ಒಂಬೈನೂರಾ ನಲ್ವತ್ತರಡನೇ ಇಸ್ವಿಯಲ್ಲಿ ಉತ್ತರ ಪ್ರದೇಶದ ಮಧ್ಯಮ ವರ್ಗದ ಕುಟುಂಬದಲ್ಲಿ ಕವಿ ಹರಿವಂಶರಾಯ್ ಬಚ್ಚನ್ ಮತ್ತು ತೇಜಿ ಅವರಿಗೆ ಅಲಹಾಬಾದಿನಲ್ಲಿ ಜನಿಸಿದ ಚೊಚ್ಚಲ ಮಗುವಿಗೆ ಇಟ್ಟ ಹೆಸರು ಇನ್ ಕ್ವಿಲಾಬ್ ರಾಯ್. ನಂತರ ಅದೇ ಮಗು ಅಮಿತಾಬ್…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 21, 2006
(ಬೊಗಳೂರು ಮೀಸಲಾತಿ ಬ್ಯುರೋದಿಂದ) ಬೊಗಳೂರು, ಜೂ.19- ಮೀಸಲಾತಿ ಪರವಾಗಿ ಬೊಗಳೆ ಬ್ಯುರೋದ ಜತೆಗೆ ನಮ್ಮ ಪ್ರೇರಕ ಪತ್ರಿಕೆ ಮಜಾವಾಣಿ ಬ್ಯುರೋ ಕೂಡ ಕೈಜೋಡಿಸಿರುವುದರಿಂದ ಇರುವೆ ಬಲ ಬಂದಂತಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ತೀವ್ರಗತಿಯ ತನಿಖೆ ನಡೆಸಿದ ಬೊಗಳೆ ಬ್ಯುರೋಗೆ ಮತ್ತಷ್ಟು ಅಸತ್ಯದ ತಲೆ ಮೇಲೆ ಹೊಡೆಯುವ ಸಂಚುಗಳ ಬಗ್ಗೆ ತಿಳಿಯಿತು. ಕೇಂದ್ರ ಸಂಪತ್ತಿನ ಮೂಲದ ಸಚಿವ ದುರ್ಜನ್ ಸಿಂಗ್ ಅವರು OBC ಪರವಾಗಿ ಮೀಸಲಾತಿಗೆ ಬಲವಾಗಿ ಹೋರಾಟ ಮಾಡುತ್ತಿರುವುದರ ಹಿಂದೆ ಅವರಿಗೇ ಮೀಸಲಾತಿ ಪಡೆಯುವ…
ಲೇಖಕರು: ವಿಶ್ವನಾಥ
ವಿಧ: Basic page
June 21, 2006
ಸ್ವಾತಂತ್ರ್ಯ ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್ ಜಿಂದಾಬಾದ್ ಘೋಷಣೆಗಳ ಮೊರೆತ. ಸರಿಸುಮಾರು ಇದೇ ಸಮಯದಲ್ಲಿ ಸಾವಿರದಾ ಒಂಬೈನೂರಾ ನಲ್ವತ್ತರಡನೇ ಇಸ್ವಿಯಲ್ಲಿ ಉತ್ತರ ಪ್ರದೇಶದ ಮಧ್ಯಮ ವರ್ಗದ ಕುಟುಂಬದಲ್ಲಿ ಕವಿ ಹರಿವಂಶರಾಯ್ ಬಚ್ಚನ್ ಮತ್ತು ತೇಜಿ ಅವರಿಗೆ ಅಲಹಾಬಾದಿನಲ್ಲಿ ಜನಿಸಿದ ಚೊಚ್ಚಲ ಮಗುವಿಗೆ ಇಟ್ಟ ಹೆಸರು ಇನ್ ಕ್ವಿಲಾಬ್ ರಾಯ್. ನಂತರ ಅದೇ ಮಗು ಅಮಿತಾಬ್…
ಲೇಖಕರು: venkatesh
ವಿಧ: Basic page
June 21, 2006
ಮಂಗಳವಾರ, ೨೦, ಜೂನ್, ೨೦೦೬ ರಂದು ನಡೆದ ವಿಶ್ವ ಕಪ್ ಫುಟ್ ಬಾಲ್ ಪಂದ್ಯಗಳು: ೧. ನೆನ್ನೆ ನಡೆದ ಗ್ರುಪ್, 'ಎ' ಪಂದ್ಯದಲ್ಲಿ, ಪ.ಜರ್ಮನಿ ವಿರುಧ್ದ ಇಕ್ವೆಡಾರ್, ಜರ್ಮನಿ, (೩-೦)ಭರ್ಜರಿ ಜಯದಿಂದ ತನ್ನ ಗ್ರುಪಿನ ಪ್ರಥಮ ಸ್ಥಾನ ವನ್ನು ಅಲಂಕರಿಸಿತು.ಸೀಟಿ ಬಾರಿಸಿದ ೫ ನೆ ನಿಮಿಷದಲ್ಲೆ ಮಿರೊಸ್ಲೋವ್ ಕ್ಲೊಸೆ ಮೊದಲ ಗೊಲ್ ಬಾರಿಸಿದರು. ತಮ್ಮ ಇನ್ನೊಂದು ಗೊಲನ್ನು ೪೪ ನೆ ನಿಮಿಷದಲ್ಲಿ ಹೊಡೆದು ಜರ್ಮನಿಗೆ ಹೊಸ ಹುರುಪು ತಂದು ಕೊಟ್ಟರು.೫೭ ನೆ ನಿಮಿಷದಲ್ಲಿ ಪೊಡೊಲಸ್ಕಿ ಲ್ಯುಕಾಸ್ ಜರ್ಮನಿಗೆ…