ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ, ಸಂಗೀತ ಕಾರ್ಯಕ್ರಮ

ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ, ಸಂಗೀತ ಕಾರ್ಯಕ್ರಮ

ಧಾರವಾಡದ ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ ಭಾನುವಾರ ಆಗಸ್ಟ್, ೨೪, ೨೦೦೮ ರಂದು ‘ಮನೆ ಮನೆಯಲ್ಲಿ ಸಂಗೀತ’ ಎಂಬ ವಿಶಿಷ್ಠ ಕಾರ್ಯಕ್ರಮ ಸರಣಿ ಯೋಜನೆ ಅಡಿಯಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕಾರ್ಯಕ್ರಮ ಜರುಗಲಿದೆ.

ಧಾರವಾಡದ ಬಾರಾಕೊಟ್ರಿ ಹತ್ತಿರವಿರುವ ನಿರ್ಮಲ ನಗರದ ೧೧ನೇ ಕ್ರಾಸ್ ನ ಶ್ರೀ ಕೆ.ವಿ.ಪರ್ವತಿ ಅವರ ‘ಅಕ್ಷರ’ ನಿವಾಸದಲ್ಲಿ ಪ್ರಸಕ್ತ ದ್ವೈಮಾಸಿಕ ಸಂಗೀತ ಕಾರ್ಯಕ್ರಮ ಜರುಗಲಿದೆ. ಪಂ.ರಾಮಚಂದ್ರರಾವ್ ಕುಲಕರ್ಣಿ ಅವರ ಕೊಳಲು ವಾದನ, ಕುಮಾರಿ ಸುಕನ್ಯಾ ಬಡಿಗೇರ್ ಅವರ ಗಾಯನ ಹಾಗು ಕುಮಾರ ದಯಾನಂದ ಸುತಾರ್ ಮತ್ತು ರಮೇಶ್ ರಾಠೋಡ ಅವರ ತಬಲಾ ಜುಗಲ್ ಬಂದಿ ಜರುಗಲಿದೆ.

ಸಹ ಕಲಾವಿದರಾಗಿ ತಬಲಾ ಶ್ರೀ ಅಲ್ಲಮಪ್ರಭು ಕಡಕೋಳ, ಹಾರ್ಮೋನಿಯಂ ಶ್ರೀ ಅರ್ಜುನ್ ವಠಾರ್ ಕಲಾವಿದರಿಗೆ ವಾದ್ಯ ಸಹಕಾರ ನೀಡಲಿದ್ದಾರೆ. ನಾಡಿನ ಹಿರಿಯ ಸಾಂಸ್ಕೃತಿಕ ರಾಯಭಾರಿ ವಾಯೋಲಿನ್ ವಾದಕ ಪಂ.ಬಿ.ಎಸ್.ಮಠ ಅವರು ಸಭಾದ ಅಧ್ಯಕ್ಷರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ನಾಡಿನ ಯುವ ಪ್ರತಿಭೆಗಳಲ್ಲಿ ಹಾಗು ನಾಡಿನ ನಾಳಿನ ಸಾಂಸ್ಕೃತಿಕ ರಾಯಭಾರಿಗಳಿಗೆ ನಮ್ಮ ಪರಂಪರೆ, ಸಂಗೀತದ ಶ್ರೀಮಂತಿಕೆ ತಿಳಿಸಿ ಕೊಟ್ಟು ವಾರಸುದಾರರನ್ನಾಗಿಸುವ ಪ್ರಯತ್ನಕ್ಕೆ ಅವರು ಕಂಕಣಬದ್ಧರಾಗಿದ್ದಾರೆ.

ನೀವು ಬನ್ನಿ. ಗೆಳೆಯರನ್ನು ಕರೆತನ್ನಿ.