ಡೈರಿಯ ಕೆಲವು ಹಾಳೆಗಳು: ಕೊನೆಯ ಭಾಗ

ಡೈರಿಯ ಕೆಲವು ಹಾಳೆಗಳು: ಕೊನೆಯ ಭಾಗ

ದಿನಾಂಕ: ೧೦-ಎಪ್ರಿಲ್
ರಾಜೇಶ್:
ಅವಳ ತಂದೆ ತೀವ್ರ ಅಸ್ವಸ್ಥ ಆಗಿದ್ರು. ನನಗೆ ಮುಂಚಿನಿಂದ ಅವರ ಕುಟುಂಬದ ಪರಿಚಯ ಇದ್ದಿದರಿಂದ ನಾನು ಅವರಿಗೆ ಸಹಾಯ ಮಾಡಿದೆ. ಅವಳು ಒಂದು ವಾರದ ತನಕ ಆಫಿಸಿಗೆ ಹೋಗಲು ಆಗಿರಲಿಲ್ಲ, ನಾನೇ ಅವರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ರಜಾ ಸಿಗುವಂತೆ ಮಾಡಿದೆ. ನನಗನ್ನಿಸುತ್ತೆ ಹೋದ ವಾರ ನನಗೆ ಬಹಳ ಸಹಾಯಕವಾಗಿದೆ ಅಂತ, ನನಗೆ ಅವಳ ಜೊತೆ ಮತ್ತು ಅವಳ ಮನೆಯವರ ಜೊತೆ ಹತ್ತಿರವಾಗಲು ಬಹಳ ಸಹಾಯಕವಾಗಿತ್ತು . ವಿಧಿ ನನಗೆ ಅವಳನ್ನು ಹತ್ತಿರ ಸೆಳೆದುಕೊಳ್ಳಲು ಬಹಳ ಒಳ್ಳೆಯ ಅವಕಾಶ ಕೊಟ್ಟಿದೆ, ನಾನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತೇನೆ.
ದಿನಾಂಕ:೨೫-ಎಪ್ರಿಲ್
ಅವಳು:
ಬಹಳ ದಿನಗಳ ನಂತರ ನಾನು ನಿರುವನ್ನು ಭೇಟಿ ಮಾಡಿದೆ. ಅವನು ಕಾಫಿಯ ವಿಚಾರವಾಗಿ ಬಹಳ ಸಿಟ್ಟಾಗಿರುತ್ತಾನೆ ಅಂತ ಅಂದುಕೊಂಡಿದ್ದೆ ಆದ್ರೆ ನಾನು ಇಷ್ಟು ದಿನ ಆಫಿಸ್ಸಿಗೆ ಬರದಿದ್ದುದ್ದಕ್ಕೆ ಬಹಳ ಘಾಬರಿಗೊಂಡಿದ್ದ. ನಾನು ನಮ್ಮ ತಂದೆ ಖಾಯಿಲೆಗೆ ಬಿದದ್ದನ್ನ ವಿವರವಾಗಿ ಹೇಳಿದೆ. ಅವನು ನನ್ನ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿ ನಂತರ ನನ್ನ ಗಮನ ಬೇರೆಡೆ ಸೆಳೆಯಲು ಇನ್ನೇನೋ ಮಾತನಾಡುತ್ತಾ ಕುಳಿತ. ಅವನು ನನ್ನನ್ನ ನನ್ನ ತಂದೆಯ ವಿಷಯದಿಂದ ಹೊರತರಲು ಪ್ರಯತ್ನಿಸುತ್ತಿದ್ದ. ಅವನು ನಿಜಕ್ಕೂ ಸಮಚಿತ್ತದ ಹುಡುಗ, ನನಗೆ ಗೊತ್ತಿತ್ತು ಅವನು ಪರಿಸ್ಥಿತಿಯನ್ನು ಅರ್ಥ ಮಾಡ್ಕೋತಾನೆ ಅಂತ.
ದಿನಾಂಕ:೨೦-ಮೇ
ಅವಳು:
ನಿರು ಮತ್ತು ನಾನು ಬಹಳ ದಿನಗಳಿಂದ ಒಟ್ಟಿಗೆ ತಿರುಗಾಡುತ್ತಿದ್ದೇವೆ. ನನವನ್ನನ್ನ ಪ್ರೀತಿಸಲು ಶುರು ಮಾಡಿದ್ದೇನೆ. ಅವ್ನು ಕೂಡ ನಮ್ಮಿಬರ ವಿಷಯವನ್ನ ಸೀರಿಯಸ್ ಆಗಿ ತಗೊಂಡಿದಾನೆ, ಆದ್ರೆ ಅವ್ನು ನನಗಿಂತ ಚಿಕ್ಕವನು. ಹಾಗೇನೇ ಅವನು ಈಗಲೇ ಯಾವುದೇ ಕಮಿಟ್ಮೆಂಟ್ ಗೆ ತಯಾರಗಿದಾನೆ ಅಂತ ನನಗೆ ಅನ್ನಿಸೋಲ್ಲ. ಆದ್ರೆ ಮನೆಯಲ್ಲಿ ಅಪ್ಪ ಅಮ್ಮ ನನಗೆ ದಿನ ಮದುವೆಗೆ ಒತ್ತಾಯಿಸುತ್ತಿದ್ದಾರೆ: ಏನು ಮಾಡಲಿ? ನನವನನ್ನ ನೇರವಾಗಿ ಕೇಳಿಬಿಡ್ಲಾ?
ದಿನಾಂಕ:೨೨-ಮೇ
ಅವಳು:
ಇವತ್ತು ನಿರು ತಾನು ಕೆಲಸ ಬಿಡುತ್ತಿರುವ ವಿಷಯ ಹೇಳಿದ. ಅವನಿಗೆ ಮುಂಬಯಿಯಲ್ಲಿ ಎಂ ಬಿ ಏ ಗೆ ಸೀಟು ಸಿಕ್ಕಿದೆ. ೨ ವರ್ಷ ಅವನಿಂದ ದೂರ ಇರೋದು ನನ್ನಿಂದ ಅಗೋ ಕೆಲಸವಲ್ಲ. ಅವನನ್ನ ಮಾಡುವೆ ಮಾಡ್ಕೋ ಅಂತ ಕೇಳ್ಲಾ? ಅವನು ಅದಕ್ಕೆ ಹ್ಞೂ ಅಂತಾನ ಅಥವಾ ಇನ್ನೆರಡು ವರ್ಷ ನನ್ನ ಓದು ಮುಗಿಯುವ ತನಕ ಕಾಯಿ ಅಂತ ಹೇಳ್ತಾನ? ಆದ್ರೆ ನಾನು ಅಲ್ಲಿ ತನಕ ಕಾಯಲು ಸಿದ್ಧಳಿಲ್ಲ. ಅವನನ್ನ ನನ್ನ ಮದುವೆ ಆಗು ಅಂತ ಸೀದಾ ಕೇಳಿಬಿಡ್ತೀನಿ, ಅವನು ಏನು ಅಂತ ಹೇಳ್ತಾನೋ ನೋಡೋಣ.
ದಿನನಕ:೨೩-ಮೇ
ರಾಜೇಶ್:
ಇವತ್ತು ನಾನವಳಿಗೆ ಪ್ರೊಪೋಸ್ ಮಾಡಿದೆ. ಅವಳು ತನ್ನ ಮುಖದಲ್ಲಿ ಯಾವುದೇ ಭಾವನೆಗಳನ್ನ ತೋರಗೊಡಲಿಲ್ಲ. ನನಗೆ ಗೊತ್ತು ಅವಳು ಖಂಡಿತ ಒಪ್ಗೊತಾಳೆ ಅಂತ. ಕಾಲೇಜಿನಲ್ಲಿ ಅವಳಿಗೆ ನನ್ನ ಮೇಲೆ ಕ್ರಷ್ ಇತ್ತು ಅನ್ನೋದು ನನಗೆ ಗೊತ್ತಿದೆ. ನನಗನ್ನಿಸುತ್ತೆ ಅವಳು ನನ್ನ ಸ್ವೀಕರಿಸುತ್ತಾಳೆ ಅಂತ. ನಿರು ನಮ್ಮಿಬರ ನಡುವೆ ಬರೋಲ್ಲ ಅನ್ನೋದನ್ನ ಖಾತರಿ ಮಾಡ್ಕೊಬೇಕಾಗಿದೆ. ಅವನಿಲ್ಲ ಅಂದ್ರೆ ಎಲ್ಲ ಸರಾಗವಾಗಿ ನಡೆಯುತ್ತೆ.ಅವಳ ಮತ್ತೆ ನನ್ನ ತಂದೆ ತಾಯಿ ಕಡೆಯಿಂದಾನು ಯಾವುದೇ ಆಕ್ಷೇಪಣೆ ಬರೋದಿಲ್ಲ. ನಾನು ಮತ್ತು ಅವಳು ಮದುವೆ ಆಗುತ್ತಿವಿ ಅಂದ್ರೆ ಅವರು ಬಹಳಾನೇ ಖುಷಿ ಪಡ್ತಾರೆ.

