ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?

ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?


"ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ."
-ವಿನೋಬಾ ಭಾವೆ

ಸಂಪದದಲ್ಲಿ ಈ ನುಡಿಮುತ್ತನ್ನ ಎಲ್ಲರೂ ಒಂದು ಸಲವಾದರೂ ಓದಿರ್ತೀರ. ನಾವು ಯಾವಾಗಲೂ ಇನ್ನೊಬ್ಬರಲ್ಲಿಯ (ಒಳ್ಳೆಯ)ಗುಣಗಳನ್ನ ನಮ್ಮಲ್ಲಿ ತರಲು ಪ್ರಯತ್ನಿಸುತ್ತಿರುತ್ತೇವೆ. ಅದು ಸಹಜ ಕ್ರಿಯೆ.

ಈ ನುಡಿಮುತ್ತಿನ ವಿಚಾರ ಬಹಳ ದಿನಗಳಿಂದ ಕಾಡುತ್ತಿದೆ. ಬಲ್ಲವರು ಇದರ ಅರ್ಥವನ್ನ ತಿಳಿಸುವಿರಾ...
ಧನ್ಯವಾದಗಳು
-ಸವಿತ

Rating
No votes yet

Comments