tejaswi avara maayaaloka

tejaswi avara maayaaloka

ತೇಜಸ್ವಿ ಅವರು ಎಂದಿನಂತೆಯೇ ತಮ್ಮ ಪರಿಸರದ 'ಅತ್ಯಂತ ನಿಕೃಷ್ಟ'ಎಂದು ನಾವೆಲ್ಲಾ ಭಾವಿಸುವ ಸಾಮಾನ್ಯ ಜನರ 'ದೈನಿಕ' ದಲ್ಲಿಯೂ,ಅವರ ಪೀಕಲಾಟಗಳ ನಡುವೆಯೂ ಮಹತ್ತಾದುದನ್ನು ಕಾಣಬಲ್ಲವರಾಗಿದ್ದಾರೆ. ಇದು ಶ್ರೇಷ್ಠ ಸಾಹಿತಿಯ ಲಕ್ಷಣ. ಅಲ್ಲವೆ? ಕುವೆಂಪು (ಮಲೆಗಳಲ್ಲಿ..) ಕಾರಂತರು (ಬೆಟ್ಟದಜೀವ..). ಆದರೆ ತೇಜಸ್ವಿ ಅವರ ವಿಶೇಷತೆಯೆಂದರೆ ತೀರ ಇತ್ತೀಚಿನ ವಿದ್ಯಾಮಾನಗಳನ್ನೂ ಒಳಗೊಂಡೂ ಸಾರ್‍ವತ್ರಿಕವಾದ ಕಾಣ್ಕೆಗಳನ್ನು ನೀಡುವುದು. . ಈಗ ಕಾಣೆಯಾಗಿರುವ ದೊಡ್ಡ ವಿಮರ್ಶಕರೊಬ್ಬರು ಹೇಳುತ್ತಿದ್ದರು: ಉತ್ತಮ ಸಾಹಿತ್ಯ 'ಮೀಡಿಯೋಕ್ರಸಿ'ಯನ್ನೂ ತಾಳಿಕೊಳ್ಳಬೇಕು ಎಂದು. ಹಾಗೆ ತೇಜಸ್ವಿ ಸಾಹಿತ್ಯ 'ಮೀಡಿಯೋಕ್ರಸಿ'ಯನ್ನು ತಾಳಿಕೊಳ್ಳುತ್ತಾ ಎಲ್ಲ ಬಗೆಯ ಓದುಗರನ್ನೂ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗುತ್ತದೆ.

Rating
No votes yet

Comments