ಕ್ರಿಕೆಟಿಗ ಶ್ರೀಶಾಂತ್‌ಗೆ ಏನಾಗಿದೆ ?

ಕ್ರಿಕೆಟಿಗ ಶ್ರೀಶಾಂತ್‌ಗೆ ಏನಾಗಿದೆ ?

ಬರಹ

ಭಾರತೀಯ ಕ್ರಿಕೆಟಿಗ ಶ್ರೀಶಾಂತ್‌ಗೂ, ಕೀಟಲೆಗಳಿಗೂ ಅದೇನು ನಂಟಿದೆಯೋ ಗೊತ್ತಿಲ್ಲ. ತನ್ನ ಕ್ರಿಕೆಟ್ ಸಾಧನೆಗಿಂತಲೂ, ಮೈದಾನದಾಚೆಗಿನ ದಾಂಧಲೆಗಳಿಂದಾಗಿಯೇ ಶ್ರೀಶಾಂತ್ ಸುದ್ದಿಯಾದದ್ದು ಹೆಚ್ಚು. ದೊಡ್ಡ ಭರವಸೆ ಮೂಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಶ್ರೀಶಾಂತ್, ಈಗ ಕಾಲಿಟ್ಟಲ್ಲೆಲ್ಲಾ ದಾಂಧಲೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ, ನಗರದ ಅಪಾಟ್‌೯ಮೆಂಟ್ ಒಂದರಲ್ಲಿ ತಡರಾತ್ರಿ ಪಾಟಿ೯ ನಡೆಸಿ, ಸುದ್ದಿಯಾಗಿದ್ದಾರೆ. ಸ್ನೇಹಿತರೊಡನೆ, ಪಾಟಿ೯ ನಡೆಸುತ್ತಿದ್ದ ಶ್ರೀ, ರಾತ್ರಿ ಪೂತಿ೯ ಗಲಾಟೆ ಮಾಡಿದ್ದನಂತೆ. ಅಬ್ಬರದ ಸಂಗೀತವಂತೂ ಇದ್ದೇ ಇತ್ತು. ಇದೆಲ್ಲಾ ಬೇಡಪ್ಪಾ, ನಮಗೆ ತೊಂದರೆಯಾಗುತ್ತಿದೆ ಎಂದು ಅಪಾಟ್‌೯ಮೆಂಟ್ ನಿವಾಸಿಗಳು ಶ್ರೀಗೆ ಮನವಿ ಮಾಡಿದ್ದರಂತೆ. ಆದರೆ, ಅವರೊಂದಿಗೆ ಶ್ರೀ ಜಗಳ ಕಾಯ್ದನಂತೆ. ಬೇರೆ ದಾರಿ ಕಾಣದೆ, ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸಾವ೯ಜನಿಕ ನೆಮ್ಮದಿಗೆ ಭಂಗ ತಂದದ್ದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ. ಪೊಲೀಸರಿಗೆ ಶ್ರೀ ಕಾಟ ಇದೇನು ಹೊಸದಲ್ಲ ಬಿಡಿ.

ಹಿಂದೊಮ್ಮೆ, ಅಶೋಕಾ ಹೊಟೇಲ್‌ನಲ್ಲಿ ಎಸಿ ವಿವಾದದ ಬಿಸಿ ಎಬ್ಬಿಸಿ, ವಿವಾದ ಎಳೆದುಕೊಂಡಿದ್ದ. ಆ ಬಳಿಕ ನಡುರಾತ್ರಿ ವಿಧಾನಸೌಧದ ಬಳಿ ಅಪಘಾತ ನಡೆಸಿ, ಪೊಲೀಸರಿಗೆ ಕಿರಿಕಿರಿ ಉಂಟುಮಾಡಿದ್ದ. ಇದೀಗ ಮತ್ತೆ ಕಿತಾಪತಿ ಮಾಡಿದ್ದಕ್ಕೆ, ಪೊಲೀಸರು ಉರಿದು ಹೋಗಿದ್ದಾರೆ. ಶ್ರೀಶಾಂತನನ್ನು ಕರೆಸಿ ಸಾಕಷ್ಟು ಬುದ್ದಿ ಹೇಳಿದ್ದಾರೆ. ರಾಷ್ಟ್ರೀಯ ಖ್ಯಾತಿ ಗಳಿಸಿರೋದ್ರಿಂದ, ಇಂತಹ ವತ೯ನೆಗಳು ಯುವಕರನ್ನು ಹಾದಿ ತಪ್ಪಿಸಬಹುದು. ಎಚ್ಚರಿಕೆಯಿಂದ ವತಿ೯ಸಿ ಅಂದಿದ್ದಾರೆ. ಆದರೆ, ಮೂಗಿನ ಮೇಲೆಯೇ ಕೋಪ ಇಟ್ಟುಕೊಂಡು ತಿರುಗಾಡೋ ಶ್ರೀಶಾಂತ್‌ಗೆ ಇದೆಲ್ಲಾ ಅಥ೯ ಆಗತ್ತಾ ? ಕಿರಿಯ ವಯಸ್ಸಿನಲ್ಲೇ ಹಣ- ಕೀತಿ೯ ಬಂದಿರೋ ಮದ ಏನಾದ್ರೂ ಈ ವತ೯ನೆಗೆ ಪ್ರೇರೇಪಿಸತ್ತಾ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet