ಎಲ್ಲ ಪುಟಗಳು

ಲೇಖಕರು: ಶ್ರೀಶಕಾರಂತ
ವಿಧ: ಬ್ಲಾಗ್ ಬರಹ
March 21, 2006
ಧೀ ಶಕ್ತಿಯನು ನೀಡಿ ತಳ್ಳಿಹನು ದೇವ ಬಾಳ ಮಹಿಮೆಯನರಿವ ಕೂಪದಲಿ || ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು ಸುಖದಿ ಜೀವಿಪುದು ಬಾಳ ಪಂಡಿತಪುತ್ರ || -- ಜೀವನದ ಬಗ್ಗೆ ಬಹಳಷ್ಟು ಯೋಚನೆ ಮಾಡಿ , ಪ್ರತಿಯೊಬ್ಬರೂ ಅವರದ್ದೇ ಆದಂತಹ ಜೀವನ ತತ್ವ ಗಳನ್ನು ಹೇಳಿದ್ದಾರೆ...ಅವು ಕೆಲವೊಮ್ಮೆ ಸರಿ ಕೆಲವೊಮ್ಮೆ ಸಮಂಜಸವಾಗಿರುವುದಿಲ್ಲ...ಇಂತಹದ್ದೇ ಸರಿ ಎಂದು ಹೇಳಲಾಗುವುದಿಲ್ಲ... ಇಷ್ಟೆಲ್ಲ ಯೋಚಿಸಿ ತಲೆ ಕೆಡಿಸಿಕೊಳ್ಳುವ ಬದಲು ಹಾಯಾಗಿ ಇರಬಹುದಿತ್ತು ಅನಿಸುತ್ತದೆ....ಅದೇ ಇದರ ಸಾರಾಂಶ...
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 21, 2006
ನಾರು-ಬೇರುಗಳು ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು. ಸಸ್ಯಗಳಲ್ಲಿನ ಜೀವಕಣತಂತುಕ(ಸೆಲ್ಯೂಲೋಸ್), ಅರೆಜೀವಕಣತಂತುಕ(ಹೆಮಿಸೆಲ್ಯೂಲೋಸ್), ಹಣ್ಣಂಟು(ಪೆಕ್ಟಿನ್), ಸಸ್ಯಗೋಂದು(ಪ್ಲಾಂಟ್ ಗಂ)-ಇವೆಲ್ಲಾ ಸೇರಿ ನಾರು-ಬೇರುಗಳಾಗುತ್ತವೆ…
ಲೇಖಕರು: Rajashekhar
ವಿಧ: ಬ್ಲಾಗ್ ಬರಹ
March 21, 2006
ರಾಜ್ಯಸಭೆ ಎಂದರೆ ರಾಜಕೀಯ ಪುನರ್ವಸತಿ ಎಂಬ ಮಾತಿಗೆ ಸಾಕ್ಷ್ಯಗಳು ಸಿಗುತ್ತಲೇ ಬಂದಿವೆ. ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕಾಗಿ ದುಡಿದವರು, ಟಿಕೆಟ್‌ ಸಿಗದೇ ಅಸಮಾಧಾನಗೊಂಡವರು, ಮತ ದಾರರಿಂದ ತಿರಸ್ಕೃತಗೊಂಡವರು, ಪಾರ್ಟಿ ಫಂಡ್‌ಗೆ ದೊಡ್ಡ ಮೊತ್ತ ಚೆಲ್ಲಿದವರು, ಮುಂದೆ ಮತ್ತೂ ಕೊಡುವೆನೆಂದು ಭರವಸೆ ಕೊಟ್ಟವರು... ಇಂಥವರಿಗೆಲ್ಲ ರಾಜಕೀಯ ಪುನರ್ವಸತಿ, ಪ್ರವೇಶ ತಾಣಗಳೆಂದರೆ ವಿಧಾನ ಪರಿಷತ್‌, ರಾಜ್ಯಸಭೆಗಳು. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ರಾಜ್ಯಸಭೆಗೆ ಈಗ ಚುನಾವಣೆ ಬಂದಿದೆ.…
ಲೇಖಕರು: tvsrinivas41
ವಿಧ: Basic page
March 21, 2006