ಅವನು:
ಇವತ್ತು ಅವಳು ಕರೆ ಮಾಡಿ ಕಾಫಿಗೆ ನಮ್ಮ ಮಾಮೂಲಿ ಜಾಗದಲ್ಲಿ ಸಿಗು ಅಂತ ಹೇಳಿದ್ಲು, ಆದ್ರೆ ಅದೇನಾಯಿತೋ ಗೊತ್ತಿಲ್ಲ ಅಚಾನಕ್ಕಾಗಿ ಕರೆ ಮಾಡಿ ಸಿಗೋದು ಬೇಡ ಅಂತ ಹೇಳಿದ್ಲು. ಯಾಕೆ ಅಂತ ಗೊತ್ತಾಗ್ಲಿಲ್ಲ. ಅವಳು ಮಾತನಾಡುವಾಗ ಬಹಳ ಬಳಲಿದಂತೆ ಕಂಡಳು, ಬಹುಷಃ ಕೆಲಸ ಬಹಳ ಆಗಿರಬೇಕು ಅಂದುಕೊಂಡು ಸುಮ್ಮನಾದೆ. ಆದ್ರೆ ಅವಳನ್ನ ಸಾಯಂಕಾಲ ಬಸ್ಸಿನಲ್ಲಿ ನೋಡಿದಾಗ ಅವಳು ಮಾತನಾಡುವ ಲಹರಿಯಲ್ಲಿರಲಿಲ್ಲ, ಯಾಕೋ ಮಂಕಾಗಿದ್ದಳು. ಅವಳು ಸುಮ್ನೆ ನನ್ನ ಕೈ ಹಿಡಿದುಕೊಂಡಳು. ಅವಳು ಏನೋ ಹೇಳ್ಬೇಕು ಅಂತ ಅಂದ್ಕೊತಿದ್ಲು ಆದ್ರೆ ಅವಳಿಗೆ ಆಗ್ತಿರಲಿಲ್ಲ. ಅವಳು ಏನು ಹೇಳಬೇಕು ಅಂತಿದ್ಲು ಅಂತ ನನಗೆ ಗೊತ್ತಾಯಿತು ಆದ್ರೆ ನಾನು ಮೌನವಾಗಿದ್ದೆ. ನಾನಿಳಿಯುವ ಜಾಗ ಹತ್ತಿರ ಬರುತ್ತಿದಹಾಗೇನೆ, ಅವಳು ನನ್ನ ಕೈ ಹಿಡಿತ ಸಡಿಲಿಸಿದಳು. ಅವಳು ಏನೊಂದೂ ಮಾತನಾಡಲಿಲ್ಲ, ಮುಖದ ಮೇಲಿನ ನೋವು ಭರಿತ ನಗುವಿನ ಹೊರೆತು.

ರಾತ್ರಿ ಊಟದ ನಂತರ ಅವಳಿಗೆ ಕರೆ ಮಾಡಿದೆ ಆದ್ರೆ ಅವಳು ಕರೆ ಸ್ವೀಕರಿಸಲಿಲ್ಲ. ಕೆಲಸದ ಒತ್ತಡ ಬಹಳ ಇರಬೇಕು ಅದಕ್ಕೆ ಬೇಗ ಮಲಗಿದ್ದಾಳೆ ಅಂದುಕೊಂಡು ಸುಮ್ಮನಾದೆ. ಏನು ಕೆಟ್ಟದ್ದು ಸಂಭವಿಸಿರಲಾರದು ಅಂತ ಅಂದುಕೊಳ್ತೇನೆ. ಓ ದೇವ್ರೇ ಅವಳನ್ನ ಕಾಪಾಡು.

