ಪುಸ್ತಕ ಪರಿಚಯ

ಲೇಖಕರು: Ashwin Rao K P
July 08, 2023
ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ ಮೂರ್ತಿ ಇವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ… “ತುಂಟತನ, ಕೀಟಲೆ ಬಾಲ್ಯದಲ್ಲಿ ಅಲಂಕಾರಗಳೇ ಆಗಿರುತ್ತವೆ. ಸಹಜ ಮುಗ್ಧತೆ, ಸತ್ಯ ಶುದ್ಧತೆ ಸುತ್ತಮುತ್ತಲವರಿಗೆ ಅಪೇಕ್ಷಣೀಯವೂ,…
ಲೇಖಕರು: Ashwin Rao K P
July 06, 2023
ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ. ಇವರ ಬೆನ್ನುಡಿ “ಮಥಿಸುವ ಜೀವನಾನುಭವದ ನವನೀತ" ದಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ… “ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಂಡ ಕನಸನ್ನು ಛಲ ಬಿಡದೆ ನನಸು ಮಾಡುವುದೇ ಪಂಚಮವೇದದ ಸಾರ. ಇಲ್ಲಿ ನೋವಿದೆ, ನಲಿವಿದೆ, ಕತ್ತಲೆಯೂ ಇದೆ…
ಲೇಖಕರು: Ashwin Rao K P
July 04, 2023
ಯಶೋಮತಿ ಬೆಳಗೆರೆ ಇವರು ಬರೆಯುತ್ತಿದ್ದ ‘ಯಶೋವಾಣಿ' ಎಂಬ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಆ ಅಂಕಣಗಳನ್ನು ಸೇರಿಸಿ ಮಾಡಿದ ಪುಸ್ತಕವೇ ‘ಯಶೋವಾಣಿ'. ಖ್ಯಾತ ಪತ್ರಕರ್ತ, ಬರಹಗಾರ ದಿ. ರವಿ ಬೆಳಗೆರೆ ಅವರ ದ್ವಿತೀಯ ಪತ್ನಿಯಾಗಿ ಸಮಾಜದ, ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿ ಬದುಕು ಕಟ್ಟಲು ಯಶೋಮತಿ ಪಟ್ಟ ಕಷ್ಟವನ್ನು ತಮ್ಮ ಬರಹಗಳ ಮೂಲಕ ಹೊರಹಾಕಿದ್ದಾರೆ. ೧೬೮ ಪುಟಗಳ ಈ ಪುಸ್ತಕದಲ್ಲಿ ತಮ್ಮ ಮಾತಿನಲ್ಲಿ ಯಶೋಮತಿ ಬೆಳಗೆರೆ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳನ್ನು…
July 02, 2023
ಮಹಾಭಾರತ, ರಾಮಾಯಣದಲ್ಲಿ ಬರುವ ಎಷ್ಟೋ ಪಾತ್ರಗಳ ಮಧ್ಯೆ ಪ್ರಸಿದ್ದಿಯಾಗದೇ ಉಳಿದ ಪಾತ್ರಗಳು ಅವೆಷ್ಟಿವೆ.!!! ಆ ಪಾತ್ರಗಳೇ ತಾವಾಗಿ ಪ್ರತಿ ಪಾತ್ರಗಳ ತುಮುಲವನ್ನು ಲೇಖಕರು ಎಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಎಂದರೆ ಅದನ್ನು "ಪರಕಾಯ ಪ್ರವೇಶ " ಓದಿಯೇ ತಿಳಿಯಬೇಕು. ನಾವೂ ಆ ಪಾತ್ರವಾಗಿ ಓದುವ ಆನಂದವನ್ನು, ಆಗ ಉಂಟಾಗುವ ಭಾವ ವೈವಿಧ್ಯವನ್ನು ಬಣ್ಣಿಸಲು ಅಸಾಧ್ಯ.  ಓದುಗರೇ ಬನ್ನಿ, ನೀವೆಲ್ಲರೂ ಒಮ್ಮೆ "ರುಮಾ" ಆಗಿ ನನ್ನ ತಳಮಳವನ್ನು ತಿಳಿದುಕೊಳ್ಳಿ. ನಾನು "ರುಮಾ ". ಕಿಷ್ಕಿಂದೆಯ…
ಲೇಖಕರು: Ashwin Rao K P
July 01, 2023
‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ... “ನೀಲಿನಕ್ಷತ್ರ' ಕವನ ಸಂಕಲನದ ಮೂಲಕ ಭರವಸೆ ಮೂಡಿಸಿದ ಕವಿ ವಿ.ನಿಶಾ ಗೋಪಿನಾಥ್ ಅರವತ್ತು ಪ್ರೇಮ ಕವಿತೆಗಳ 'ರೆಡ್ ವೈನ್' ಕೃತಿ ಮೂಲಕ ಕಾವ್ಯ ಕ್ಷೇತ್ರದಲ್ಲಿ ತಮ್ಮ ಗಟ್ಟಿ ಹೆಜ್ಜೆಗಳನ್ನು ಊರಿದ್ದಾರೆ. ಖರೇ…
ಲೇಖಕರು: Ashwin Rao K P
June 29, 2023
೧೪೦ ಪುಟಗಳ ಸೊಗಸಾದ ಕವನಗಳ ಸಂಕಲನವೇ ಕಾವ್ಯ ದೀವಿಗೆ. ವರುಣ್ ರಾಜ್ ಮತ್ತು ಧನುಷ್ ಶೇಖರ್ ಎಂಬವರು ಈ ಸಂಕಲನದ ಕವನಗಳನ್ನು ಸಂಪಾದಿಸಿದ್ದಾರೆ. ಬಹಳಷ್ಟು ಉದಯೋನ್ಮುಖ ಕವಿಗಳ ಕವನಗಳು ಈ ಸಂಕಲನ ಒಳಗೊಂಡಿದೆ. ಸ್ವತಃ ಕವಿಗಳಾಗಿರುವ ಅಮರ್ ಬಿ ಎನ್ನುವವರು ಸುದೀರ್ಘವಾದ ಮುನ್ನುಡಿಯನ್ನು ಬರೆದಿದ್ದಾರೆ. ಹಲವು ಕವನಗಳನ್ನು ಸತ್ವಭರಿತವಾಗಿ ವಿಮರ್ಶೆ ಮಾಡಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗ ನಿಮ್ಮ ಓದಿಗಾಗಿ... “ವರುಣ್‌ ರಾಜ್ ಜಿ ಮತ್ತು ಧನುಷ್ ಎಚ್ ಶೇಖರ್ ಅವರ ಸಂಪಾದಕತ್ವದಲ್ಲಿ ‘ಕಾವ್ಯ…