ಓಂ ಭೂರ್ಭುವ: ಸ್ವ: ತತ್ಸರ್ವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನ: ಪ್ರಚೋದಯಾತ್ ಪದಭೇದ : ಓಂ = ಎನ್ನುವುದು ೩ ಅಕ್ಷರಗಳ ಸಂಕೀರ್ಣ. ಅ, ಉ, ಮ್ ಇವುಗಳಲ್ಲಿ ಸಂಕೀರ್ಣತೆ ಇಲ್ಲದಿರುವುದರಿಂದ ಬೀಜಾಕ್ಷರಗಳೆನ್ನುವರು. ಈ ಮೂರು ಅಕ್ಷರಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪ. ಇದನ್ನೇ ತ್ರಿಗುಣ ಎನ್ನಬಹುದು, ಬ್ರಹ್ಮನ್ ಎನ್ನಬಹುದು. ಆದ್ದರಿಂದ ದತ್ತಾತ್ರೇಯರನ್ನು ತ್ರಿಗುಣಾತೀತ ಅನ್ನುವರು. ಈ ಮೂವರು ಯಾರು ಎಂದರೆ ಒಬ್ಬ ಸೃಷ್ಟಿಕರ್ತ, ಇನ್ನೊಬ್ಬ ಕಾಪಾಡುವವನು, ಮತ್ತೊಬ್ಬ…
ಲೇಖಕರು: shreekant.mishrikoti
ವಿಧ: Basic page
March 21, 2006
ಉಪವಾಸ ಇರಬಹುದು , ಉಪದ್ರವ ತಾಳಲಾರದು. ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ. ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ. ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು. ತಮ್ಮ ಕಲಹಕ್ಕೆ ಐವರು , ಪರರ ಕಲಹಕ್ಕೆ ನೂರಾ ಐವರು. (ಸುಳಿವು ಪಾಂಡವಕೌರವರು) ತಾನಾಗಿ ಬೀಳುವ ಮರಕ್ಕೆ ಕೊದಲಿ ಏಟು ಹಾಕಿದ ಹಾಗೆ . ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ (ನಾಜೂಕು ದೇಹಸ್ಥಿತಿ) ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು…
ಲೇಖಕರು: pavanaja
ವಿಧ: Basic page
March 21, 2006
ನಾನು [http://sampada.net/node/1341#comment-2025|ಪೋಸ್ಟಿಸಿದ ಒಗಟನ್ನು] ಯಾರೂ ಬಿಡಿಸಲಿಲ್ಲ. ಸ್ವಲ್ಪ ಸುಲಭವಾಗಿರುವ ಇದನ್ನು ಪ್ರಯತ್ನಿಸಿ- [ಇದನ್ನು ಒಗಟು ಎನ್ನುವುದಕ್ಕಿಂತಲೂ ಸಮಸ್ಯೆ ಎನ್ನುವುದೇ ಸೂಕ್ತ] ಈ ಸಮಸ್ಯೆಯನ್ನು ಪರಿಹರಿಸಿ- ಪರ್ವತ ಸುತ್ತಲು ಶಿಲೆ ಪಾಲ್ಗರೆಯಲು ಹೆಂಗಸು ಹೇರನೆತ್ತಲು ಕತ್ತೆ ವೇದವನೋದಲು ವಿಪ್ರನು ಕಾಗೆ ಮಾಂಸವ ತಿಂಬುದ ಕಂಡೆ. -ಇವು ಹೇಗೆ ಸಾಧ್ಯ? ಸಿಗೋಣ, ಪವನಜ
ಲೇಖಕರು: venkatesh
ವಿಧ: Basic page
March 20, 2006
ಬೆಸ್ಟ್ ಆಫ್ ನಾ ಕಸ್ತೂರಿ, ( ನಾ ಕಸ್ತೂರಿಯವರ ಆಯ್ದ ನಗೆಬರಹಗಳು ) ನಾ. ಕಸ್ತೂರಿ, ಕನ್ನಡ ದೇಶದಲ್ಲಿ ಜನಿಸದಿದ್ದರೂ, ಕನ್ನಡದ ಹಾಸ್ಯ ಸಾಹಿತ್ಯದ ಪರಂಪರೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದರು ಎಂದರೆ ಸುಳ್ಳಲ್ಲ. ಕನ್ನಡದಲ್ಲಿ ಹಾಸ್ಯ ಸಾಹಿತ್ಯದ ಬೆಳವಣಿಗೆಯ ಪ್ರಥಮ ಹಂತದಲ್ಲಿ ಅವರ ಪಾಲೂ ಬಹು ಮುಖ್ಯ. ಶ್ರೀಮತಿ ಸುನಂದಮ್ಮ, ಆರಾಸೆ, ದಾಶರಥಿ ದೀಕ್ಷಿತ್, ಜಿ. ಪಿ ರಾಜರತ್ನಂ, ಮುಂತಾದವರು ಸೇರಿ 'ಕೊರವಂಜಿ' ಎಂಬ ಪತ್ರಿಕೆಯನ್ನು ಹೊರತಂದಿದ್ದರು. ಹೆಸಾರಂತ ಡಾ. ಶಿವರಾಂ ಅವರೇ ಅದರ…