ಅವಳು:
ಇವತ್ತು ನನ್ನ ಜೀವನದ ಅತ್ಯಂತ ಕರಾಳ ದಿನ. ರಾಜೇಶ್ ಇವತ್ತು ನನಗೆ ಪ್ರೊಪೋಸ್ ಮಾಡಿದ. ನನ್ನ ಜೀವನೋತ್ಸಾಹ ಬಸಿದು ಹೋಯಿತು. ನಾನು ಕಾಲೇಜಿನಲ್ಲಿ ಅವನನ್ನ ಪ್ರೀತಿಸುತ್ತಿದ್ದೆ ಆದ್ರೆ ಅವನು ಅದಕ್ಕೆ ಲಕ್ಷ್ಯ ಕೊಡಲಿಲ್ಲ. ಕೆಲವು ಸಾರಿ ಬೇಕುಂತಲೇ ನನ್ನನ್ನ ದೂರ ಇಡುತ್ತಿದ್ದ. ಬಹಳ ಪ್ರಯತ್ನ ಪಟ್ಟು ಆ ನೋವಿನಿಂದ ಹೊರಬಂದಿದ್ದೆ. ನಾನವನನ್ನ ಪ್ರೀತಿಸುತ್ತಿದ್ದೆ, ಆದ್ರೆ ಅವನು ನನ್ನ ದೂರ ತಳ್ಳಿದ. ಪ್ರೀತಿಯೇನು ಒಪ್ಪಂದದ ಮೇರೆಗೆ ಮಾಡುವಂತಹುದಲ್ಲ. ಅವನ ಮೇಲಿನ ಭಾವನೆಗಳಿಂದ ಹೊರಬರಲು ಬಹಳ ಪ್ರಯತ್ನ ಪಟ್ಟಿದ್ದೇನೆ, ಹೊರಬರಲು ಅಲ್ಲದಿದ್ದರೂ ಅವುಗಳನ್ನ ಅದುಮಿಡಲು. ರಾಜೇಶ್ ನನ್ನನ್ನ ಯಾವತ್ತಿಗೂ ಇಷ್ಟ ಪಡಲಿಲ್ಲ. ಅವಾಗಿಲ್ಲದ್ದು ಈಗ್ಯಾಕೆ? ಅವನಲ್ಲಿ ನನ್ನ ಬಗ್ಗೆ ಭಾವನೆಗಳಿವೇಯಾ? ಅಥವಾ ಅವನು ನನ್ನ ಜೊತೆ ಆಟವಾಡ್ತಿದಾನ?

ನಾನಿವತ್ತು ನಿರುಗೆ ಪ್ರೊಪೋಸ್ ಮಾದುವವಳಿದ್ದೆ. ಇವತ್ತು ನನ್ನ ಜೀವನದ ಮಹತ್ತರ ಘಳಿಗೆ ಆಗುವುದರಲ್ಲಿತ್ತು, ಆದ್ರೆ ಈ ರಾಜೇಶ್ ನನ್ನ ನಮ್ಮದಿಯನ್ನೇ ಕದಡಿಬಿಟ್ಟ. ರಾಜೇಶ್ ಹೇಳಿದ್ದು ಕೇಳಿ ನನಗೆ ಶಾಕ್ ಆಯ್ತು. ನಾನವನನ್ನು ಇಷ್ಟಪಡೋದಿಲ್ಲ ಅಂತ ಅಲ್ಲ, ಸುಮಾರು ವರ್ಷಗಳು ಕಳೆದಿವೆ ಅವನು ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ ಮತ್ತೆ ಈವಾಗ ನಿರು ನನ್ನ ಜೀವನದಲ್ಲಿದ್ದಾನೆ. ಈ ದಾರಿಯಲ್ಲಿ ನೀರು ಹರಿದು ಬಹಳ ಕಾಲವೇ ಆಗಿಹೋಗಿದೆ, ನಾನು ಅವನನ್ನ ಇಷ್ಟ ಪಡ್ತಿನಾ? ಗೊತ್ತಿಲ್ಲ. ಹಾಗೇನೇ ನಿರು ನನ್ನ ಜೊತೆ ಇರ್ತಾನ ಅನ್ನೋದು ಕೂಡ ನನಗೆ ಗೊತ್ತಿಲ್ಲ. ನಾನೀಗ ಗೊಂದಲದಲ್ಲಿದ್ದೇನೆ. ಓ ದೇವ್ರೇ ಸಹಾಯ ಮಾಡು. ನನಗೆ ದಾರಿ ತೋರ್ಸು. ಎಲ್ಲ ಕಷ್ಟ ಪರಿಹಾರ ಮಾಡೋ ಯಂತ್ರವನ್ನ ನೀನ್ಯಾಕೆ ಮಾಡ್ಲಿಲ್ಲ.

ದೇವ್ರು:
ಯಂತ್ರ? ಹ್ಹ ಹ್ಹ ಹ್ಹ!!! ಈ ಎಲ್ಲ ಸಾಫ್ಟವೇರ್ ಇಂಜಿನಿಯರ್ಗಳು ಹೀಗೆ ಇರ್ತಾರೆ. ಒಂದು ಯಂತ್ರ ಎಲ್ಲ ಕಷ್ಟಗಳಿಗೂ ಪರಿಹಾರ ಕೊಡುತ್ತೆ ಅಂತ ಅಂದುಕೊಂಡು ಬಿಟ್ಟಿದ್ದಾರೆ ಇವರು. ಆದ್ರೆ ಜೀವನ ಇಷ್ಟು ಸರಳವಾಗಿಲ್ಲ ಮಗು. ನಿಜಜೀವನ ಸಂಭಾಳಿಸಲು ನಿಜಕ್ಕೂ ಕ್ಲಿಷ್ಟಕರ. ನಿಮಗೆ ಗಣಿತದಲ್ಲಿ ೧+೧=೨. ಆದ್ರೆ ನಿಜ ಜೀವನದಲ್ಲಿ ೧+೧ ಕ್ಕೆ ಉತ್ತರ ೨ ಬಿಟ್ಟು ಏನಾದ್ರೂ ಆಗಬಹುದು. ಅದೇ ಜೀವನ. ಅದೇ ನನ್ನ ನಿಯಮ.

ಇನ್ನು ಯಂತ್ರದ ಬಗ್ಗೆ ಹೇಳೋದಾದ್ರೆ, ನಿಮ್ಮ ನಿಜ ಜೀವನದ ಕಷ್ಟಗಳನ್ನು ಎದುರಿಸಲು ನಾನದನ್ನು ನಿಮಗೆ ಕೊಟ್ಟಿದ್ದೇನೆ. ಕೆಲವರು ಅದನ್ನ ಹೃದಯ ಅಂತಾರೆ, ಮತ್ತೆ ಕೆಲವರು ಬುಧ್ಧಿ. ನಾನು ನಿಮಗೆ ಯೋಚಿಸೋಕೆ ಶಕ್ತಿ ಕೊಟ್ಟಿದ್ದೇನೆ. ನಿಮ್ಮ ಹಿಂದಿನ ಅನುಭವದ ಮೇಲೆ ನೀವು ನಿರ್ಧಾರಗಳನ್ನ ತಗೊತೀರ, ನಿಮ್ಮ ಮನಸಾಕ್ಷಿ ನಿಮಗೆ ನಿರ್ಧಾರಗಳನ್ನು ತಿಳಿಸುತ್ತದೆ. ನನಗೆ ನಂಬಿಕೆ ಇದೆ ಅವಳ ಖಂಡಿತ ಈ ಇಬ್ಬಂದಿಯ ಸ್ಥಿತಿ ಇಂದ ಹೊರಬರ್ತಾಳೆ ಅಂತ, ಯಾಕಂದ್ರೆ ಅವಳು ನಾನು ಶೃಷ್ಟಿ ಮಾಡಿರೋದನ್ನ ನಂಬೋಲ್ಲ ಆದ್ರೆ ನಾನು ನಂಬ್ತೀನಿ.

