ತ್ರಿಪದಿ ೧೭-೧೮-೧೯-೨೦

ತ್ರಿಪದಿ ೧೭-೧೮-೧೯-೨೦

ಬರಹ

ಹೊತ್ತೊತ್ತಿಗೆ ಎನಗೆ ಪ್ರೀತಿಯಿಂದ ತುತ್ತಾಕುವ
ಹೆತ್ತವರಲ್ಲಿ ಕಾಣದ ಪ್ರೀತಿಯ ತುತ್ತನ್ನು
ಬಿತ್ತವರಿಗೆ ನೀತಿ ಮರೆತವನಾದೆ ಪ್ರಭುಶಂಕರ

ಶರಣನಲ್ಲಿ ಶಿವನ ಸ್ಮರಣೆಯಿರಲು
ಹರಣದಲ್ಲಿ ನಡೆ ಸರಳವಿರಲು
ಮರಣದಲ್ಲಿ ನಗುವಿನ ಶಯನ ಕಾಣಯ್ಯ ಪ್ರಭುಶಂಕರ

ತನ್ವಂಗಿಯ ಕಂಡು ಆನನದಲ್ಲಿ
ತಂಗಿಯಂದು ಕರೆದು ಮನದಲ್ಲಿ
ಅಂಗಿ ಕಳಚುವ ಡೋಂಗಿಗಳುಂಟು ಪ್ರಭುಶಂಕರ

ಹಾಳೆ ಹಿಡಿದು ಗ್ರಹಗಳ ಓಳಿ ನೋಡಿ
ಬಾಳಿನ ಏಳಿಗೆ ಹೇಳಿ ಬದುಕಿನ
ಹಳಿ ತಪ್ಪಿಸುವವರು ಕಳ್ಳರಿಗಿಂತ ಕಡೆ ಪ್ರಭುಶಂಕರ