ಲೇಖಕರು: shreekant.mishrikoti
ವಿಧ: Basic page
March 20, 2006
ಅಂತೂ ಭಾರೀ ವಿವಾದಾಸ್ಪದವಾಗಿದ್ದ ನನ್ನ ಪುಸ್ತಕಗಳ ವಿಲೇವಾರಿ ಅಂತೂ ಮೊನ್ನೆ ಶನಿವಾರ ಇಲ್ಲಿ (ಮುಂಬೈ) ಯ ವಿಲೇಪಾರ್ಲೆಯ ಅಂಗಡಿಯೊಂದರಲ್ಲಿ ಮಾಡಿದೆ. ಸುಮ್ಮನೆ ಕೊಟ್ಟು ಬಿಟ್ಟೆ. ದಾನವೆಂದು ಕರೆಯಲಾಗದು. ನನಗೆ 'ಬೇಡವಾದ' , ಅಂಗಡಿಯವರಿಗೂ 'ಬೇಡವಾದ' ( 'ಬೇಡವಾದ' - pun not intended - ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ) ಪುಸ್ತಕಗಳನ್ನು ಕೊಟ್ಟರೆ , ದಾನ ಹೇಗೆ ಆದೀತು ? . ಏನೇ ಇರಲಿ . ನನ್ನ ಪುಸ್ತಕದ ಹೊರೆ ಸ್ವಲ್ಪ ಕಡಿಮೆಯಾಯಿತು. ಸಲಹೆ ಕೊಟ್ಟ ಪವನಜರಿಗೆ…
ಲೇಖಕರು: shreekant.mishrikoti
ವಿಧ: Basic page
March 20, 2006
'ಅಮೇರಿಕಾದಿಂದ ಬಂದವನು'- ಸಿಂಗರ್ ನ ಇನ್ನೊಂದು ಕಥೆ ೧೯೭೮ರ ನೋಬೆಲ್ ಪ್ರಶಸ್ತಿಗೆ ಪಾತ್ರನಾದ ಐಸಾಕ್ ಬಾಷೆವಿಸ್ ಸಿಂಗರ್ ಪೋಲಂಡ್ ದೇಶದ ಯಿದ್ದಿಷ್ ಭಾಷೆಯ ಸಾಹಿತಿ. ಕನ್ನಡ ಓದುಗರಿಗೆ ಈತನ ಸಾಹಿತ್ಯದ ಆಯ್ದ ಭಾಗಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ನೋಬೆಲ್ ಪುರಸ್ಕೃತ ಸಾಹಿತ್ಯ ಮಾಲೆಯ ಅಡಿ 'ಐಸಾಕ್ ಬಾಷೆವಿಸ್ ಸಿಂಗರ್ -ವಾಚಿಕೆ'ಯಲ್ಲಿ ಕನ್ನಡಿಸಲಾಗಿದೆ. ಈ ಪುಸ್ತಕದಿಂದ 'ಅಮೇರಿಕಾದಿಂದ ಬಂದವನು' ಎಂಬ ಕಥೆಯ ಸಂಗ್ರಹವನ್ನು ಇಲ್ಲಿ ಕೊಟ್ಟಿದ್ದೇನೆ. ( ಈ ಪುಸ್ತಕವನ್ನು ವಿಲೇವಾರಿ…
ಲೇಖಕರು: sinchanabhat
ವಿಧ: Basic page
March 20, 2006
ತಾಂತ್ರಿಕತೆ ಎಂಬುದು ಮುನ್ನಡೆದಂತೆ,ನಮ್ಮ ಅನಿವಾರ್ಯತೆಗಳು ಹೇಗೆ ಬೆಳೆಯುತ್ತವೆ ಅಲ್ಲವೇ? ದೂರವಾಣಿಯನ್ನ ತೆಗೆದುಕೊಳ್ಳೋಣಾ. ಮೊನ್ನೆ ಮೊನ್ನೆಯತನಕ ಎಲ್ಲಾ ಮನೆಗಳಲ್ಲೂ ಆ ವ್ಯವಸ್ಥೆ ಇರಲಿಲ್ಲ,ಅದು ನಿದಾನವಾಗಿ ಎಲ್ಲೆಡೆ ತಳವೂರಿತು.ಈಗ ಮೊಬೈಲ್ ಕಾಲ ಅನ್ನೋತರದಲ್ಲಿ ಮೊಬೈಲ್ ಗ್ರಂಥಾಲಯ,ಮೊಬೈಲ್ ಕೇಫ್ಟೇರಿಯಾ ಹೀಗೆ ಎಲ್ಲವೂ ಚಲಿಸುತ್ತಿರುತ್ತವೆ.ಇಂದು ಮನೆಯ ಪ್ರತಿಯೊಬ್ಬರ ಕೈಗೂ ಒಂದೊಂದು ಚಲಿಸುವ ಫೋನ್ ಗಳು.ಅದು ನಮ್ಮ ದೇಹದ ಮತ್ತೋಂದು ಅಂಗವಾಗಿ ಅಂಟಿಕೊಂಡೇ ಇರಬೇಕು.ಮೊಬೈಲ್ ಫೋನ್ ಗಳು ಈಗ…