ಪರಿಧಿಯಿಂದ ಹೊರಗೆ ಹೋದ ವ್ಯಾಸ

ಪರಿಧಿಯಿಂದ ಹೊರಗೆ ಹೋದ ವ್ಯಾಸ

ಬರಹ

ವ್ಯಾಸರು ಚಿರನಿದ್ರೆಗೆ ಮರಳಿದ್ದಾರೆ, ನಿಜ. ಆದರೆ ಅವರ ಮುನ್ನೂರಕ್ಕೂ ಹೆಚ್ಚಿನ ಕತೆಗಳಲ್ಲಿ ವ್ಯಾಸರು ಸದಾ ಜೀವಂತವಾಗಿ ಮಾತನಾಡುತ್ತಿದ್ದಾರೆ, ಉಸಿರಾಡುತ್ತಿದ್ದಾರೆ. ಒಬ್ಬ ಸತ್ವಶಾಲಿ ಬರಹಗಾರನಿಗೆ ಸಾವೆಂಬುದೇ ಇಲ್ಲ. ಭೌತಿಕವಾಗಿ ವ್ಯಾಸರು ಇದ್ದಿದ್ದು ಕೆಲವೇ ಕೆಲವು ನಿಕಟವರ್ತಿಗಳ ಮಟ್ಟಿಗೆ. ಲಕ್ಷಾಂತರ ಮಂದಿ ಓದುಗರಿಗೆ ವ್ಯಾಸರ ಪಾತ್ರಗಳೇ, ಕತೆಗಳೇ ವ್ಯಾಸರ ಜೀವಂತಿಕೆಯ ಸಾಕ್ಷಿಯಾಗಿದ್ದಿದ್ದು. ವ್ಯಾಸರ ಕತೆಗಳಲ್ಲಿ ಒಂದಂಶ ಮಾತ್ರ ಸಂಕಲನಗಳಲ್ಲಿ ಬಂದಿದೆ. ಅವರ ಎಲ್ಲ ಕತೆಗಳು ಕನ್ನಡದ ಓದುಗರಿಗೆ ಲಭ್ಯವಾಗುವಂತಾದರೆ ವ್ಯಾಸರ ಇರುವಿಕೆ ಹೆಚ್ಚು ಅರ್ಥಪೂರ್ಣವೂ, ಜೀವಂತವೂ ಆಗುವುದರಲ್ಲಿ ಸಂಶಯವಿಲ್ಲ. ಅವರ ಅಪಾರ ಅಭಿಮಾನಿಗಳು ಇದನ್ನು ಆಗಗೊಡುತ್ತಾರೆ ಎನ್ನುವುದರಲ್ಲಿ ಅನುಮಾನವೇನಿಲ್ಲ.