ದಿನಾಂಕ: ೨೪-ಮೇ
ಅವಳು:
ನಿನ್ನೆ ಬಹಳ ವರ್ಷಗಳ ನಂತರ ನಾನು ಅತ್ತೆ. ಅತ್ತೆ ಅತ್ತೆ ಅಳುತ್ತಾನೆ ಹೋದೆ. ನಾನು ಭಾವನೆಗಳ ಸಂಘರ್ಷದಲ್ಲಿ ಸಂಪೂರ್ಣ ಕಳೆದುಹೋಗಿದ್ದೆ. ನನಗೆ ಸರಿಯಾಗಿ ಆಗುತ್ತಿರಲಿಲ್ಲ. ನಾನೇನು ಮಾಡ್ಲಿ? ನಾನು ರಾಜೇಶನನ್ನ ಕೆಲವು ವರುಷಗಳ ಹಿಂದೆ ಪ್ರೀತಿಸುತ್ತಿದ್ದೆ, ಆದ್ರೆ ಅವ್ನು ನನ್ನ ಪ್ರೀತಿಸಲಿಲ್ಲ. ಆದ್ರೆ ಈಗ ಅವನು ನನ್ನ ಪ್ರೀತಿಸ್ತಾನೆ, ಆದ್ರೆ ನಾನು ನಿರುನ. ರಾಜೇಶ್ ಜೀವನದಲ್ಲಿ ಆರಾಮವಾಗಿರಬೇಕು ಅಂತ ಬಯಸ್ತಿದಾನೆ ಅದಕ್ಕೆ ನನ್ನ ಮದುವೆ ಆಗಬೇಕು ಅಂತಿದಾನೆ. ಆದ್ರೆ ನಿರು ಮುಂದಿನ ಜೀವನದ ಬಗ್ಗೆ ಯೋಚಿಸಿದ ಹಾಗೆ ಕಾಣುತ್ತಿಲ್ಲ, ಈಗ ಅವ್ನು ಎಂ ಬಿ ಎ ಮುಗಿಸುವುದರ ಕಡೆ ಲಕ್ಷ್ಯ ಕೊಡುತ್ತಿದ್ದಾನೆ, ಮುಂದೆಂದಾದ್ರು ಜೀವನದಲ್ಲಿ ನೆಲೆ ಹೊಂದುವ ಬಗ್ಗೆ ಯೋಚಿಸಬಹುದು. ರಾಜೇಶ್ ನನ್ನ ವಯಸ್ಸಿನವನು, ಬಹಳ ಸಮಚಿತ್ತ ಉಳ್ಳವನು; ಆದ್ರೆ ನಿರು ನನಗಿಂತ ಚಿಕ್ಕವನು ಸ್ವಲ್ಪ ತರ್ಲೆ ಅಂತ ಹೇಳಬಹುದು, ಆದ್ರೆ ಈ ವಯಸ್ಸಿಗೆ ಅದೇ ಶೋಭೆ. ನನ್ನ ಕುಟುಂಬದವರಿಗೆಲ್ಲ ರಾಜೇಶ್ ಗೊತ್ತು, ಅವನನ್ನ ನನ್ನ ಬಾಲ ಸಂಗಾತಿ ಮಾಡೋಕೆ ಅವರು ಸಂತೋಷಿಸುತ್ತಾರೆ, ಆದ್ರೆ ನಿರು, ಅವನ ಬಗ್ಗೆ ಅಪ್ಪನಿಗಾಗಲಿ ಅಮ್ಮನಿಗಾಗಲಿ ಏನು ಹೇಳಿಲ್ಲ.

ಆದ್ರೆ ನಿರುನ ನಾನು ಬಹಳ ಪ್ರೀತಿಸುತ್ತೇನೆ, ಬಹುಶಃ ನಾನು ಕಾಲೇಜಿನಲ್ಲಿ ರಾಜೇಶ್ನನ್ನು ಪ್ರೀತಿಸಿದ್ದಕ್ಕಿಂತ ಬಹಳ. ನಾನೀಗ ಹೇಗೆ ನಿರ್ಧಾರ ತಗೊಳ್ಲಿ? ನನ್ನ ಭಾವನೆಗಳ ಮೇಲಾ ಅಥವಾ ನನ್ನ ಭವಿಷ್ಯದ ದೃಷ್ಟಿಯಿಂದನಾ ? ನಾನೆಲ್ಲಿಗೆ ಹೋಗ್ಲಿ, ನನಗೆ ಹುಚ್ಚು ಹಿಡಿದ ಹಾಗೆ ಆಗ್ತಿದೆ? ಓ ದೇವ್ರೇ ಸಹಾಯ ಮಾಡಪ್ಪ. ನೀನು ನನಗೆ ಬೇಕು ಇವಾಗ. ಪ್ಲೀಸ್ ಪ್ಲೀಸ್ ದೇವ್ರೇ ಸಹಾಯ ಮಾಡೋ... ನನಗೆ ನಿರ್ಧಾರ ತಗೊಳ್ಳೋಕೆ ಸಹಾಯ ಮಾಡು.

ದಿನಾಂಕ:೩೦-ಮೇ
ಅವನು:
ಕಳೆದ ಕೆಲವು ದಿನಗಳು ನನಗೆ ಬಿರುಗಾಳಿಯಲ್ಲಿ ಹೊಯ್ದಾಡಿದಂತಹ ಅನುಭವ. ಕೆಲಸ ಬಿಡಲು ಬೇಕಾದ ಎಲ್ಲ ವ್ಯವಹಾರಗಳು ನನ್ನನ್ನ ಹೈರಾಣು ಮಾಡಿದವು. ಇಲ್ಲಿ ಹುಳದ ತರಹ ಬಿದ್ದು ಒದ್ದಾಡುವುದು ನನಗೆ ಬೇಕಿಲ್ಲ ಅದಕ್ಕೆ ನಾನು ಎಂ ಬಿ ಎ ಮಾಡೋಕೆ ಹೊರಟಿದೀನಿ. ಇನ್ನು ಕೆಲವೇ ದಿನಗಳು ನಾನು ನನ್ನ ಗುರಿಯನ್ನು ತಲುಪುವವನಿದ್ದೇನೆ.
ಆದ್ರೆ ಇಲ್ಲಿ ಒಂದು ದೊಡ್ಡ ಸಂಕಷ್ಟವಿದೆ, ನನಗೆ ಅವಳನ್ನು ಬಿಟ್ಟು ಹೋಗಲು ಮನಸಿಲ್ಲ, ಅವ್ಳು ನನ್ನ ಪ್ರೀತಿ, ನನ್ನ ಉಸಿರು. ನಾನವಳನ್ನು ನಿಜಕ್ಕೂ ಪ್ರೀತಿಸುತ್ತೇನೆ. ನನ್ನ ಭಾವನೆಗಳು ಪ್ರೀತಿಗೆ ತಿರುಗಿದ್ದು ನನಗೆ ಗೊತ್ತಾಗಲೇ ಇಲ್ಲ. ನನಗೆ ಅವಳನ್ನು ಬಿಟ್ಟಿರಲು ಮನಸಿಲ್ಲ ಹಾಗೇನೇ ನಾನು ಇಲ್ಲಿರೋಕೆ ಸಾಧ್ಯವಿಲ್ಲ. ನಾನು ಎಂ ಬಿ ಎ ಮಾಡ್ತಿರೋದು ಮುಂಬೈಯಲ್ಲೇ ಹೊರತು ಇಲ್ಲಲ್ಲ. ಇನ್ನು ೨-೩ ವರ್ಷ ನಾನು ಓದು ಮುಗಿಸಿ ಜೀವನದಲ್ಲಿ ನೆಲೆ ಕಂಡುಕೊಳ್ಳೋತನಕ ಅವ್ಳು ನನಗಾಗಿ ಕಾಯತಾಳ?
ನಾನೆಗ ಎಲ್ಲರಿಗು ವಿದಾಯ ಹೇಳ್ಬೇಕು, ಅದೇನು ದೊಡ್ಡ ಕಷ್ಟದ ಕೆಲಸವಲ್ಲ. ಆದ್ರೆ ಇದು ಅವಳ ಜೊತೆ ಹೇಳೋಕೆ ಆಗೋಲ್ಲ. ನಾನವಳಿಗೆ ಹೋಗೋದನ್ನ ಹೇಳ್ತಿನೋ ಇಲ್ಲೋ ಗೊತ್ತಿಲ್ಲ, ಹೇಗೆ ಅವಳಿಗೆ ವಿದಾಯ ಹೇಳ್ತೀನಿ ಅಂತ ನನಗೆ ಆತಂಕ ಶುರುವಾಗಿದೆ.

