ಮುಂಬಯಿ ಉಗ್ರರ ದಾಳಿಯಲಿ ಭಾರತಮಾತೆಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿದ ನನ್ನ ಸೈನಿಕ ಸ್ನೇಹಿತರಿಗೆ

ಮುಂಬಯಿ ಉಗ್ರರ ದಾಳಿಯಲಿ ಭಾರತಮಾತೆಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿದ ನನ್ನ ಸೈನಿಕ ಸ್ನೇಹಿತರಿಗೆ

ಬರಹ

ಓ ಗೆಳೆಯರೆ ನೀವಿಲ್ಲ
ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ್ಲ

ನಿಮ್ಮ ನೆನಪು ಸದಾ ಹಸಿರಾಗಿರಲಿ
ನಿಮ್ಮ ಚೇತನ ದಿವ್ಯ ಶಾಂತಿ ಪಡೆಯಲಿ

ಹೃದಯವಿರದ ಉಗ್ರರ ಹುಟ್ಟಡಗಿಸಿ
ದೇವರನು ಕಾಣಲು ಹೋರಟು ಹೋದಿರಲ್ಲ
ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ್ಲ

ನೀರಸಾಗರದೊಳಗಣ ಈಜಿ ಬಂದು
ರಕ್ತಸಾಗರವನು ಹರಿಸಿದವರ ರಕ್ತವನು ವೀರಮಾತೆಗೆ ಅರ್ಪಿಸಿಹೋದಿರಲ್ಲ
ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ್ಲ

ಜಾತಿಭೇದ ರಕ್ತಭೇದವನು ಮರೆತು ಹೋರಾಡಿ
ನೂರಾರು ಜನರಿಗೆ ಪುನರ್ಜನ್ಮದಾತರೆನಿಸಿದಿರಲ್ಲ
ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ್ಲ

ನಮ್ಮ ಬಂಧುಗಳನು ರಕ್ಷಿಸಿ
ನಿಮ್ಮ ಬಂಧುಗಳನು ಅನಾಥರಾಗಿಸಿ ಹೋರಟುಹೊದಿರಲ್ಲ
ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ್ಲ

ಕೋಮುದ್ವೇಶದ ಕಾಳ್ಕಿಚ್ಚಿನಿಂದ ಹತ್ತಿಉರಿಯುತಿದ್ದ ದೇಶವನು ರಕ್ಷಿಸಿ
ಅದೇ ಜ್ವಾಲೆಯಲಿ ಬೂಧಿಯಾಗಿಹೋದಿರಲ್ಲ
ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ್ಲ

ಲಂಚಕೋರ ರಾಜಕೀಯದ ಕೈಯಲ್ಲಿ ನರಳುತ್ತಿರುವ ಭಾರತಮಾತೆಯನು ರಕ್ಷಿಸಲು
ಪ್ರತಿ ಮಾನವನೊಳು ನೀವು ಹುಟ್ಟಿಬರಲಿ...