ಅವಳು:
ನಾನು ನನ್ನ ನಿರ್ಧಾರವನ್ನ ಮಾಡಿದ್ದೇನೆ. ಇದನ್ನ ಹೇಗೆ ತಿಳಿಸಬೇಕು ಅಂತ ನನಗೆ ಗೊತ್ತಿಲ್ಲ, ಆದ್ರೆ ಇದನ್ನ ತಿಳಿಸಲೇಬೇಕು. ಎರೆದರಲ್ಲಿ ಒಂದು ಹೃದಯ ಒಡೆದು ಹೋಗುತ್ತೆ ಅನ್ನೋದು ನನಗೆ ಗೊತ್ತು ಆದ್ರೆ ಇದನ್ನ ಬಿಟ್ಟು ಬೇರೆ ದಾರಿಯೇ ಇಲ್ಲ.ನಾನು ನನ್ನ ನಿರ್ಧಾರ ಮಾಡಿದ್ದೇನೆ ಮತ್ತು ಅದನ್ನೇ ಪಾಲಿಸ್ತೇನೆ. ಓ ದೇವ್ರೇ, ಎಲ್ಲ ಸಹಿಸಿಕೊಲ್ಲೋಕೆ ನನಗೆ ಶಕ್ತಿ ಕೊಡು.

ದಿನಾಂಕ: ೬-ಜೂನ್
ಅವಳು:
ಇವತ್ತು ನಿರುನ ಹುಟ್ಟಿದ ಹಬ್ಬ ಮತ್ತು ಇಲ್ಲಿ ಇದು ಅವನ ಕೊನೆಯ ದಿನ. ಇವತ್ತು ಸಾಯಂಕಾಲ ಅವನು ಮುಂಬಯಿಗೆ ಹೋದ. ಅವನಿಂದ ದೂರ ಆಗಬೇಕಾದರೆ ನನ್ನ ಮನಸ್ಸೇ ಒಡೆದು ಹೋಯಿತು. ಬಹುಶಃ ಭವಿಷ್ಯದಲ್ಲಿ ನಾವು ಒಬ್ಬರನ್ನೊಬ್ಬರು ನೋಡಲಿಕ್ಕಿಲ್ಲ ಅನ್ನೋ ಸತ್ಯ ನಮ್ಮಿಬರಿಗೆ ಅರಿವಾದಾಗ ನನಗೆ ಈ ಪ್ರಪಂಚವೇ ಬೇಡ ಅನ್ನಿಸಿಬಿಟ್ಟಿತು. ನಾನಾಗಲೇ ನಿರ್ಧಾರ ಮಾಡಿಯಾಗಿತ್ತು, ತೊಂದ್ರೆ ಅಂದ್ರೆ ಅದನ್ನ ಅವನಿಗೆ ಹೇಗೆ ತಿಳಿಸಬೇಕು ಅನ್ನೋದು. ನಾನು ವಸ್ತು ನಿಷ್ಟವಾಗಿ ವರ್ತಿಸಬೇಕೆಂದುಕೊಂಡೆ. ಹುಟ್ಟಿದ ಹಬ್ಬದ ದಿನ ಅಪ್ತೆಷ್ಟರು ಉದುಗೊರೆಗಳನ್ನ ಕೊಟ್ಟರೆ ನಾನು ಅವನಿಗೆ ಒಂದು ಭಯಂಕರ ಸುದ್ದಿಯನ್ನ ಹೇಳಿದೆ. ಅದು ನಿಜಕ್ಕೂ ಭಯಂಕರ. ಇದನ್ನ ಕೇಳಿ ಅವನು ಏನನ್ನು ಹೇಳಲಿಲ್ಲ, ಅವನ ಬಾಯಲ್ಲಿ ಬಂದದ್ದು congrats ಮತ್ತು good luck ಅನ್ನೋ ಪದಗಳು ಮಾತ್ರ. ಆದ್ರೆ ಅವನ ಮುಖ ಅವ್ನು ಏನು ಹೇಳಬೇಕಾಗಿತ್ತೋ ಏಳವನ್ನು ಸ್ಪಷ್ಟವಾಗಿ ಹೇಳ್ತು. ನಾನು ಎಲ್ಲರ ಮಧ್ಯ ಈದಿನಿ ಅನ್ನೋ ಪರಿವೆಯೇ ಇಲ್ಲದೆ ಜೋರಾಗಿ ಅಳೋಕೆ ಶುರುಮಾಡಿಬಿಟ್ಟೆ. ಬಂದಿದ್ದ ಸ್ನೇಹಿತರೆಲ್ಲ ನನ್ನನ್ನೇ ನೋಡುತ್ತಾ ನಿಂತುಬಿಟ್ಟರು. ಅವನು ಅಳಲಿಲ್ಲ ನಿಜ ಆದ್ರೆ ಅವಕಾಶ ಇದ್ದಿದ್ರೆ ಅವ್ನು ನಿಂತಲ್ಲೇ ನೀರಗುತ್ತಿದ್ದನು, ಅದು ಅವನ ಕನ್ನಚಿನಲ್ಲೇ ಕಾಣಿಸುತ್ತಿತ್ತು.

ನಿನ್ನ ಬದಲು ರಾಜೇಶನನ್ನ ಆರಿಸಿಕೊಂಡಿದ್ದಕೆ ಕ್ಷಮೆ ಕೇಳ್ತೀನಿ ಅಂದಾಗ. ಅವನ ಉತ್ತರ ಕೇಳಿ ನಾನು ದಂಗಾಗಿಹೋದೆ. ಅವನು ಹೇಳಿದ್ದು "ನೀನು ಕ್ಷಮೆ ಕೇಳಬೇಕಾಗಿಲ್ಲ, ಇದು ನಿನ್ನ ಜೀವನ ನಿನಗೆ ಯಾರನ್ನ ಬೇಕಾದ್ರೂ ಆರಿಸಿಕೊಳ್ಳುವ ಸ್ವಾತಂತ್ಯ್ರ ನಿನಗಿದೆ ಮತ್ತು ಅದನ್ನು ಮಾಡುವಷ್ಟು ದೊಡ್ದವಳಾಗಿದ್ದಿಯ ಮತ್ತು ನೀನು ಸರಿಯಾದ ನಿರ್ಧಾರವನ್ನೇ ಮಾಡಿದ್ದಿಯ. ನಾವು ಸ್ನೇಹಿತರಾಗಿದ್ದೆವು ಸ್ನೇಹಿತರಾಗೆ ಇರೋಣ, ಆದ್ರೆ ನಿನ್ನ ಜೊತೆ ಸಂಪರ್ಕದಲ್ಲಿರು ಅಂತ ಮಾತ್ರ ಹೇಳಬೇಡ. ನಾನಿನ್ನ ಪ್ರೀತಿಸಿದೆ, ನಿಜಕ್ಕೂ ಮನದಾಳದಿಂದ ಪ್ರೀತಿಸಿದೆ. ನಾನು ಯಾವಾಗಲು ನಿನ್ನ ಬಗ್ಗೆ ಯೋಚಿಸಿದರೆ ನಿನ್ನ ಪ್ರೀತಿ ಬಿಟ್ಟು ನನ್ನ ಕಣ್ಣಮುಂದೆ ಏನು ಬರೋಲ್ಲ ನಿನಗೂ ಕೂಡ ಹಾಗೆ ಆಗುತ್ತೆ ಅಂತ ಅಂದುಕೊಂಡಿದಿನಿ. ನಿನ್ನ ಬಗ್ಗೆ ಇನ್ನು ಯೋಚಿಸೊಲ್ಲ ಅದು ನೀನು ಮದುವೆ ಆದ ಮೇಲೆ ಕೂಡದು. so ಇದು ನಮ್ಮ ಕೊನೆಯ ಭೇಟಿ. ನಿನಗೆ ಧ್ಯನವಾದಗಳು ಈ ನಿನ್ನ ಸ್ನೇಹಕ್ಕೆ ಮತ್ತು ಪ್ರೀತಿ ಅನ್ನೋ ಮಧುರ ಭಾವನೆಯನ್ನ ನನ್ನ ಮನಸ್ಸಿನಲ್ಲಿ ಯುಮ್ಬಿ ಕೊಟ್ಟಿದಕ್ಕೆ. ನಿನ್ನ ಮುಂದಿನ ಜೀವನಕ್ಕೆ best of ಲಕ್. " ಹೀಗೆ ಹೇಳಿ ಅವನು ಬಸ್ಸಿನಲ್ಲಿ ಹತ್ತಿ ಕುಳಿತುಬಿಟ್ಟ.

ಅವನಿಗೆ ನಿಜಕ್ಕೂ ಆ ಅನಿಸಿಕೆ ಇದೇನಾ ಅಥವಾ ನನ್ನ ನೋವು ಹೆಚ್ಚು ಮಾಡೋದು ಬೇಡ ನಟ ಆತರಹ ಹೇಳಿ ಹೋದ್ನ? ಇಷ್ಟು ದಿನ ನಾನು ನಿರು ಜೊತೆ ಇದ್ರೂ ಕೂಡ ಅವನನ್ನ ಸಂಪೂರ್ಣವಾಗಿ ಅರ್ಥ ಮಾಡ್ಕೊಳ್ಳೋಕೆ ಆಗ್ಲಿಲ್ಲ ಅನ್ನಸ್ತುತ್ತೆ. ಏನೇ ಇರಲಿ ನಿರು ನಿನ್ನ ಪ್ರೀತಿಸಿದ್ದು ನಿಜ. ಪ್ರಪಂಚದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನನ್ನ ಪ್ರೀತಿಸಿದೆ. ಆದ್ರೆ ನನ್ನ ನಿರ್ಧಾರ ನನ್ನ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ತಗೆದು ಕೊಂಡಿದ್ದಾಗಿದೆ. ನನ್ನ ನಿರ್ಧಾರ ನಮ್ಮಿಬರಿಗೂ ಒಳ್ಳೆಯದನ್ನ ಮಾಡುತ್ತೆ ಅನ್ನೋ ನಂಬಿಕೆ ನನಗೆ ಖಂಡಿತಾ ಇದೆ. ನಾನು ಈ ಡೈರಿ ಯನ್ನು ನಿನ್ನ ನೋಡಿದ ದಿನದಿಂದ ಬರೆಯಲು ಶುರು ಮಾಡಿದೆ, ಆದ್ರೆ ಇವಾಗ ನೀನೆ ನನ್ನ ಜೀವನದಲ್ಲಿ ಇಲ್ಲ, ನಾನು ಇದನ್ನ ಬರೆಯುವುದನ್ನು ನಿಲ್ಲಿಸುತ್ತೇನೆ. ಇದು ನನ್ನ ಡೈರಿಯ ಕೊನೆಯ ಹಾಳೆಯಾಗಲಿದೆ. ನಿರು ನಿನ್ನ ಭವಿಷ್ಯಕ್ಕೆ ನನ್ನ best of luck. i love you, love you, love you.......... bye bye Bbye.....

ಅವನು:
ಇದು ನನ್ನ ಜೀವನದ ಅತ್ಯಂತ ಕೆಟ್ಟ ಹುಟ್ಟಿದ ಹಬ್ಬ, ಇವತ್ತು ನಾನು ನನ್ನ ಪ್ರೀತಿಯನ್ನ ಮುರಿದುಕೊಂಡ ದಿನ. ಅದನ್ನ ಮುರಿದುಕೊಂಡೆ ಅಂದ್ರೆ ತಪ್ಪಾಗುತ್ತೆ, ನಾವಿಬ್ಬರು ಬೇರೆ ಆದ್ವಿ; ಈ ಅಗಲುವಿಕೆ ನಿರಂತರ, ಇನ್ನೊಬ್ಬರ ರೇಖೆಯನ್ನು ಇನ್ನೆಂದು ತುಳಿಯುವುದಿಲ್ಲ ಅನ್ನೋ ಆಣೆಯೊಂದಿಗೆ. ನನಗೆ ಅವಳನ್ನ ನೋಡಿ ಅಳಬೇಕು ಅಂತ ಅನ್ನಿಸಿತು; ಆದ್ರೆ ಹುಡುಗರು ಅಳ್ತಾರ? ಹೌದು ಅಳ್ತಾರೆ, ಆದ್ರೆ ಗುಟ್ಟಾಗಿ... ಇವಾಗ ನಾನು ಅಳೋ ತರಹ. ಈ ಹಾಳೆ ಪೂರ ನನ್ನ ಕಣ್ಣಿರಿನಿಂದ ನೆನೆದು ಹೋಗಿದೆ. ಏನೇ ಇರ್ಲಿ ಇದು ನನ್ನ ಕೊನೆಯ ಹಾಳೆ. ಇನ್ನು ಮುಂದೆ ಡೈರಿ ಬರೆಯಬಾರದು ಅಂತ ನಿರ್ಧಾರ ಮಾಡಿದ್ದೇನೆ. ಈ ದೈರ್ಯನ್ನ ಬರೆಯೋಕೆ ಶುರು ಮಾಡಿದ್ದೆ ನನಗೆ ಸೆಕ್ರೆಟರಿ ಸಿಕ್ಕ ಮೇಲೆ ಆದ್ರೆ ಈಗ ಅವಳೇ ನನ್ನ ಜೊತೆಗಿಲ್ಲ, ಇನ್ನು ಡೈರಿ ಬರೆದು ಏನು ಪ್ರಯೋಜನ? ಹುಡುಗಿ ನಿನ್ನ ಬಾಳ ಹಾದಿ ಸದಾ ನಗುವಿನಲ್ಲಿ ಸಾಗಲಿ. I Love You. Bye.....
ಕೊನೆಯ ಭಾಗ:
ರಾಜೇಶ್:
ಕೊನೆಗೂ, ಇವತ್ತು ನನ್ನ ಬಾಳಿನ ಅದೃಷ್ಟದ ದಿನ. ಅವಳು ಹ್ಞೂ ಅಂತ ಹೇಳಿದ್ಲು. ನನಗೆ ತುಂಬ ಸಂತೋಷ ಆಗ್ತಿದೆ. ಅವಳು ನನ್ನವಳು. ನನ್ನ ಕನಸು ಸಾಕಾರಗೊಂಡಿದೆ. ಓ ದೇವ್ರೇ ನಿನಗೆ ಕೋಟಿ ವಂದನೆ. ಕೇವಲ ಕೆಲವೇ ಜನ ತಾವು ಪ್ರೀತಿಸಿದವರ ಜೊತೆ ಇರೋ ಅದೃಷ್ಟ ಪಡಿತಾರೆ; ನಾನು ಅಂತಹ ಅದೃಷ್ಟಶಾಲಿಗಳಲ್ಲಿ ಒಬ್ಬ. ನನ್ನ ಸಂತೋಷಕ್ಕೆ ಮೇರೆಯೇ ಇಲ್ಲ. ನಾನಿವತ್ತು ತುಂಬ ಖುಷಿಯಾಗಿದ್ದೇನೆ.

ನಿರು ಇವತ್ತು ಕಂಪನಿ ಬಿಟ್ಟು ಹೋದ. ಮುಂದೆ ಭವಿಷ್ಯದಲ್ಲಿ ಮತ್ತೆ ಸಿಗ್ತಿವಾ? ಗೊತ್ತಿಲ್ಲ. ನಾನು ಅವನನ್ನ ಹಾರೈಸಿ ಬೀಳ್ಕೊಡಲು ಹೋಗಿದ್ದೆ. ಅವನು ಅವಳ ಜೊತೆ ಮಾತ್ನಾಡ್ತಿದ್ದ. ನನಗೆ ಅವಳ ಮುಖ ಕಂಡಾಗ, ನನ್ನ ಮನಸಿನಲ್ಲಿ ಏನೋ ದುಃಖದ ಅನುಭವ. ಅವರಿಬ್ಬರ ಮದ್ಯ ಏನಾದ್ರೂ ಇದೇನಾ? ಇದ್ರೆ ಅವಳು ನನಗೆ ಹ್ಞೂ ಅಂತ ಯಾಕೆ ಹೇಳಿದ್ಲು? ಅವರಿಬ್ರು ಸೇರಿ ನನ್ನಿಂದ ಏನಾದ್ರೂ ಮುಚ್ಚಿಡೋಕೆ ಪ್ರಯತ್ನ ಪಡ್ತಿದಾರ? ಅಥವಾ ಅವರಿಬ್ಬರ ಮಧ್ಯೆ ನಾನು ಅಡ್ಡವಾಗಿ ಇದ್ದಿನಾ? ಅವಳಿಂದ ದೂರ ಸರಿಯುವಾಗ ನಿರುನ ಕಣ್ಣಲ್ಲಿ ನಾನು ಕಣ್ಣಿರು ನೋಡಿದೆ, ಅವ್ನು ಹಾಗೆ ಬಸ್ಸು ಹತ್ತಿಬಿಟ್ಟ. ಅವಳ ಸ್ಥಿತಿ ಏನು ಭಿನ್ನವಾಗಿರಲಿಲ್ಲ, ಅವಳು ನಿಜಕ್ಕೂ ಜೋರಾಗಿ ಅತ್ತುಬಿಟ್ಟಳು. ಕೆಲವು ನಿಮಿಷಗಳ ನಂತರ ಅವಳು ಸಹಜ ಸ್ಥಿತಿಗೆ ಬಂದಳು ಆದ್ರೆ ಅವಳ ನೋಟ ಶೂನ್ಯವನ್ನು ದಿಟ್ಟಿಸುತ್ತಿತ್ತು. ಅವಳ ಮುಖ ಕಣ್ಣಿರನ್ನು ತಡೆ ಹಿಡಿಯುವ ವ್ಯರ್ಥ ಪ್ರಯತ್ನವನ್ನ ಸಾರಿ ಹೇಳುತ್ತಿತ್ತು. ಓ ದೇವ್ರೇ ನನಗೆ ದಾರಿ ತೋರ್ಸು, ನಾನು ಅವಳಿಗೆ ಪ್ರೊಪೋಸ್ ಮಾಡಿ ತಪ್ಪು ಮಾಡ್ಲಿಲ್ಲ ಅಂದುಕೋತೀನಿ.

ಅವರು ಮಾತನಾಡುತ್ತಿದ್ದ ರೀತಿ ನೋಡಿದ್ರೆ ಅವರೇನು ಜಗಳ ಆಡಿರಲಿಲ್ಲ ಅನ್ನಿಸುತ್ತೆ. ಆದ್ರೆ ಮತ್ತೆ ಬೇರೆ ಏಕಾದ್ರು ? ಅಥವಾ ಅವರಿಬ್ಬರ ನಡುವೆ ಭಾವನೆಗಳಿದ್ದು ಅದನ್ನ ತೋರಿಸಿಕೊಳ್ಳೋಕೆ ಇಷ್ಟ ಪಡಲಿಲ್ಲವೋ? ಏನೇ ಇರಲಿ ಅವಳು ನನ್ನ ಪ್ರೀತಿ ಒಪ್ಪಿಕೊಂಡಿದಾಳೆ; ಯಾವುದೇ ಕಾರಣಕ್ಕೆ ಇರಬಹುದು; ಆದ್ರೆ ಈಗ ನನ್ನವಳು. ನಿರು ಅವಳ ಭೂತ ಕಾಲ. ಅವಳು ಅವನನ್ನ ಮರೆಯುತ್ತಾಳೆ ಕೂಡ. ಮರೆಯಲೇ ಬೇಕು. ಏನೇ ಇರಲಿ ನಾನವಲ್ಲನ್ನು ಪ್ರೀತಿಸುತ್ತೇನೆ ಅಷ್ಟೆ.

ದೇವರು:
ಸರಿ. ಇದು ಈ ಕಥೆಯ ಅಂತ್ಯ, ವಿಷೆಶವಾದದ್ದೇನು ಅಲ್ಲ; ಇದು ಎಲ್ಲ ಇತರೆ ಕಥೆಗಳಂತೆಯೇ. ಕೊನೆ ಘಳಿಗೆಯಲ್ಲಿ ನಾನು ನಡುವೆ ಬಂದು ಈ ಕಥೆಯ ಕೊನೆಯನ್ನು ಬದಲ್ಲಯಿಸುತ್ತೇನೆ ಅಂದುಕೊಂಡ್ರ?
ಬಸ್ಸು ಇನ್ನೇನು ಹೊರಡುತ್ತೆ ಅಂದಾಗ ಅವಳು ಓಡಿ ಹೋಗಿ ಬಸ್ಸು ಹತ್ತಿ ನಿರುನ ಜೊತೆ ಮುಂಬಯಿಗೆ ಹೋಗ್ತಾಳೆ ಅಥವಾ ನಿರು ಜಿಗಿದು ಬರ್ತಾನೆ ಅಥವಾ ರಾಜೇಶ್ಗೆ ಏನೋ ಇದೆ ಅಂತ ಅನ್ನಿಸಿ ಬೈಕಿನಲ್ಲಿ ಅವಳನ್ನ ಕೂಡಿಸಿಕೊಂಡು ಬಸ್ಸನ್ನ ಹಿಂಬಾಲಿಸಿ ಅವಳನ್ನ ನಿರು ಜೊತೆ ಕಳಿಸಿಕೊಡ್ತಾನೆ? ಹೀಗೆ? ಇಲ್ಲ. ಇದೇನು ಚಲನಚಿತ್ರ ಅಲ್ಲ. ಇದೇನು ರೀಲ್ ಕಥೆ ಅಲ್ಲ ರಿಯಲ್ ಕಥೆ.
ಅವಳು ಈ ನಿರ್ಧಾರವನ್ನ ಪ್ರತಿಯೊಂದು ಸನ್ನಿವೇಶವನ್ನು ತೂಗಿ ಅಳೆದು ತಗೆದುಕೊಂದಿದ್ದಾಳೆ. ನಾನೀಗ ಅಡ್ಡ ಹೋದರೆ ಅನ್ಯಾಯ ಮಾಡಿದಂತೆ. ನಾನು ಇದನ್ನು ಬದಲಾಯಿಸಿದರೆ ಅವಳ ಆಯ್ಕೆ ತಪ್ಪು ಅನ್ನೋ ನಿರ್ಧಾರ ಮಾಡಿದ ಹಾಗಲ್ವ? ಇದು ನಾನು ಮೋಸ ಮಾಡಿ ಹಾಗೆ ಅಲ್ವ? ಯಾವುದೇ ಕಾರಣ ಇಲ್ಲದೆ ಇತರರ ಕೆಲಸಗಳನ್ನು ಮಾಡಲು ಬರುವುದಿಲ್ಲ. ಅಲ್ಲವೇ?
ಮುಂಚೆನೇ ಹೇಳಿದ ಹಾಗೆ ನಾನು ಈ ಜಗತ್ತನ್ನ ಕೆಲವು ಸೂತ್ರಗಳ ಮೇಲೆ ಮಾಡಿದ್ದೇನೆ. ಈ ಪ್ರಪಂಚದ ಸಮತೋಲನ ದಿನ ನಿತ್ಯ ನಡೆಯುವ ಇಂತಹ ಘಟನೆಗಳ ಮೇಲೆ ಅವಲಂಬಿತ. ಯಾವುದೇ ಕ್ರಿಯೆ ಹೆಚ್ಚು ಅಥವಾ ಕಡಿಮೆ ಅಲ್ಲ. ಪ್ರತಿ ಕ್ಷಣ, ಸನ್ನಿವೇಶ, ಕ್ರಿಯೆಗೂ ಒಂದು ನಿರ್ಧಿಷ್ಟ ಕಾರಣವಿದೆ. ಅದು ನೇರವಾಗಿ ಪಾಲ್ಗೊಳ್ಳದೆ ಇದ್ರೂ ಅದರ ಪರಿಣಾಮ ಅನುಭವಕ್ಕೆ ಬರುತ್ತದೆ. ಮುಂಚೆ ಹೇಳಿದ ಹಾಗೆ ನಾನು ಮಧ್ಯ ಪ್ರವೇಶಿಸದೇ ನನ್ನ ಮಾತು ಉಳಿಸಿಕೊಂಡಿದ್ದೇನೆ. ಈಗ ನೀವು ಹೇಳಬಹುದು ಎಲ್ಲರ ಹಣೆಬರಹ ನಿರ್ಧರಿಸುವವ ನಾನೇ ಅಂತ. ಅದು ನಿಜ, ನಿತ್ಯನೂತನ. ಅಲ್ಲೇ ಒಳಗುಟ್ಟು ಇರುವುದು. ಅವಳು ರಾಜೇಶ್ ಜೊತೆ ಇರಬೇಕು ಅಂತ ನಿರ್ಧರಿಸಿದವ ನಾನೇ. ಅಷ್ಟೆ. ನಿಮಗೆ ಅರ್ಥ ಆಗುತ್ತೆ ಅಂತ ಅಂದುಕೊಂಡಿದಿನಿ. in fact ನಿಮಗೆ ಅರ್ಥ ಆಗೇ ಆಗುತ್ತೆ.... ಮತ್ತೆ ಅದೇ ನಿಮ್ಮ ಹಣೆ ಬರಹ ಏನು ಹೇಳುತ್ತೋ .....
-------------------------------------------------------------------------------------------------------------
ಇಷ್ಟು ದಿನ ಈ ಬರಹ ಸಹಿಸಿ ಕೊಂಡಿದ್ದಕ್ಕೆ ಧನ್ಯವಾದಗಳು (ನನ್ನಿ) :-)

Rating
No votes yet

Comments